ಶಿರಸಿ:ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ಹೊರತಂದಿರುವ ನಮೋ ಶ್ರೀ ಮಾರಿಕಾಂಬಾ ವಿಶೇಷ ಪುರವಣಿಯನ್ನು ಬುಧವಾರ ಬಿಡುಗಡೆಗೊಳಿಸಲಾಯಿತು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಬಿಡುಗಡೆಗೊಳಿಸಿದರು. ಮಾರಿಕಾಂಬಾ ದೇವಿ ಇತಿಹಾಸ, ಜಾತ್ರೆ ಹಾಗೂ ದೇವಸ್ಥಾನದ ವಿಧಿವಿಧಾನಗಳಲ್ಲಿ ಪ್ರಮುಖ ಪಾತ್ರ ವಹಿಸುವ ಬಾಬದಾರರು ಹಾಗೂ ಜಾತ್ರೆಗೆ ಒಂದು ತಿಂಗಳಿನಿಂದ ನಡೆದ ಸಿದ್ಧತೆ, ಸಂಪ್ರದಾಯ, ಹಾಡುಗಳಲ್ಲಿ ಮೂಡಿದ ಮಾರಿಕಾಂಬೆಯ ಭಕ್ತಿ ಲೇಖನ ಒಳಗೊಂಡ ವರ್ಣರಂಜಿತ ಪುರವಣಿಯ ಬಗ್ಗೆ ಶ್ಲಾಘನೆ ವ್ಯಕ್ತವಾಯಿತು. ಆಭರಣ ವರ್ತಕರಾದ ರಾಜು ಶೇಟ್, ಸಂತೋಷ ಶೇಟ್, ನಿವೃತ್ತ ಉಪಪ್ರಾಂಶುಪಾಲ ಐ.ಪಿ.ಹೆಗಡೆ ಮುಂತಾದವರು ಪಾಲ್ಗೊಂಡಿದ್ದರು. ನಂತರ ಜಾತ್ರಾ ಆವಾರದಲ್ಲಿ ಪತ್ರಿಕೆಯನ್ನು ಹಂಚಿಕೆ ಮಾಡಲಾಯಿತು.