ಆ್ಯಪ್ನಗರ

ಹಳಿಯಾಳ: ಕಾರಿನಲ್ಲಿ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಟಿ. ನರಸಿಂಹಪುರ ಪಟ್ಟಣದ ಮಂಜುನಾಥ್ ವಾಸು (40) ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಈತ ಮೈಸೂರಿನಲ್ಲಿ ವ್ಯವಹಾರ ಮಾಡುತ್ತಿದ್ದು, ಕಾರ್ (ಕೆಎಲ್ 14, ಎಸ್-9368)ನಿಂದ ಬಂದ ಇತ ಹಳಿಯಾಳ ಪಟ್ಟಣದಿಂದ ಕೇವಲ 8 ಕಿಮೀ ಅಂತರದಲ್ಲಿರುವ ಅಜಗಾಂವ ಗ್ರಾಮದ ಸಮೀಪ ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

Vijaya Karnataka Web 10 Feb 2019, 6:24 pm
ಹಳಿಯಾಳ: ಮೈಸೂರು ಮೂಲದ ವ್ಯಕ್ತಿಯೋರ್ವ ತಾಲೂಕಿನ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ಅಜಗಾಂವ ಗ್ರಾಮ ಸಮೀಪದ ರಾಜ್ಯ ಹೆದ್ದಾರಿಯ ಮೇಲೆ ಕಾರೊಂದರಲ್ಲಿ ನಾಡ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ.
Vijaya Karnataka Web Suicide


ಮೈಸೂರು ಜಿಲ್ಲೆಯ ಟಿ. ನರಸಿಂಹಪುರ ಪಟ್ಟಣದ ಮಂಜುನಾಥ್ ವಾಸು (40) ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯು ಮೈಸೂರಿನಲ್ಲಿ ವ್ಯವಹಾರ ಮಾಡುತ್ತಿದ್ದು, ಕಾರ್ (ಕೆಎಲ್ 14, ಎಸ್-9368)ನಿಂದ ಬಂದ ಇತ ಹಳಿಯಾಳ ಪಟ್ಟಣದಿಂದ ಕೇವಲ 8 ಕಿಮೀ ಅಂತರದಲ್ಲಿರುವ ಅಜಗಾಂವ ಗ್ರಾಮದ ಸಮೀಪ ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಯ ಸಮಯದಲ್ಲಿ ಕಾರು ಚಾಲನೆ ಸ್ಥಿತಿಯಲ್ಲಿದ್ದು ಹಲವಾರು ಸಂಶಯಗಳಿಗೆ ಕಾರಣವಾಗಿ ಪರಿಣಮಿಸಿದೆ. ಮೃತನ ದೇಹವನ್ನು ಕಾರವಾರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು ಇನ್ನೂವರೆಗೂ ವಾರಸುದಾರರು ಆಗಮಿಸಿಲ್ಲ. ಸ್ಥಳೀಯ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ಡಾ. ಮೋಹನ ಪ್ರಸಾದ, ಸಿಪಿಐ ಬಿ.ಎಸ್.ಲೋಕಾಪೂರ ಮತ್ತು ಪಿಎಸೈ ಆನಂದ ಮೂರ್ತಿ ಸಿ ಅವರು ಪರಿಶೀಲನೆಯನ್ನು ನಡೆಸಿ ಮೃತ ವ್ಯಕ್ತಿಯ ವಿಳಾಸ ಮತ್ತು ಇನ್ನಿತರ ಮಾಹಿತಿಗಳನ್ನು ಪತ್ತೆ ಹಚ್ಚಿದ್ದಾರೆ.

ಕೊಲೆಯ ಶಂಕೆಯನ್ನು ಸಹ ವ್ಯಕ್ತಪಡಿಸಲಾಗಿದ್ದು, ಪೋಲಿಸರು ಎಲ್ಲಾ ಮೂಲೆಗಳಿಂದ ತನಿಖೆ ಕೈಗೊಂಡಿದ್ದು,ಹಳಿಯಾಳ ಮತ್ತು ದಾಂಡೇಲಿ ಪಟ್ಟಣದಲ್ಲಿಯ ಎಲ್ಲಾ ಸಿಸಿ ಕ್ಯಾಮರಾಗಳನ್ನು ಜಾಲಾಡಿದ್ದು , ಪ್ರಕರಣ ಹಳಿಯಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ