ಆ್ಯಪ್ನಗರ

ಯಲ್ಲಾಪುರಕ್ಕೆ ಇಂದು ಸಚಿವ ಹೆಬ್ಬಾರ

ಯಲ್ಲಾಪುರ : ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್‌ ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿಏರ್ಪಡಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿಭಾಗವಹಿಸಲಿದ್ದಾರೆ.

Vijaya Karnataka 14 Feb 2020, 5:00 am
ಯಲ್ಲಾಪುರ : ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್‌ ಅವರು ಶುಕ್ರವಾರ ಬೆಳಿಗ್ಗೆ ಪಟ್ಟಣದಲ್ಲಿಏರ್ಪಡಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿಭಾಗವಹಿಸಲಿದ್ದಾರೆ.
Vijaya Karnataka Web minister yellapura today
ಯಲ್ಲಾಪುರಕ್ಕೆ ಇಂದು ಸಚಿವ ಹೆಬ್ಬಾರ


ಬೆಳಗ್ಗೆ 10 ಕ್ಕೆ ಪಟ್ಟಣದ ಗಣೇಶಪುರಂನಲ್ಲಿರುವ ವಿಶ್ವಹಿಂದೂಪರಿಷತ್‌ ಗಣಪತಿ ದೇವಸ್ಥಾನದ ಆವಾರದಲ್ಲಿಅಭಿವೃದ್ಧಿಕಾಮಗಾರಿಗೆ ಚಾಲನೆ ನೀಡಲಿದ್ದಾರೆ. 10.30ಕ್ಕೆ ನಾಯಕನಕೆರೆ ಶ್ರೀ ಶಾರದಾಂಬಾ ದೇವಾಲಯದ ಆವಾರದಲ್ಲಿ ಪೇವರ್ಸ್ ಅಳವಡಿಕೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. 11ಕ್ಕೆ ತಹಸೀಲ್ದಾರ್‌ ಕಚೇರಿಯ ಎದುರು ನಿರ್ಮಾಣವಾಗಲಿರುವ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ. 11.30 ಕ್ಕೆ ಏಪಿಎಂಸಿ ಆವರಣದ ತಾಲೂಕಾ ಮಾರ್ಕೆಟಿಂಗ್‌ ಸೊಸೈಟಿ ಸಭೆಯಲ್ಲಿಪಾಲ್ಗೊಳ್ಳಲಿದ್ದಾರೆ.

ಟಿ.ಎಂಸ್‌ನಿಂದ ಸನ್ಮಾನ : ಶುಕ್ರವಾರ ಬೆಳಗ್ಗೆ 11.30 ಕ್ಕೆ ತಾಲೂಕಾ ಮಾರ್ಕೆಟಿಂಗ್‌ ಸೊಸೈಟಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಪ್ರಥಮವಾಗಿ ಭೇಟಿ ನೀಡಲಿರುವ ಸಚಿವರನ್ನು ಸೊಸೈಟಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಹಾಗೂ ಸದಸ್ಯರ ಪರವಾಗಿ ಈ ಸೊಸೈಟಿ ನಿರ್ದೇಶಕರೂ ಆದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಸಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ