ಆ್ಯಪ್ನಗರ

ಮಕ್ಕಳಿಗೆ ಒಳಿತು ಕೆಡುಕುಗಳ ಅರಿವು ಮೂಡಿಸಿ

ಕಾರವಾರ: ಮಕ್ಕಳು ನಮ್ಮ ದೇಶದ ಬಹು ಅಮೂಲ್ಯ ಆಸ್ತಿ. ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡುವಲ್ಲಿನಾವೆಲ್ಲರೂ ಶ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್‌ ಹೇಳಿದರು.

Vijaya Karnataka 16 Nov 2019, 5:00 am
ಕಾರವಾರ: ಮಕ್ಕಳು ನಮ್ಮ ದೇಶದ ಬಹು ಅಮೂಲ್ಯ ಆಸ್ತಿ. ಮಕ್ಕಳ ರಕ್ಷಣೆ ಮತ್ತು ಪೋಷಣೆ ಮಾಡುವಲ್ಲಿನಾವೆಲ್ಲರೂ ಶ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್‌ ಹೇಳಿದರು.
Vijaya Karnataka Web make children aware of the pros and cons
ಮಕ್ಕಳಿಗೆ ಒಳಿತು ಕೆಡುಕುಗಳ ಅರಿವು ಮೂಡಿಸಿ


ಅವರು ಮಕ್ಕಳ ಸಹಾಯವಾಣಿ, ಕೆ.ಡಿ.ಡಿ.ಸಿ. ಕಾರವಾರ, ಸ್ಕೋಡ್‌ವೆಸ್‌ ಶಿರಸಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿಗುರುವಾರ ಹಮ್ಮಿಕೊಂಡ, ಮಕ್ಕಳ ಸಹಾಯವಾಣಿಯೊಂದಿಗೆ 'ಮೈತ್ರಿ ಸಪ್ತಾಹ- 2019' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಸೂಕ್ತ ಶಿಕ್ಷಣ, ಮಾರ್ಗದರ್ಶನ ಮತ್ತು ನೈತಿಕ ಮೌಲ್ಯಾಧಾರಿತ ಜೀವನ ಶೈಲಿ ರೂಪಿಸುವಲ್ಲಿನಮ್ಮೆಲ್ಲರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಹೇಳಿದರು.

ಜಿಲ್ಲಾಅಪರಾಧ ಗುಪ್ತ ವಾರ್ತಾ ಘಟಕದ ಅಧಿಕಾರಿ ವಿನ್ಸೆಂಟ್‌ ಫರ್ನಾಂಡಿಸ್‌ ಮಾತನಾಡಿ, ಸಮಾಜದಲ್ಲಿಮಕ್ಕಳ ಮೇಲಾಗುವ ಅಹಿತಕರ ಘಟನೆಗಳ ಮತ್ತು ಒಳಿತು ಕೆಡುಕುಗಳ ಬಗ್ಗೆ ಮಕ್ಕಳಲ್ಲಿಜಾಗೃತಿಯನ್ನು ನೀಡಬೇಕು. ಮಕ್ಕಳು ಸಹಾಯವಾಣಿಯ ಸೇವೆಯನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.

ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆಯ ಉಪನಿರೀಕ್ಷಕಿ ಪದ್ಮಾ ದೇವಳಿ ಮಾತನಾಡಿ, ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಗಮನ ಕೊಡಬೇಕು. ಮಕ್ಕಳ ಹಕ್ಕುಗಳ ಅರಿವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬೇಕು. ಈ ಬಗ್ಗೆ ಪೋಷಕರು ಹೆಚ್ಚಿನ ಗಮನ ಮತ್ತು ಜಾಗೃತಿ ವಹಿಸಬೇಕೆಂದು ಹೇಳಿದರು.

ಮಕ್ಕಳ ಸಹಾಯವಾಣಿಯ ಜಿಲ್ಲಾಸಂಯೋಜಕ ಮಾರುತಿ ನಾಯ್ಕ, ತಾಲೂಕು ಸಂಯೋಜಕಿ ದಾನೇಶ್ವರಿ ಹಿರೇಮಠ ವಿದ್ಯಾರ್ಥಿನಿ ನಾಗಮ್ಮ ಉಪಸ್ಥಿತರಿದ್ದರು. ಮಕ್ಕಳ ಸಹಾಯವಾಣಿಯ ಆಪ್ತಸಮಾಲೋಚಕ ಸಾವೇರ್‌ ಫರ್ನಾಂಡಿಸ್‌ ನಿರೂಪಿಸಿದರು. ಸುಬ್ರಮಣ್ಯ ಶಿರೂರ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ