ಆ್ಯಪ್ನಗರ

ಲಕ್ಷಾಂತರ ರೂ. ವಂಚಿಸಿದ ಫೇಸ್‌ಬುಕ್‌ ಯುವತಿ

ಕಾರವಾರ: ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ಯುವತಿಯನ್ನು ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ನಡೆದಿದ್ದು, ಕಾರವಾರದ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.

Vijaya Karnataka 4 Aug 2019, 8:50 am
ಕಾರವಾರ: ಫೇಸ್‌ಬುಕ್‌ನಲ್ಲಿ ಪರಿಚಯವಾದ ವಿದೇಶಿ ಯುವತಿಯನ್ನು ನಂಬಿ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಹಣ ಕಳೆದುಕೊಂಡ ಘಟನೆ ನಡೆದಿದ್ದು, ಕಾರವಾರದ ಸೈಬರ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.
Vijaya Karnataka Web Cyber Crime


ಭಟ್ಕಳದ ರೈಲ್ವೇ ಇಲಾಖೆಯಲ್ಲಿ ಪಾಯಿಂಟ್‌ಮನ್‌ ಕೆಲಸದಲ್ಲಿರುವ ಈಶ್ವರ ಗೊಂಡ ಹಣ ಕಳೆದುಕೊಂಡವರು. ರೋಸೈನ್‌ ಸ್ಮಿತ್‌, ಸ್ಟೀಫನ್‌ ಜಾನ್‌, ಜಾನ್‌ ಮಾರ್ಗನ್‌ ಮತ್ತು ಅರ್ಪಿತಾ ಡಿಸೋಜಾ ಎಂಬುವವರು ಆರೋಪಿಗಳಾಗಿದ್ದಾರೆ.

ಏನಿದು ಪ್ರಕರಣ?: ಈಶ್ವರ ಗೊಂಡ ಅವರಿಗೆ ರೋಸೈನ್‌ ಸ್ಮಿತ್‌ ಎಂಬುವವರು ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು. ತಾನು ಅಮೇರಿಕದ ಸೇನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ರೋಸೈನ್‌ ಸ್ಮಿತ್‌ ತಿಳಿಸಿದ್ದರು. ತಾನು ಭಾರತದಲ್ಲಿ 3 ಮಿಲಿಯನ್‌ ಡಾಲರ್‌ ಹಣ ಹೂಡಿಕೆ ಮಾಡಲು ಆಸಕ್ತಳಾಗಿದ್ದು, ಸದ್ಯ ಅಪಘಾನಿಸ್ತಾನದಲ್ಲಿರುವ ಕಾರಣ ಕೋರಿಯರ್‌ ಮೂಲಕ ಹಣ ಕಳಿಸುತ್ತೇನೆ ಎಂದು ಈಶ್ವರ ಅವರಿಗೆ ರೋಸೈನ್‌ ಹೇಳಿದ್ದು ಇದಕ್ಕೆ ಈಶ್ವರ ಒಪ್ಪಿದ್ದರು.

ಬಳಿಕ ಈಶ್ವರ ಅವರಿಗೆ ಸ್ಟಿಫನ್‌ ಜಾನ್‌ ಎಂಬುವವನು ಫೋನ್‌ ಮಾಡಿ, ಹಣವನ್ನು ತರುತ್ತಿದ್ದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಕ್ಲಿಯರೆನ್ಸ್‌ ಮತ್ತು ವಿಮಾನ ಪ್ರಯಾಣದ ವೆಚ್ಚವನ್ನು ಭರಿಸುವಂತೆ ತಿಳಿಸಿದ್ದಾನೆ. ಅದೇ ಪ್ರಕಾರ ಅರ್ಪಿತಾ ಡಿಸೋಜಾ ಸಹ ಫೋನ್‌ ಮಾಡಿ ತಾನು ಕಸ್ಟಮ್ಸ್‌ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು ಕಸ್ಟಮ್ಸ್‌ ಕ್ಲಿಯರೆನ್ಸ್‌ ಹಣ ಪಾವತಿಸುವಂತೆ ಸೂಚಿಸಿದ್ದಾರೆ.

ಬಳಿಕ ಜಾನ್‌ ಮಾರ್ಗನ್‌ ಎಂಬ ಹೆಸರಿನಲ್ಲಿ ರಾಜ್ಯದ ವಿವಿಧೆಡೆ ಇರುವ ಬ್ಯಾಂಕ್‌ ಖಾತೆ ಸಂಖ್ಯೆಗಳನ್ನು ನೀಡಲಾಗಿದೆ. ಈ ಎಲ್ಲರ ಮಾತುಗಳನ್ನು ನಂಬಿದ ಈಶ್ವರ ಅವರು ಒಟ್ಟು 7.69 ಲಕ್ಷ ರೂ.ವನ್ನು ವಿವಿಧ ಖಾತೆಗಳಿಗೆ ಜಮಾ ಮಾಡಿದ್ದಾರೆ. ಆದರೆ ಇದುವರೆಗೂ 3 ಮಿಲಿಯನ್‌ ಡಾಲರ್‌ನ ಪಾರ್ಸೆಲ್‌ ಬಂದಿಲ್ಲ ಎಂದು ಈಶ್ವರ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ