ಕಾರವಾರ : ವಿವಿಧ ಕ್ರಮಗಳನ್ನು ಕೈಗೊಂಡು ಜಿಲ್ಲೆಯಲ್ಲಿಸಮರ್ಪಕವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, ಮತದಾರರ ಪಟ್ಟಿ ನೋಂದಣಿ ಕಾರ್ಯವನ್ನು ಯಶಸ್ವಿಗೊಳಿಬೇಕೆಂದು ಉತ್ತರ ಕನ್ನಡ ಜಿಲ್ಲಾಮತದಾರರ ಪಟ್ಟಿ ಪರೀಕ್ಷಣೆ ವೀಕ್ಷಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜಕುಮಾರ ಪಾಂಡೆ ಅವರು ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿಜಿಲ್ಲಾಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ನೋಂದಣಾಧಿಕಾರಿಗಳ ಜತೆ ಸಭೆ ನಡೆಸಿ, ಕ್ರಮಬದ್ಧವಾಗಿ ಮತದಾರರ ಪಟ್ಟಿ ತಯಾರಿಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಮತದಾರರ ಪಟ್ಟಿಯಲ್ಲಿಮತದಾರರು ತಮ್ಮ ಹೆಸರನ್ನು ನೋಂದಾಯಿಸಲು ಅದರಲ್ಲೂ18-19 ವರ್ಷದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿನೋಂದಾಯಿಸುವಂತೆ ಪ್ರೇರೇಪಿಸಲು ಬೂತ್ ಲೇವಲ್ ಆಫೀಸರ್ (ಬಿಎಲ್ಒ) ಗಳಿಗೆ ಸೂಕ್ತ ನಿರ್ದೇಶನ ಹಾಗೂ ತರಬೇತಿಯನ್ನು ನೀಡುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರಿಗೆ ತಿಳಿಸಿದರು.
ಸಭೆಯಲ್ಲಿದ್ದ ವಿವಿಧ ರಾಜಕೀಯ ಪಕ್ಷದ ಸದಸ್ಯರಿಗೆ ಮತದಾರರ ಪಟ್ಟಿಯಲ್ಲಿಮತದಾರರು ಪಟ್ಟಿಯಲ್ಲಿಹೆಸರು ನೋಂದಾಯಿಸುವಲ್ಲಿಯಾವುದೇ ರೀತಿಯ ತೊಂದರೆ ತೊಡಕುಗಳಿದ್ದಲ್ಲಿಮತದಾರರ ನೋಂದಣಾಧಿಕಾರಿ ಜತೆಗೆ ತಮ್ಮನ್ನು ಸಹ ಸಂಪರ್ಕಿಸಬಹುದಾಗಿದೆ ಎಂದರು.
ಬೂತ್ ಲೇವಲ್ ಏಜೆಂಟ್ರನ್ನು (ಬಿಎಲ್ಎ) ನೇಮಿಸಿದವರ ಬಗ್ಗೆ ಕೇಳಿದಾಗ ಬಿಜೆಪಿಯವರು ತಾವು ಬಿಎಲ್ಎದವರನ್ನು ನೇಮಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಬಿಎಲ್ಎದವರು ಕೂಡ ಮತದಾರರ ಪಟ್ಟಿಯಲ್ಲಿಮತದಾರರ ಹೆಸರನ್ನು ನೋಂದಾಯಿಸಲು ಅಗತ್ಯ ಮಾಹಿತಿ ಹಾಗೂ ನಮೂನೆಗಳನ್ನು ಸಂಬಂಧಿಸಿದ ಬಿಎಲ್ಒಗಳಿಂದ ಕೇಳಿ ಪಡೆದು ಹೆಚ್ಚಿನ ಮತದಾರರು ಮತದಾರರ ಪಟ್ಟಿಯಲ್ಲಿಇರುವಂತೆ ಮಾಡಲು ಸಹಕರಿಸಬೇಕೆಂದು ಹೇಳಿದರು.
ಸಭೆಯಲ್ಲಿಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಹಾಗೂ ಇತರರು ಹಾಜರಿದ್ದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿಜಿಲ್ಲಾಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ನೋಂದಣಾಧಿಕಾರಿಗಳ ಜತೆ ಸಭೆ ನಡೆಸಿ, ಕ್ರಮಬದ್ಧವಾಗಿ ಮತದಾರರ ಪಟ್ಟಿ ತಯಾರಿಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಮತದಾರರ ಪಟ್ಟಿಯಲ್ಲಿಮತದಾರರು ತಮ್ಮ ಹೆಸರನ್ನು ನೋಂದಾಯಿಸಲು ಅದರಲ್ಲೂ18-19 ವರ್ಷದ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿನೋಂದಾಯಿಸುವಂತೆ ಪ್ರೇರೇಪಿಸಲು ಬೂತ್ ಲೇವಲ್ ಆಫೀಸರ್ (ಬಿಎಲ್ಒ) ಗಳಿಗೆ ಸೂಕ್ತ ನಿರ್ದೇಶನ ಹಾಗೂ ತರಬೇತಿಯನ್ನು ನೀಡುವಂತೆ ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರರಿಗೆ ತಿಳಿಸಿದರು.
ಸಭೆಯಲ್ಲಿದ್ದ ವಿವಿಧ ರಾಜಕೀಯ ಪಕ್ಷದ ಸದಸ್ಯರಿಗೆ ಮತದಾರರ ಪಟ್ಟಿಯಲ್ಲಿಮತದಾರರು ಪಟ್ಟಿಯಲ್ಲಿಹೆಸರು ನೋಂದಾಯಿಸುವಲ್ಲಿಯಾವುದೇ ರೀತಿಯ ತೊಂದರೆ ತೊಡಕುಗಳಿದ್ದಲ್ಲಿಮತದಾರರ ನೋಂದಣಾಧಿಕಾರಿ ಜತೆಗೆ ತಮ್ಮನ್ನು ಸಹ ಸಂಪರ್ಕಿಸಬಹುದಾಗಿದೆ ಎಂದರು.
ಬೂತ್ ಲೇವಲ್ ಏಜೆಂಟ್ರನ್ನು (ಬಿಎಲ್ಎ) ನೇಮಿಸಿದವರ ಬಗ್ಗೆ ಕೇಳಿದಾಗ ಬಿಜೆಪಿಯವರು ತಾವು ಬಿಎಲ್ಎದವರನ್ನು ನೇಮಿಸಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಬಿಎಲ್ಎದವರು ಕೂಡ ಮತದಾರರ ಪಟ್ಟಿಯಲ್ಲಿಮತದಾರರ ಹೆಸರನ್ನು ನೋಂದಾಯಿಸಲು ಅಗತ್ಯ ಮಾಹಿತಿ ಹಾಗೂ ನಮೂನೆಗಳನ್ನು ಸಂಬಂಧಿಸಿದ ಬಿಎಲ್ಒಗಳಿಂದ ಕೇಳಿ ಪಡೆದು ಹೆಚ್ಚಿನ ಮತದಾರರು ಮತದಾರರ ಪಟ್ಟಿಯಲ್ಲಿಇರುವಂತೆ ಮಾಡಲು ಸಹಕರಿಸಬೇಕೆಂದು ಹೇಳಿದರು.
ಸಭೆಯಲ್ಲಿಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್ ಹಾಗೂ ಇತರರು ಹಾಜರಿದ್ದರು.