ಆ್ಯಪ್ನಗರ

ಜೂ.13ಕ್ಕೆ ಶಿರಸಿಗೆ ಮಾರ್ಗರೇಟ್‌ ಆಳ್ವಾ

ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಶಾಲೆಯಿಂದ ದೂರ ಉಳಿದ ಕಿಶೋರಿಯರಿಗೆ ಜೀವನಕೌಶಲ್ಯ ಮತ್ತು ವೃತ್ತಿ ತರಬೇತಿ ನೀಡುವ ಸಬಲ ಕಾರ್ಯಕ್ರಮದ ಉದ್ಘಾಟನೆ ನಗರದ ಯಲ್ಲಾಪುರ ನಾಕಾ ಸಮೀಪದ ಅರಣ್ಯ ನೌಕರರ ಭವನದಲ್ಲಿ ಜೂ.13ರಂದು ಬೆಳಗ್ಗೆ 10.30ಕ್ಕೆ ಏರ್ಪಾಟಾಗಿದೆ.

Vijaya Karnataka 9 Jun 2019, 5:00 am
ಶಿರಸಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಶಾಲೆಯಿಂದ ದೂರ ಉಳಿದ ಕಿಶೋರಿಯರಿಗೆ ಜೀವನಕೌಶಲ್ಯ ಮತ್ತು ವೃತ್ತಿ ತರಬೇತಿ ನೀಡುವ ಸಬಲ ಕಾರ್ಯಕ್ರಮದ ಉದ್ಘಾಟನೆ ನಗರದ ಯಲ್ಲಾಪುರ ನಾಕಾ ಸಮೀಪದ ಅರಣ್ಯ ನೌಕರರ ಭವನದಲ್ಲಿ ಜೂ.13ರಂದು ಬೆಳಗ್ಗೆ 10.30ಕ್ಕೆ ಏರ್ಪಾಟಾಗಿದೆ.
Vijaya Karnataka Web margaret alva to sirsi on june 13th
ಜೂ.13ಕ್ಕೆ ಶಿರಸಿಗೆ ಮಾರ್ಗರೇಟ್‌ ಆಳ್ವಾ


ಆಳ್ವಾ ಫೌಂಡೇಶನ್‌ನ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವಾ ಕಾರ್ಯಕ್ರಮ ಉದ್ಘಾಟಿಸುವರು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶಿವರಾಮ ಹೆಬ್ಬಾರ ಅಧ್ಯಕ್ಷ ತೆ ವಹಿಸುವರು. ಮಾಜಿ ಶಾಸಕರಾದ ಮಂಕಾಳು ವೈದ್ಯ, ಸತೀಶ ಸೈಲ್‌, ಆಳ್ವಾ ಫೌಂಡೇಶನ್‌ನ ಟ್ರಸ್ಟಿ ನಿವೇದಿತ್‌ ಆಳ್ವಾ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ. ಅಲ್ಲದೆ ಆಯ್ದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತದೆ. ವಿಶೇಷ ಸೇವೆ ಸಲ್ಲಿಸಿರುವ ಆಯ್ದ ಮಹಿಳಾ ಪೌರಕಾರ್ಮಿಕರನ್ನು ಹಾಗೂ ಆಯ್ದ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ