ಆ್ಯಪ್ನಗರ

ಶಾಶ್ವತ ಪುನರ್ವಸತಿಗೆ ಸ್ಥಳ ವೀಕ್ಷಣೆ

ಶಿರಸಿ : ತಾಲೂಕಿನ ವಾನಳ್ಳಿ ಸಮೀಪ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಜಿಗುಡ್ಡೆ ಭೂ ಕುಸಿತ ಪ್ರದೇಶಕ್ಕೆ ಜೀವವೈವಿಧ್ಯ ಮಂಡಳಿ ಹಾಗೂ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಶುಕ್ರವಾರ ಭೇಟಿ ನೀಡಿದರು.

Vijaya Karnataka 15 Aug 2020, 5:00 am
ಶಿರಸಿ : ತಾಲೂಕಿನ ವಾನಳ್ಳಿ ಸಮೀಪ ಕೊಡ್ನಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಜಿಗುಡ್ಡೆ ಭೂ ಕುಸಿತ ಪ್ರದೇಶಕ್ಕೆ ಜೀವವೈವಿಧ್ಯ ಮಂಡಳಿ ಹಾಗೂ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಶುಕ್ರವಾರ ಭೇಟಿ ನೀಡಿದರು.
Vijaya Karnataka Web 14SRS8B_26
ಜಾಜಿಗುಡ್ಡೆ ಭೂ ಕುಸಿತ ಸ್ಥಳ. ಪುನರ್ವಸತಿ ಸ್ಥಳಕ್ಕೆ ಭೂ ಕುಸಿತ ಅಧ್ಯಯನ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭೇಟಿ ನೀಡಿದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ


ಮನೆ ತ್ಯಜಿಸಲು ಗ್ರಾಮದ ಜನರ ಮನವೊಲಿಕೆ ಮಾಡಲಾಯಿತಲ್ಲದೇ ಶಾಶ್ವತ ಪುನರ್ವಸತಿ ನಿರ್ಮಿಸಲು ಸ್ಥಳ ವೀಕ್ಷಣೆ ಮಾಡಲಾಯಿತು. ಗುಡ್ಡ ಸೀಳಿದೆ. ಮಳೆ ಬೀಳುತ್ತಲೇ ಇದೆ. ಜಲ ಒತ್ತಡದಿಂದ ಇಡೀ ಗುಡ್ಡ ಒತ್ತಿಕೊಂಡು ಕೆಳಗೆ ಬರಲಿದೆ ಎಂದು ಜಿಲ್ಲಾಭೂ ವಿಜ್ಞಾನ ಅಧಿಕಾರಿಗಳು ಎಚ್ಚರಿಸಿದರು.

ಪುನರ್ವಸತಿ ಆಗುವವರೆಗೆ.. ಎರಡು ಕಿ.ಮೀ ಉದ್ದ ಬೆಟ್ಟ ಬಾಯ್ದೆರದು ನಿಂತಿದೆ. ಕೆಳಭಾಗದಲ್ಲಿಈಗಾಗಲೇ ಹತ್ತು ಸ್ಥಳಗಳಲ್ಲಿಭೂ ಕುಸಿತ ಆಗಿದೆ. ಜಾಜಿಗುಡ್ಡೆಯ ಮನೆಗಳು ಯಾವುದೇ ಕ್ಷಣದಲ್ಲಿನೆಲಸಮವಾಗುವ ತುರ್ತು ಪರಿಸ್ಥಿತಿ ಇದೆ. ಈ ಹಳ್ಳಿಯ 9 ಕುಟುಂಬಗಳ 48 ಜನರು ಈ ಮನೆಗಳಲ್ಲಿವಾಸ ಮಾಡಲೇಬಾರದು ಎಂದು ಅನಂತ ಹೆಗಡೆ ಅಶೀಸರ ಹಾಗೂ ಜಿಪಂ ಸದಸ್ಯ ಜಿ.ಎನ್‌. ಹೆಗಡೆ ಮುರೇಗಾರ ಮನವಿ ಮಾಡಿದರು. ಪುನರ್ವಸತಿ ಆಗುವವರೆಗೆ ಪಕ್ಕದ ಹಳ್ಳಿಗಳಲ್ಲಿ, ಬಂಧುಗಳ ಮನೆಗಳಲ್ಲಿವಾಸ ಮಾಡುತ್ತೇವೆ ಎಂದು ನಿವಾಸಿಗಳು ಮನೆ ತೆರವು ಮಾಡಲು ಒಪ್ಪಿಗೆ ಸೂಚಿಸಿದರು.

ತಾಪಂ ಸದಸ್ಯೆ ಯಶೋಧಾ, ಜಿಲ್ಲಾಗಣಿ- ಭೂ ವಿಜ್ಞಾನ ಇಲಾಖೆ ಅಧಿಕಾರಿ ಸೋಮಶೇಖರ, ಅರಣ್ಯ ಅಧಿಕಾರಿಗಳಾದ ರಘು, ಬಸವರಾಜ್‌, ಉಪತಹಶೀಲ್ದಾರ್‌ ರಮೇಶ ಇದ್ದರು.

ಪುನರ್ವಸತಿಗೆ ಸೂಚನೆ : ಜಾಜಿಗುಡ್ಡೆಯಿಂದ 1 ಕಿ.ಮೀ ದೂರದಲ್ಲಿಸಮತಟ್ಟು ಪ್ರದೇಶದಲ್ಲಿರುವ ಬೆಟ್ಟ ಭೂಮಿಯಲ್ಲಿಪುನರ್‌ವಸತಿ ಕೈಗೊಳ್ಳಲು ಇದೇ ಸಂದರ್ಭದಲ್ಲಿನಡೆದ ರೈತರು, ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳ ಸಭೆ ನಿರ್ಧಾರ ಕೈಗೊಂಡಿತು. ವಿಧಾನಸಭಾ ಅಧ್ಯಕ್ಷರು, ಜಿಲ್ಲಾಉಸ್ತುವಾರಿ ಸಚಿವರ ಮಾರ್ಗದರ್ಶನ, ಜಿಲ್ಲಾಧಿಕಾರಿ ಆದೇಶ ಪಡೆದು ಪುನರ್‌ವಸತಿ ಕಾರ್ಯ ತಕ್ಷಣ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಶೀಸರ ಸೂಚಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ