ಆ್ಯಪ್ನಗರ

ಸ್ವಚ್ಛತಾ ಕಾರ್ಯಕ್ಕೆ ಹಲವರ ಸಾಥ್‌

ಗೋಕರ್ಣ : ಇಲ್ಲಿನ ಮುಖ್ಯ ಕಡಲತೀರದಲ್ಲಿರಾಶಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ ಸ್ವಚ್ಛಗೊಳಿಸಲು ಎಲ್ಲರೂ ಕೈಜೋಡಿಸಿ ಎಂದು ವೈದ್ಯಾಧಿಕಾರಿ ಭಾನುವಾರ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ನೀಡಿದ್ದರು. ಅಲ್ಲದೇ ಅಂದೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದ್ದರು. ಇದಕ್ಕೆ ಎರಡನೇ ದಿನವೂ ಉತ್ತಮ ಸ್ಪಂದನೆ ದೊರೆತಿದೆ.

Vijaya Karnataka 24 Jun 2020, 5:00 am
ಗೋಕರ್ಣ : ಇಲ್ಲಿನ ಮುಖ್ಯ ಕಡಲತೀರದಲ್ಲಿರಾಶಿ ಬಿದ್ದಿರುವ ಪ್ಲಾಸ್ಟಿಕ್‌ ತ್ಯಾಜ್ಯ ಸ್ವಚ್ಛಗೊಳಿಸಲು ಎಲ್ಲರೂ ಕೈಜೋಡಿಸಿ ಎಂದು ವೈದ್ಯಾಧಿಕಾರಿ ಭಾನುವಾರ ವಾಟ್ಸ್‌ ಆ್ಯಪ್‌ ಮೂಲಕ ಸಂದೇಶ ನೀಡಿದ್ದರು. ಅಲ್ಲದೇ ಅಂದೆ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದ್ದರು. ಇದಕ್ಕೆ ಎರಡನೇ ದಿನವೂ ಉತ್ತಮ ಸ್ಪಂದನೆ ದೊರೆತಿದೆ.
Vijaya Karnataka Web 370822 GKN 1 A_24
ಮುಖ್ಯ ಕಡಲತೀರದಲ್ಲಿರಾಶಿ ಬಿದ್ದ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸುತ್ತಿರುವುದು.


ಸೋಮವಾರ ಸ್ಥಳೀಯರು, ಆರೋಗ್ಯ ಇಲಾಖೆ ಸಿಬ್ಬಂದಿ, ವಿದೇಶಿ ಪ್ರವಾಸಿಗರು, ಬಂಕಿಕೊಡ್ಲದಲ್ಲಿರುವ ವಿದೇಶಿಯರ ಶಂಕರ ಪ್ರಸಾದ ಫೌಂಡೇಶನ್‌ ಸಂಸ್ಥೆಯವರು ಸೇರಿದಂತೆ ಅನೇಕ ಭಾಗವಹಿಸಿ ಕಡಲದಡದಲ್ಲಿಬಿದ್ದ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಡಾ. ಜಗದೀಶ ನಾಯ್ಕ , ಸಿಬ್ಬಂದಿ ಮಹಾಂತೇಶ, ಲೈಫ್‌ ಗಾರ್ಡ ಮೇಲ್ವಿಚಾರಕ ರವಿ ನಾಯ್ಕ, ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

ಕಾರ್ಮಿಕರ ನೇಮಿಸಿ : ಪ್ರಮುಖ ಪ್ರವಾಸಿ ತಾಣಗಳ ಸ್ವಚ್ಛತೆಗಾಗಿ ಪ್ರವಾಸೋದ್ಯಮ ಇಲಾಖೆ ಸ್ವಚ್ಛತಾ ಸಿಬ್ಬಂದಿ ನೇಮಿಸಿತ್ತು. ಆದರೆ ಲಾಕ್‌ ಡೌನ್‌ ಪರಿಣಾಮ ಕಳೆದ ಮೂರು ತಿಂಗಳಿಂದ ಕೆಲಸಗಾರರನ್ನು ತೆಗೆದು ಹಾಕಲಾಗಿದೆ. ಆದರೆ ಲಾಕ್‌ ಡೌನ ನಿಯಮ ಸಡಿಲಗೊಳಿಸಿದ್ದು ಎಲ್ಲಾಚಟುವಟಿಕೆಗಳು ಪ್ರಾರಂಭವಾಗಿದೆ. ಅದರಂತೆ ಕಡಲತೀರಗಳಿಗೆ ಪ್ರವಾಸಿಗರ ಆಗಮನ , ಮಳೆ ನೀರಿ ನಿಂದ ತ್ಯಾಜ್ಯ ಬರುವುದರಿಂದ ಪುನಃ ಸ್ವಚ್ಛತಾ ಕಾರ್ಮಿಕರನ್ನು ನೇಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ