ಆ್ಯಪ್ನಗರ

ಚಹ,ತಿಂಡಿ ವಿತರಿಸಿ ಗಮನ ಸೆಳೆದ ಸಚಿವ

ಯಲ್ಲಾಪುರ: ಪಟ್ಟಣದ ಬೆಲ್‌ ರಸ್ತೆಯಲ್ಲಿನಿರ್ಮಿಸಲಾದ ನೂತನ ಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ಜಿಲ್ಲಾಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಸೋಮವಾರ ಲೋಕಾರ್ಪಣೆಗೊಳಿಸಿದರು.

Vijaya Karnataka 12 May 2020, 5:00 am
ಯಲ್ಲಾಪುರ: ಪಟ್ಟಣದ ಬೆಲ್‌ ರಸ್ತೆಯಲ್ಲಿನಿರ್ಮಿಸಲಾದ ನೂತನ ಇಂದಿರಾ ಕ್ಯಾಂಟೀನ್‌ ಕಟ್ಟಡವನ್ನು ಜಿಲ್ಲಾಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಸೋಮವಾರ ಲೋಕಾರ್ಪಣೆಗೊಳಿಸಿದರು.
Vijaya Karnataka Web minister for distributing tea and snacks
ಚಹ,ತಿಂಡಿ ವಿತರಿಸಿ ಗಮನ ಸೆಳೆದ ಸಚಿವ


ನೂತನ ಕಟ್ಟಡವನ್ನು ಉದ್ಘಾಟಿಸಿದ ಸಚಿವರು ಮಾತನಾಡಿ, ಈ ಕಟ್ಟಡದ ಉದ್ಘಾಟನೆ ಬಹಳ ಹಿಂದೆಯೇ ಆಗಬೇಕಿತ್ತು. ಆದರೆ ನಾನಾ ಕಾರಣಗಳಿಂದ ಉಧ್ಘಾಟನೆಗೆ ವಿಳಂಬವಾಗಿತ್ತು. ಅತ್ಯಂತ ಕಡಿಮೆ ದರದಲ್ಲಿಜನರಿಗೆ ಊಟ ಹಾಗೂ ತಿಂಡಿ ಈ ಕ್ಯಾಂಟೀನಿನಲ್ಲಿಲಭ್ಯವಿದೆ. ಯಾವುದೇ ಕಾರಣಕ್ಕೂ ಸದ್ಯದ ಪರಿಸ್ಥಿತಿಯಲ್ಲಿಕಟ್ಟಡದ ಒಳಗಡೆ ಊಟ-ತಿಂಡಿ ನೀಡಬಾರದು.ಹೊರಗಡೆ ವ್ಯವಸ್ಥೆ ಕಲ್ಪಿಸಬೇಕು. ಎಲ್ಲರೀತಿಯ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕಟ್ಟಡದ ಒಳಗಡೆಯ ವ್ಯವಸ್ಥೆಯನ್ನು, ಅಡುಗೆ ಪರಿಕರಗಳನ್ನು ವೀಕ್ಷಿಸಿದ ಸಚಿವರು ಸ್ವತಃ ಸಾರ್ವಜನಿಕರಿಗೆ ತಿಂಡಿ,ಚಹಾ ವಿತರಿಸಿದ್ದು ಗಮನ ಸೆಳೆಯಿತು.

ಈ ಸಂದರ್ಭದಲ್ಲಿತಹಸೀಲ್ದಾರ್‌ ಡಿ.ಜಿ.ಹೆಗಡೆ,ಪ್ರಮುಖರಾದ ವಿಜಯ ಮಿರಾಶಿ, ರಾಮು ನಾಯ್ಕ, ಪ.ಪಂ ಸದಸ್ಯೆ ಪುಷ್ಪಾ ನಾಯ್ಕ, ಶ್ಯಾಮಿಲಿ ಪಾಠಣಕರ್‌, ಶಿರೀಷ್‌ ಪ್ರಭು, ಮುರಳಿ ಹೆಗಡೆ, ಮುಂತಾದವರು ಇದ್ದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅರುಣ ನಾಯ್ಕ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಪಟ್ಟಣ ಪಂಚಾಯತಿ ವತಿಯಿಂದ ಸ್ಯಾನಿಟೈಸರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು.

ಕ್ಯಾಂಟೀನ್‌ ಉದ್ಘಾಟನೆ
ಮುಂಡಗೋಡ : ಕಳೆದ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನನ್ನು ಸೋಮವಾರ ಜಿಲ್ಲಾಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ ಉದ್ಘಾಟಿಸಿದರು.

ಕ್ಯಾಂಟಿನ ಉದ್ಘಾಟಿಸಿ ಮಾತನಾಡಿದ ಅವರು ಬಡವರಿಗೆ ಅನುಕೂಲ ಆಗುವ ದೃಷ್ಟಿಯಿಂದ ಪ್ರಾರಂಭಿಸಲಾಗಿದೆ. ಎಂದ ಅವರು ಇದರ ಲಾಭ ಪಡೆಯಲು ವಿನಂತಿಸಿದರು.

ಆಗಮಿಸಿದ್ದ ಸಾರ್ವಜನಿಕರಿಗೆ ಸಚಿವರು ಆಹಾರ ವಿತರಿಸದರು. ತಾಲೂಕು ಅಧ್ಯಕ್ಷ ನಾಗಭೂಷಣ ಹಾವಣಗಿ, ಜಿಪಂ ಸದಸ್ಯರಾದ ಎಲ್‌.ಟಿ ಪಾಟೀಲ. ರವಿ ಪಾಟೀಲ. ಪ್ರಮುಖರಾದ ಉಮೇಶ ಬಿಜಾಪುರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ