ಆ್ಯಪ್ನಗರ

ಮನೆಯ ಸುತ್ತ ಸ್ವಚ್ಛತೆ ಕಾಪಾಡಿ

ಮುಂಡಗೋಡ : ತಾಲೂಕಿನ ಅರಶಿಣಗೇರಿ ಹಾಗೂ ಮಲವಳ್ಳಿ ಗ್ರಾಮದಲ್ಲಿ ನಾಲ್ಕು ಜನರಿಗೆ ಶಂಕಿತ ಡೆಂಗೆ ಜ್ವರದ ಲಕ್ಷ ಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯವರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಲ್ಲಿ ಮುಂಜಾಗೃತಾ ಕ್ರಮದ ಕುರಿತು ಮಂಗಳವಾರ ಜಾಗೃತಿ ಮೂಡಿಸಿದರು.

Vijaya Karnataka 17 Jul 2019, 5:00 am
ಮುಂಡಗೋಡ : ತಾಲೂಕಿನ ಅರಶಿಣಗೇರಿ ಹಾಗೂ ಮಲವಳ್ಳಿ ಗ್ರಾಮದಲ್ಲಿ ನಾಲ್ಕು ಜನರಿಗೆ ಶಂಕಿತ ಡೆಂಗೆ ಜ್ವರದ ಲಕ್ಷ ಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯವರು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರಲ್ಲಿ ಮುಂಜಾಗೃತಾ ಕ್ರಮದ ಕುರಿತು ಮಂಗಳವಾರ ಜಾಗೃತಿ ಮೂಡಿಸಿದರು.
Vijaya Karnataka Web maintain cleanliness around the house
ಮನೆಯ ಸುತ್ತ ಸ್ವಚ್ಛತೆ ಕಾಪಾಡಿ


ಆರೋಗ್ಯ ಇಲಾಖೆಯಿಂದ ನಾಲ್ವರು ಶಂಕಿತ ಡೆಂಗೆ ರೋಗಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕಳುಹಿಸಲಾಗಿತ್ತು. ಇವರ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರಲ್ಲಿ ಇಬ್ಬರು ಸದ್ಯ ಸ್ವಲ್ಪ ಗುಣಮುಖರಾಗಿದ್ದು, ಮತ್ತೊಬ್ಬರು ಮುಂಡಗೋಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೋಬ್ಬರು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಾಗೃತಿಗೆ ಸೂಚನೆ: ಆರೋಗ್ಯ ಇಲಾಖೆಯವರು ಅರಶಿಣಗೇರಿ ಗ್ರಾಮಕ್ಕೆ ಭೇಟಿ ಜಾಗೃತಿ ಮೂಡಿಸಿದರು. ಮನೆಯ ಸುತ್ತಲು ಸ್ವಚ್ಛತೆ ಕಾಪಾಡಬೇಕು. ಮನೆಯ ಅಕ್ಕ ಪಕ್ಕದಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಹಾಗೂ ಮನೆಯಲ್ಲಿ ನೀರು ಸಂಗ್ರಹ ಮಾಡುವ ಬ್ಯಾರಲ್‌ಗಳ ಮೇಲೆ ಮುಚ್ಚಳಿಕೆ ಹಾಕಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಕೆ ಮಾಡಬೇಕು. ಜ್ವರ ಕಾಣಿಸಿಕೊಂಡರೆ ತಕ್ಷ ಣ ಆಸ್ಪತ್ರೆಗೆ ಭೇಟಿನೀಡಬೇಕು ಎಂದು ಮಾಹಿತಿ ನೀಡಿದರು.

ಜಿಲ್ಲಾ ಆರೋಗ್ಯ ಇಲಾಖೆಯವರು ಭೇಟಿ: ಅರಶಿಣಗೇರಿ ಗ್ರಾಮಕ್ಕೆ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ರಮೇಶರಾವ್‌, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಗಿರೀಧರ ಕಾಮತ್‌, ಜಿಲ್ಲಾ ಕೀಟ ಶಾಸ್ತ್ರಜ್ಞ ಜೋಸ್ನಾ ಕೈರನ್‌, ಆರೋಗ್ಯ ನೀರಿಕ್ಷ ಕ ರಾಜು ತಳೆಕರ, ಎನ್‌.ಎಚ್‌.ಹಿರೇಮಠ, ಆರೋಗ್ಯ ಶಿಕ್ಷ ಣಾಧಿಕಾರಿ ಎಸ್‌.ಎಸ್‌.ಪಟ್ಟಣಶೇಟ್ಟಿ, ಸಿಬ್ಬಂದಿ ಮರಿಯಮ್ಮ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರೆಯರು ಭೇಟಿ ನೀಡಿದರು. ಈ ನಾಲ್ವರ ರಕ್ತದ ವರದಿ ಬಂದ ನಂತರ ಮತ್ತಷ್ಟು ಮುಂಜಾಗೃತ ಕ್ರಮಗಳನ್ನು ಜರುಗಿಸಲು ಕ್ರಮ ವಹಿಸಲಾಗುವುದು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ