ಆ್ಯಪ್ನಗರ

ಶಿರಸಿ: ಮಾರಿಕಾಂಬ ದೇವಾಲಯದಲ್ಲಿ ದೇವಿ ಮೂರ್ತಿ ಪುನರ್‌ ಪ್ರತಿಷ್ಠಾ ಕಾರ್ಯ ಪೂರ್ಣ

ಜಾತ್ರೆಯ ಪ್ರಾರಂಭದಲ್ಲಿ ವಿವಾಹ ಮಂಗಲೋತ್ಸವ ನಡೆದು ಸರ್ವಮಂಗಳೆ ಯಾಗಿ ದೇವಿಯ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡು ಪೂಜೆ ಹರಕೆ ಸೇವೆ ಸಲ್ಲಿಸಿ ಜಾತ್ರಾ ಮುಕ್ತಾಯದಲ್ಲಿ ಅಮಂಗಳವಾಗಿ ಮರಳುವ ಸಂಪ್ರದಾಯವಿದೆ.

Vijaya Karnataka Web 25 Mar 2020, 6:54 pm
ಶಿರಸಿ: ನಾಡಿನ ಪ್ರಸಿದ್ಧ ಶಿರಸಿಯ ಶ್ರೀ ಮಾರಿಕಾಂಬ ದೇವಾಲಯದಲ್ಲಿ ದ್ವೈವಾರ್ಷಿಕ ಜಾತ್ರೆಯ ನಂತರದಲ್ಲಿ ದೇವಿಯ ಮೂರ್ತಿಯ ಪುನಃ ಪ್ರತಿಷ್ಠಾ ಕಾರ್ಯ ವಿಧ್ಯುಕ್ತವಾಗಿ ನೆರವೇರಿತು.
Vijaya Karnataka Web ಶಿರಸಿ
ಶಿರಸಿ


ಯುಗಾದಿ ಉತ್ಸವದ ಶುಭ ಸಂದರ್ಭದಲ್ಲಿ ಪುನಃ ಪ್ರತಿಷ್ಠಾ ಕಾರ್ಯ ನೆರವೇರಿಸಿದ ನಂತರ ದೇವಿಗೆ ಪೂಜೆ ಸೇವೆ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು.

ಕಳೆದ ಹದಿನೈದು ದಿನಗಳಿಂದ ದೇವಾಲಯದಲ್ಲಿ ಶ್ರೀ ಮಾರಿಕಾಂಬೆಯ ದರ್ಶನ ಪೂಜೆ ಅವಕಾಶ ಇರಲಿಲ್ಲ. ಮಾರ್ಚ್ ಮೊದಲ ವಾರ ಪ್ರಾರಂಭವಾಗಿ ಹತ್ತು ದಿನಗಳ ಕಾಲ ನಡೆದ ದ್ವೈವಾರ್ಷಿಕ ಜಾತ್ರೆಯ ಮುಕ್ತಾಯದಲ್ಲಿ ಪಾರಂಪರಿಕವಾಗಿ ಸಾಂಕೇತಿಕವಾಗಿ ವಿಸರ್ಜನೆ ಮಾಡಿದ್ದು ಇದಕ್ಕೆ ಕಾರಣವಾಗಿತ್ತು.

ಜಾತ್ರೆಯ ಪ್ರಾರಂಭದಲ್ಲಿ ವಿವಾಹ ಮಂಗಲೋತ್ಸವ ನಡೆದು ಸರ್ವಮಂಗಳೆ ಯಾಗಿ ದೇವಿಯ ಜಾತ್ರಾ ಗದ್ದುಗೆಯಲ್ಲಿ ಪ್ರತಿಷ್ಠಾಪನೆಗೊಂಡು ಪೂಜೆ ಹರಕೆ ಸೇವೆ ಸಲ್ಲಿಸಿ ಜಾತ್ರಾ ಮುಕ್ತಾಯದಲ್ಲಿ ಅಮಂಗಳವಾಗಿ ಮರಳುವ ಸಂಪ್ರದಾಯವಿದೆ.

ನಂತರದ ಹದಿನೈದು ದಿನಗಳ ಕಾಲದೇವಿಯ ದರುಶನ ಇರಲಿಲ್ಲ ಆದರೆ ಇದೀಗ ಯುಗಾದಿಯ ಸಂದರ್ಭದಲ್ಲಿ ವಿಧ್ಯುಕ್ತವಾಗಿ ದೇವಾಲಯದಲ್ಲಿ ಶ್ರೀ ಮಾರಿಕಾಂಬಾ ದೇವಿಯ ಪುನಃ ಪ್ರತಿಷ್ಠಾ ಕಾರ್ಯ ನೆರವೇರಿಸಲಾಗಿದೆಆದರೂ ದೇವಿಯ ದರ್ಶನ ಸದ್ಯಕ್ಕೆ ಭಕ್ತರಿಗೆ ಸಾಧ್ಯವಾಗುವುದಿಲ್ಲ.

ಕೊರೊನಾ ಸೋಂಕು ನಿಯಂತ್ರಣದ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರಕಾರ ಹೊರಡಿಸಿರುವ ಆದೇಶದ ದೇವಾಲಯಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ