ಆ್ಯಪ್ನಗರ

ಗಾಂಧೀಜಿ ಆದರ್ಶ ಮೈಗೂಡಿಸಿಕೊಳ್ಳಿ

ಶಿರಸಿ : ಗಾಂಧೀಜಿಯವರು ಬಹಳ ಸರಳ ಮತ್ತು ಶ್ರಮಜೀವಿಗಳಾಗಿದ್ದರು. ಅವರು ದೇಶದ ಸ್ವಾತಂತ್ರತ್ರ್ಯಕ್ಕಾಗಿ ಅವಿರತ ಪರಿಶ್ರಮ ಪಟ್ಟವರು ಎಂದು ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ಭಟ್ಟ ಹೇಳಿದರು.

Vijaya Karnataka 28 Sep 2019, 5:00 am
ಶಿರಸಿ : ಗಾಂಧೀಜಿಯವರು ಬಹಳ ಸರಳ ಮತ್ತು ಶ್ರಮಜೀವಿಗಳಾಗಿದ್ದರು. ಅವರು ದೇಶದ ಸ್ವಾತಂತ್ರತ್ರ್ಯಕ್ಕಾಗಿ ಅವಿರತ ಪರಿಶ್ರಮ ಪಟ್ಟವರು ಎಂದು ನಿವೃತ್ತ ಪ್ರಾಧ್ಯಾಪಕ ಸೂರ್ಯನಾರಾಯಣ ಭಟ್ಟ ಹೇಳಿದರು.
Vijaya Karnataka Web make gandhiji ideal
ಗಾಂಧೀಜಿ ಆದರ್ಶ ಮೈಗೂಡಿಸಿಕೊಳ್ಳಿ


ಕೃಷಿ ವಿಶ್ವವಿದ್ಯಾಲಯ ಧಾರವಾಡ, ಅರಣ್ಯ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ ನವದೆಹಲಿ ಸಹಯೋಗದಲ್ಲಿಇಲ್ಲಿಯ ಅರಣ್ಯ ಮಹಾವಿದ್ಯಾಲಯದಲ್ಲಿರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ವಿದ್ಯಾಧಿಕಾರಿ ಐ.ಎಸ್‌.ಕಟಗೇರಿ, ಗಾಂಧೀಜಿಯ ಆದರ್ಶ ಗುಣ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಳವಡಿಸಿಕೊಳ್ಳುವುದರ ಮೂಲಕ ದೇಶದ ಒಳ್ಳೆಯ ನಾಗರಿಕರಾಗಬೇಕು ಎಂದರು.

ಮಹಿಳಾ ಸಾಂತ್ವನ ವೇದಿಕೆ ಸದಸ್ಯೆ ಶೈಲಜಾ ಗೋರನಮನೆ, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳಾದ ರಮೇಶ ರಾಥೋಡ್‌ ಮತ್ತು ಹನುಮಂತ. ಎಂ.ಉಪಸ್ಥಿತರಿದ್ದರು.

ಸಪ್ತಾಹದಲ್ಲಿಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಘೋಷಣಾವಾಕ್ಯಗಳ ಬರವಣಿಗೆ,ಕಿರುನಾಟಕ, ಚಿತ್ರಕಲೆ, ಸ್ವಚ್ಛತೆ, ಶಾಂತಿ ಮತ್ತು ಅಹಿಂಸೆಯ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿಯವರ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಅವರ ವಿಚಾರಧಾರೆಗಳು ಮತ್ತು ಚಿಂತನೆ ವಿಷಯ ವಸ್ತುವನ್ನಾಗಿ ಇಟ್ಟುಕೊಂಡಿರುವುದು ವಿಶೇಷವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ