ಆ್ಯಪ್ನಗರ

ಲಾಭದಲ್ಲಿಎಲ್‌ಎಸ್‌ಎಮ್‌ಪಿ ಸೊಸೈಟಿ

ಯಲ್ಲಾಪುರ : ಪಟ್ಟಣದ ಎಲ್‌.ಎಸ್‌.ಎಮ್‌.ಪಿ ಸೊಸೈಟಿಯು ಪ್ರಸ್ತುತ 69ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸದಸ್ಯರ, ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಉತ್ತಮ ಸಹಕಾರದಿಂದ ಸೊಸೈಟಿಯು ಉತ್ತಮವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಸಂಘಕ್ಕೆ 31,83,660 ರೂ. ನಿವ್ವಳ ಲಾಭವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ನಾಗರಾಜ ಕೌಡಿಕೆರೆ ಹೇಳಿದರು.

Vijaya Karnataka 15 Sep 2019, 5:00 am
ಯಲ್ಲಾಪುರ : ಪಟ್ಟಣದ ಎಲ್‌.ಎಸ್‌.ಎಮ್‌.ಪಿ ಸೊಸೈಟಿಯು ಪ್ರಸ್ತುತ 69ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಸದಸ್ಯರ, ಸಿಬ್ಬಂದಿಗಳ ಹಾಗೂ ಸಾರ್ವಜನಿಕರ ಉತ್ತಮ ಸಹಕಾರದಿಂದ ಸೊಸೈಟಿಯು ಉತ್ತಮವಾಗಿ ಆರ್ಥಿಕ ಪ್ರಗತಿಯನ್ನು ಸಾಧಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಸಂಘಕ್ಕೆ 31,83,660 ರೂ. ನಿವ್ವಳ ಲಾಭವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ನಾಗರಾಜ ಕೌಡಿಕೆರೆ ಹೇಳಿದರು.
Vijaya Karnataka Web lsmp society at profit
ಲಾಭದಲ್ಲಿಎಲ್‌ಎಸ್‌ಎಮ್‌ಪಿ ಸೊಸೈಟಿ


ಶನಿವಾರ ಸೊಸೈಟಿಯಲ್ಲಿಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಪಟ್ಟಣದ ಶಾಖೆಯಲ್ಲಿಹಾಗೂ ನಂದೊಳ್ಳಿ ಶಾಖೆಯಲ್ಲಿಉತ್ತಮ ವ್ಯವಹಾರ ನಡೆಯುತ್ತಿದೆ. ಸೊಸೈಟಿಯು ನಾಗಾಲೋಟದಲ್ಲಿಪ್ರಗತಿ ಸಾಧಿಸುತ್ತಿದೆ. ಕೇವಲ ಸಾಲ ವಿತರಣೆ, ವಸೂಲಾತಿ ಮಾತ್ರವಲ್ಲ, ರೈತರ ಹಿತದೃಷ್ಟಿಯಿಂದ ರೈತರ ಮಹಸೂಲನ್ನೂ ಸಹ ಸೊಸೈಟಿಯ ಮೂಲಕ ವಿಕ್ರಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಟಿ.ಎಮ್‌.ಎಸ್‌ ಹಾಗೂ ಟಿ.ಎಸ್‌.ಎಸ್‌.ಎಸ್‌ ಸಂಸ್ಥೆಗಳ ಮೂಲಕವೂ ಸೊಸೈಟಿಯು ಅಡಕೆ ವಿಕ್ರಿ ಮಾಡಿ ಉತ್ತಮ ವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿಆ ಸಂಸ್ಥೆಗಳಿಂದಲೂ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ಸಿಕ್ಕಿದೆ. ಠೇವಣಿ ಹಾಗೂ ದುಡಿಯುವ ಬಂಡವಾಳ ವಿಭಾಗದಲ್ಲಿಯೂ ಹೆಚ್ಚಿನ ಪ್ರಗತಿಯಾಗಿದೆ. ಸೊಸೈಟಿ ವತಿಯಿಂದ ಸದಸ್ಯರಿಗೆ ಆಪತ್‌ ನಿಧಿ ಹಾಗೂ ಸದಸ್ಯರು ಮೃತಪಟ್ಟರೆ ಅವರ ಕುಟುಂಬಕ್ಕೆ ಅಂತ್ಯ ಸಂಸ್ಕಾರ ನಿಧಿ ನೀಡಲಾಗುತ್ತಿದೆ. ರೈತರ ಸಾಲ ಮನ್ನಾ ಯೋಜನೆಯಲ್ಲಿಸೊಸೈಟಿಯ 400ಕ್ಕೂ ಹೆಚ್ಚು ಜನರ ಸಾಲ ಮನ್ನಾ ಆಗಿದೆ. ಇನ್ನಷ್ಟು ರೈತರ ಸಾಲ ಮನ್ನಾ ಆಗಲಿದೆ ಎಂದ ಅವರು, ಫಸಲ್‌ ಭಿಮಾ ಯೋಜನೆಯ ಕಂತು ಭರಣ ಮಾಡುವ ಈಗಿರುವ ಅವಧಿಯನ್ನು ಜೂ.30ರ ವರೆಗೆ ಇನ್ನಷ್ಟು ವಿಸ್ತರಿಸಬೇಕು ಎಂದು ಆಗ್ರಹಿಸಿದರು. ಸೊಸೈಟಿಯ ಆವಾರದಲ್ಲಿವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಅ.23 ರಂದು ಬೆಳಗ್ಗೆ ಸ್ವರ್ಣವಲ್ಲೀ ಶ್ರೀಗಳು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕ ಆರ್‌.ಎಸ್‌.ಭಟ್ಟ ಮಾತನಾಡಿ, ಸಿಬ್ಬಂದಿ ಹಾಗೂ ನಿರ್ದೇಶಕರ, ಸಾರ್ವಜನಿಕರ ಸಹಕಾರ ಸೊಸೈಟಿ ಶ್ರೇಯಸ್ಸಿಗೆ ಕಾರಣ ಎಂದರು. ಈ ಸಂದರ್ಭದಲ್ಲಿನಿದೇರ್ಶಕರಾದ ಸುಬ್ರಾಯ ಭಟ್ಟ, ಸಂತೋಷ ನಾಯ್ಕ, ಅಪ್ಪು ಆಚಾರಿ, ಗೌರಿ ಶಿರಾಲಿ, ವ್ಯವಸ್ಥಾಪ ಎಮ್‌.ಎಸ್‌.ಹೆಗಡೆ ಮುಂತಾದವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ