ಆ್ಯಪ್ನಗರ

ಗೋಕರ್ಣದಲ್ಲಿಮಹಾಬಲೇಶ್ವರ ವಿಜಯೋತ್ಸವ

ಗೋಕರ್ಣ : ವಿಜಯದಶಮಿ ನಿಮಿತ್ತ ಗೋಕರ್ಣದಲ್ಲಿಮಹಾಬಲೇಶ್ವರ ವಿಜಯೋತ್ಸವ ಮತ್ತು ಸೀಮೋಲ್ಲಂಘನ ನಡೆಯಿತು.

Vijaya Karnataka 11 Oct 2019, 5:00 am
ಗೋಕರ್ಣ : ವಿಜಯದಶಮಿ ನಿಮಿತ್ತ ಗೋಕರ್ಣದಲ್ಲಿಮಹಾಬಲೇಶ್ವರ ವಿಜಯೋತ್ಸವ ಮತ್ತು ಸೀಮೋಲ್ಲಂಘನ ನಡೆಯಿತು.
Vijaya Karnataka Web 10 GKN 2 A_24


ಸಂಜೆ ಮಂದಿರದಿಂದ ಹೊರಟ ಶ್ರೀದೇವರ ಪಲ್ಲಕ್ಕಿ ಉತ್ಸವ ಭದ್ರಕಾಳಿ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸ್ವೀಕರಿಸಿತು. ತರುವಾಯ ಹತ್ತಿರದಲ್ಲಿನ ಪಾರಂಪರಿಕ ಅಶ್ವತ್ಥ ಕಟ್ಟೆಗೆ ಭೇಟಿ ನೀಡಿತು. ಅಲ್ಲಿಮಹಾಬಲೇಶ್ವರನಿಗೆ ಶಮಿ ಪತ್ರ ಸಮರ್ಪಿಸಿ ಧೂಪಾರತಿ ಕೈಗೊಳ್ಳಲಾಯಿತು. ಭಕ್ತರಿಗೆ ಬನ್ನಿ ಪತ್ರೆಯನ್ನು ಪ್ರಸಾದರೂಪದಲ್ಲಿವಿತರಿಸಲಾಯಿತು. ಕೊನೆಯಲ್ಲಿಸೀಮೋಲ್ಲಂಘನ ಮಾಡಿ ಪದ್ಧತಿಯಂತೆ ಊರ ಪ್ರವೇಶ ದ್ವಾರದ ದಸರೆ ಮಂಟಪದಲ್ಲಿಉದ್ಯಮಿ ಆರ್‌.ಎನ್‌.ನಾಯಕ ಕುಟುಂಬದವರಿಂದ ವಿಶೇಷ ಪೂಜೆ ಸ್ವೀಕರಿಸಿ ಉತ್ಸವ ಮಂದಿರಕ್ಕೆ ಮರಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ