ಆ್ಯಪ್ನಗರ

ಏತ ನೀರಾವರಿ ಘಟಕಗಳಿಗೆ ಶಾಸಕರ ಭೇಟಿ

ಹೊನ್ನಾವರ : ಶರಾವತಿ ಏತ ನೀರಾವರಿ ಘಟಕಗಳಲ್ಲಿ ಪಂಪ್‌ ದುರಸ್ತಿ ಹಾಗೂ ಕಾಲುವೆಗಳ ಹೂಳೆತ್ತುವ ಕಾರ್ಯವನ್ನು ತಕ್ಷ ಣ ನಡೆಸಿ ಕೃಷಿಗೆ ನೀರಾವರಿ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಶಾಸಕ ಸುನೀಲ ನಾಯ್ಕ ಚಿಕ್ಕ ನೀರಾವರಿ ಇಲಾಖಾಧಿಕಾರಿ ಅವರಿಗೆ ತಾಕೀತು ಮಾಡಿದರು.

Vijaya Karnataka 3 Dec 2018, 5:00 am
ಹೊನ್ನಾವರ : ಶರಾವತಿ ಏತ ನೀರಾವರಿ ಘಟಕಗಳಲ್ಲಿ ಪಂಪ್‌ ದುರಸ್ತಿ ಹಾಗೂ ಕಾಲುವೆಗಳ ಹೂಳೆತ್ತುವ ಕಾರ್ಯವನ್ನು ತಕ್ಷ ಣ ನಡೆಸಿ ಕೃಷಿಗೆ ನೀರಾವರಿ ವ್ಯವಸ್ಥೆಯನ್ನು ಸುಗಮಗೊಳಿಸುವಂತೆ ಶಾಸಕ ಸುನೀಲ ನಾಯ್ಕ ಚಿಕ್ಕ ನೀರಾವರಿ ಇಲಾಖಾಧಿಕಾರಿ ಅವರಿಗೆ ತಾಕೀತು ಮಾಡಿದರು.
Vijaya Karnataka Web meet the mla for irrigation units
ಏತ ನೀರಾವರಿ ಘಟಕಗಳಿಗೆ ಶಾಸಕರ ಭೇಟಿ


ತಾಲೂಕಿನ ಶರಾವತಿ ನದಿ ತೀರದ ವಿವಿಧ ಗ್ರಾಮಗಳ ಏತ ನೀರಾವರಿ ಘಟಕಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು ಬೇಸಿಗೆ ಆರಂಭವಾಗಿ ಇಷ್ಟು ದಿನಗಳಾದರೂ ಪಂಪ್‌ ದುರಸ್ತಿ ಮಾಡದಿರುವ ಕುರಿತು ಅಸಮಾಧಾನ ವ್ಯಕ್ತ ಪಡಿಸಿದರು.

ಕಳೆದ ವರ್ಷ ಪಂಪ್‌ ದುರಸ್ತಿ ಮಾಡಿದ ಖರ್ಚಿನ ಹಣ ಇನ್ನೂ ಬಂದಿಲ್ಲ ಎಂದು ಚಿಕ್ಕ ನೀರಾವರಿ ಇಲಾಖಾಧಿಕಾರಿ ಸಾಗೇಕರ ಶಾಸಕರ ಗಮನಕ್ಕೆ ತಂದಾಗ ಅನುದಾನ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ. ತಕ್ಷ ಣ ಒಂದು ವಾರದಲ್ಲಿ ಪಂಪ್‌ ದುರಸ್ತಿ, ಹೂಳೆತ್ತುವ ಕೆಲಸ ಮಾಡಿ ನೀರು ಹರಿಸಿ ಎಂದು ಶಾಸಕ ಸುನೀಲ ನಾಯ್ಕ ಸೂಚಿಸಿದರು.

ಕೃಷಿಗೆ ಸಮಯಕ್ಕೆ ಸರಿಯಾಗಿ ನೀರು ಒದಗಿಸದಿದ್ದರೆ, ನೀರಾವರಿ ಯೋಜನೆ ಇದ್ದರೂ, ಪ್ರಯೋಜನ ಆಗುವುದಿಲ್ಲ. ಅಧಿಕಾರಿಗಳು ನಿರ್ಲಕ್ಷ ್ಯ ಮಾಡದೇ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ಹಿಂದಿನಂತೆ ನಿರ್ಲಕ್ಷ ್ಯ ಧೋರಣೆ ತೋರದೇ ಪ್ರತಿ ವರ್ಷ ಬೇಸಿಗೆ ಆರಂಭವಾಗುವುದರೊಳಗೆ ನೀರಾವರಿ ಘಟಕಳನ್ನು ಸುಸ್ಥಿತಿಯಲ್ಲಿ ಇಡಬೇಕು ಎಂದು ಸೂಚಿಸಿದರು.

ಮೂಡ್ಕಣಿ ಹಾಗೂ ಅಡಕಾರ ಗ್ರಾಮಗಳ ಏತ ನೀರಾವರಿ ಘಟಕಗಳಿಗೆ ಭೇಟಿ ಮಾಡಿ ಪರಿಶೀಲಿಸಿದರು. ನಗರಬಸ್ತಿಕೇರಿ, ಕುದ್ರಗಿ, ಸರಳಗಿ ಮುಂತಾದ ಏತ ನೀರಾವರಿ ಪ್ರದೇಶಗಳ ಜನರು ಶಾಸಕರನ್ನು ಭೇಟಿ ಮಾಡಿ ಸಮಸ್ಯೆಯ ಕುರಿತು ಅಹವಾಲು ಸಲ್ಲಿಸಿದರು.

ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಗೇರುಸೊಪ್ಪಾ ಮಂಜುನಾಥ ನಾಯ್ಕ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ವಿN್ನೕಶ್ವರ ಹೆಗಡೆ, ಮೂಡ್ಕಣಿ ವಿನಾಯಕ ನಾಯ್ಕ, ತುಂಬೊಳ್ಳಿ ಜಗದೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ