ಆ್ಯಪ್ನಗರ

ಬೃಹತ್‌ ಆರೋಗ್ಯ ಉಚಿತ ತಪಾಸಣೆ ಇಂದು

ಶಿರಸಿ : ಸಾಹಿಲ್‌ ತಂಜೀಮ್‌ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಇಕ್ರಾ ಎಜ್ಯುಕೇಶನ್‌ ಸಂಸ್ಥೆಯಲ್ಲಿಬೃಹತ್‌ ಆರೋಗ್ಯ ಉಚಿತ ತಪಾಸಣಾ ಶಿಬಿರ ಫೆ. 16 ಬೆಳಗ್ಗೆ 9.30ಕ್ಕೆ ನಡೆಯಲಿದೆ.

Vijaya Karnataka 16 Feb 2020, 5:00 am
Vijaya Karnataka Web massive health free inspection today
ಬೃಹತ್‌ ಆರೋಗ್ಯ ಉಚಿತ ತಪಾಸಣೆ ಇಂದು
ಶಿರಸಿ : ಸಾಹಿಲ್‌ ತಂಜೀಮ್‌ ಕ್ಷೇಮಾಭಿವೃದ್ಧಿ ಸಂಘದಿಂದ ನಗರದ ಇಕ್ರಾ ಎಜ್ಯುಕೇಶನ್‌ ಸಂಸ್ಥೆಯಲ್ಲಿಬೃಹತ್‌ ಆರೋಗ್ಯ ಉಚಿತ ತಪಾಸಣಾ ಶಿಬಿರ ಫೆ. 16 ಬೆಳಗ್ಗೆ 9.30ಕ್ಕೆ ನಡೆಯಲಿದೆ.

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಶಿಬಿರ ಸಂಘಟಿಸಲಾಗಿದೆ. ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸುವರು. ಸಾಹಿಲ್‌ ತಂಜೀಮ್‌ ಅಧ್ಯಕ್ಷ ಮಹಮ್ಮದ್‌ ಶಫಿ ಮುಲ್ಲಾಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ ಸಹಾಯಕ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ಐಎಮ್‌ಎ ಅಧ್ಯಕ್ಷ ಡಾ.ರಾಘವೇಂದ್ರ ಉಡುಪ, ಇಕ್ರಾ ಎಜ್ಯುಕೇಶನ್‌ ಸಂಸ್ಥೆ ಅಧ್ಯಕ್ಷ ಅಬ್ದುಲ್‌ ಖುದ್ದೂಸ್‌ ಭಾಗವಹಿಸುವರು.

ಬೆಳ್ಳಿ ಮಹೋತ್ಸವದ ಸಂಭ್ರಮ : ಜಿಲ್ಲೆಯ ಕರಾವಳಿ ಭಾಗದಿಂದ ಉದ್ಯೋಗ ನಿಮಿತ್ತ ಶಿರಸಿಗೆ ಬಂದ ಮುಸ್ಲಿಂರು ಸಂಘಟಿತರಾಗಿ ಸಾಹಿಲ್‌ ತಂಜೀಮ್‌ ರಚಿಸಿಕೊಂಡರು. ಸಮಾಜದ ಬಡವರ ಹಿತರಕ್ಷಣೆ ಸಂಘದ ಮುಖ್ಯ ಉದ್ದೇಶವಾಗಿದ್ದು, ಸಂಘ ಯಶಸ್ವಿಯಾಗಿ 25 ವರ್ಷಗಳಿಂದ ನಡೆದು ಬರುತ್ತಿದೆ.

ಯುವಕರಲ್ಲಿಶೈಕ್ಷಣಿಕ ಜಾಗೃತಿ, ಅರೋಗ್ಯದ ಬಗ್ಗೆ ಅರಿವು ಮೂಡಿಸಲು ಸತತ ಪ್ರಯತ್ನ ನಡೆಸಿದ ಸಂಘ, ಶಾಲಾ ಮಕ್ಕಳಿಗೆ ಪ್ರತಿ ವರ್ಷ ನೋಟ್‌ಬುಕ್‌, ಸ್ಕೂಲ್‌ಬ್ಯಾಗ್‌ಗಳನ್ನು ವಿತರಿಸಿ ಪ್ರೋತ್ಸಾಹಿಸುತ್ತಿದೆ. ವಿಧವೆಯರಿಗೆ ವಿಧವಾವೇತನ ನೀಡುವ ಮೂಲಕ ಆಸರೆಯಾಗುತ್ತಿದೆ. ಸಂಘದಿಂದ 10 ವಿಧವೆಯರು ಇದೀಗ ಸಹಾಯಧನ ಪಡೆಯುತ್ತಿದ್ದಾರೆ. ವಿಶೇಷವಾಗಿ ಅನಾರೋಗ್ಯ ಪೀಡಿತರನ್ನು ಗುರುತಿಸಿ ಸಹಾಯ ಹಸ್ತ ಚಾಚಲಾಗುತ್ತಿದೆ. ಇದರಿಂದ ಅನೇಕ ಕುಟುಂಬಕ್ಕೆ ಒಳಿತಾಗಿದ್ದು, ಸಂಘದ ಬಗ್ಗೆ ಸಮಾಜದಲ್ಲಿಮೆಚ್ಚುಗೆ ಮಾತುಗಳು ವ್ಯಕ್ತವಾಗಿವೆ. ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ಸಹಾಯ, ಸಂಘದ ಸದಸ್ಯರಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಸಮಾಜಮುಖಿ ಕೆಲಸದಲ್ಲಿಸಾಹಿಲ್‌ ತಂಜೀಮ್‌ ಗುರುತಿಸಿಕೊಂಡಿದೆ ಎಂದು ಪ್ರಮುಖರು ಹೇಳುತ್ತಾರೆ.

ಹಾಲಿ ಸಂಘದಲ್ಲಿ32 ಸದಸ್ಯರಿದ್ದು, ಕುಟುಂಬದ ಒಬ್ಬರಿಗೆ ಮಾತ್ರ ಸದಸ್ಯತ್ವ ನೀಡಲಾಗುತ್ತಿದೆ. ಸಮಾಜ ಸೇವಾಸಕ್ತರಿಗೆ ಸಂಘದ ಸದಸ್ಯತ್ವ ಪಡೆಯಲು ಅವಕಾಶ ನೀಡಲಾಗಿದೆ.

ಶಿಬಿರದ ವಿಶೇಷತೆ : ಶಿವಮೊಗ್ಗ ನಾರಾಯಣ ಹೃದಯಾಲಯದ ನುರಿತ ವೈದ್ಯರ ತಂಡ ತಪಾಸಣೆ ನಡೆಸಲಿದ್ದು, ಸಂಪೂರ್ಣ ಉಚಿತವಾಗಿದೆ. ಮುಖವಾಗಿ ಹೃದಯ ಸಂಬಂಧಿ ಸಮಸ್ಯೆ, ನರ, ಮೂತ್ರಪಿಂಡ ಸಮಸ್ಯೆಗೆ ಸಲಹೆ, ಚಿಕಿತ್ಸೆ ನೀಡಲಾಗುವುದು. ಸ್ತಿ್ರೕರೋಗ ತಜ್ಞರು, ಮಕ್ಕಳ ತಜ್ಞರು ಲಭ್ಯವಿರಲಿದ್ದಾರೆ. ಸಾಮಾನ್ಯ ರೋಗಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ