ಆ್ಯಪ್ನಗರ

ಮಂತ್ರಿ ಸ್ಥಾನ ಬೇಡಲ್ಲ: ಹೆಬ್ಬಾರ

ಯಲ್ಲಾಪುರ : ಇನ್ನು ಮುಂದೆ ಮಂತ್ರಿ ಸ್ಥಾನ ಬೇಡುವುದಿಲ್ಲ. ಹಾಲಿ ಮಂತ್ರಿ ಸ್ಥಾನದಲ್ಲಿರುವವರಿಗೆ ಸಾಕಪ್ಪಾ ಎಂಬ ಭಾವನೆ ಬರುವವರೆಗೆ ಕಾಯುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

Vijaya Karnataka 15 Jun 2019, 5:00 am
ಯಲ್ಲಾಪುರ : ಇನ್ನು ಮುಂದೆ ಮಂತ್ರಿ ಸ್ಥಾನ ಬೇಡುವುದಿಲ್ಲ. ಹಾಲಿ ಮಂತ್ರಿ ಸ್ಥಾನದಲ್ಲಿರುವವರಿಗೆ ಸಾಕಪ್ಪಾ ಎಂಬ ಭಾವನೆ ಬರುವವರೆಗೆ ಕಾಯುತ್ತೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.
Vijaya Karnataka Web ministries do not want to be hebbar
ಮಂತ್ರಿ ಸ್ಥಾನ ಬೇಡಲ್ಲ: ಹೆಬ್ಬಾರ


ಅವರು ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ''ಮಂತ್ರಿ ಸ್ಥಾನ ಕೊಡುವವರಾದರೂ ಆಲೋಚಿಸಬೇಕಿತ್ತು. ಎಲ್ಲದಕ್ಕೂ ಕಾಲವೇ ಉತ್ತರ ಹೇಳಲಿದೆ'' ಎಂದು ಮಾರ್ಮಿಕವಾಗಿ ಹೇಳಿದ ಅವರು, ''ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರ ಅಭದ್ರವಾಗಬಾರದು. ಅವಶ್ಯ ಬಿದ್ದರೆ, ಸರಕಾರಕ್ಕೆ ಒಳಿತಾಗುವುದಾದರೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹುದ್ದೆಯನ್ನೂ ಬೇರೆಯವರಿಗೆ ಬಿಟ್ಟುಕೊಡಲು ಸಿದ್ಧನಿದ್ದೇನೆ'' ಎಂದೂ ಹೇಳಿದರು.

ಪಾಸ್‌ ಪ್ರಿಂಟ್‌ ವಿಳಂಬ : ''ಈ ವರ್ಷ ಶಾಲಾ ಮಕ್ಕಳಿಗೆ ಬಸ್‌ಪಾಸ್‌ ವಿತರಿಸಲು ಕೊಂಚ ವಿಳಂಬವಾಗಿದೆ. ಇದಕ್ಕೆ ಪಾಸ್‌ ಪ್ರಿಂಟ್‌ ಆಗಲು ವಿಳಂಬವಾದದ್ದೇ ಕಾರಣವಾಗಿದೆ. ಮುಂದಿನ ವಾರ ಪಾಸ್‌ ವಿತರಿಸಲಾಗುವುದು. ಹಳೆಯ ಪಾಸ್‌ ಅನ್ನು ತೋರಿಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದು'' ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ