ಆ್ಯಪ್ನಗರ

ನಿರಾಶ್ರಿತರಿಗೆ ಪರಿಹಾರ ನೀಡಲು ಶಾಸಕ ನಾಯ್ಕ ಒತ್ತಾಯ

ಹೊನ್ನಾವರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಪರಿಹಾರ ನೀಡಿಕೆ ನೀತಿಯಿಂದ ಭೂಮಿ, ಮನೆ, ತೋಟ ಕಳೆದುಕೊಂಡ ನಿರಾಶ್ರಿತರಿಗೆ ಗರಿಷ್ಠ ಪ್ರಮಾಣದಲ್ಲಿ ಏಕರೂಪ ಪರಿಹಾರ ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆಯಲ್ಲಿ ಸರಕಾರವನ್ನು ಒತ್ತಾಯಿಸಿರುವುದಾಗಿ ಶಾಸಕ ಸುನೀಲ ನಾಯ್ಕ ತಿಳಿಸಿದ್ದಾರೆ.

Vijaya Karnataka 23 Dec 2018, 5:00 am
ಹೊನ್ನಾವರ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಪರಿಹಾರ ನೀಡಿಕೆ ನೀತಿಯಿಂದ ಭೂಮಿ, ಮನೆ, ತೋಟ ಕಳೆದುಕೊಂಡ ನಿರಾಶ್ರಿತರಿಗೆ ಗರಿಷ್ಠ ಪ್ರಮಾಣದಲ್ಲಿ ಏಕರೂಪ ಪರಿಹಾರ ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ವಿಧಾನಸಭೆಯಲ್ಲಿ ಸರಕಾರವನ್ನು ಒತ್ತಾಯಿಸಿರುವುದಾಗಿ ಶಾಸಕ ಸುನೀಲ ನಾಯ್ಕ ತಿಳಿಸಿದ್ದಾರೆ.
Vijaya Karnataka Web mla naika insists on solving refugees
ನಿರಾಶ್ರಿತರಿಗೆ ಪರಿಹಾರ ನೀಡಲು ಶಾಸಕ ನಾಯ್ಕ ಒತ್ತಾಯ


ಅಧಿವೇಶನದ ಚುಕ್ಕೆ ಗುರುತಿಲ್ಲದ 149ನೇ ಪ್ರಶ್ನೆ ಸಂಖ್ಯೆಯಲ್ಲಿ ಭಟ್ಕಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಿರಾಶ್ರಿತರಾಗುವವರಿಗೆ ಯೋಗ್ಯ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಲಿಖಿತವಾಗಿ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರಿಂದ ವಶಪಡಿಸಿಕೊಂಡಿರುವ ಭೂಮಿ ಮತ್ತು ಮನೆಗಳಿಗೆ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 ಹಾಗೂ ಆರ್‌ಎಫ್‌ಸಿಟಿಎಲ್‌ಎಎಆರ್‌ ಕಾಯ್ದೆ 2013ರ ಅನ್ವಯ ನಿಯಮಾನುಸಾರ ಭೂ ಪರಿಹಾರ ತ್ವರಿತವಾಗಿ ನೀಡಲಾಗುತ್ತಿದೆ. ಸರಕಾರದಿಂದ ನೋಂದಣಿ ಹೊಂದಿರುವ ಮೌಲ್ಯ ಮಾಪಕರಿಂದ ಮೌಲ್ಯಮಾಪನಗೊಳಿಸಿ ಮನೆ, ಕಂಪೌಂಡ್‌, ಗೋಡೆ ಮುಂತಾದ ಕಟ್ಟಡಗಳಿಗೆ ಸಂಬಂಧಿಸಿದ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.

ಆಯಾಯ ಗ್ರಾಮ, ಹಳ್ಳಿಗಳಲ್ಲಿ ಅನ್ವಯವಾಗುವ ಮಾರ್ಗದರ್ಶನ ಮೌಲ್ಯಮಾಪನ ಹಾಗೂ ಈಗಾಗಲೇ ನೋಂದಾಯಿತ ಅಂಕಿ ಅಂಶಗಳ ಮತ್ತು ಮಾರ್ಗದರ್ಶನಗಳ ಕಾಯ್ದೆಯನುಸಾರ ಕೃಷಿ ಭೂಮಿ ಮತ್ತು ತೋಟ ಮುಂತಾದ ಭೂಮಿಗಳಿಗೆ ಪರಿಹಾರ ಮೊತ್ತವನ್ನು ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಆರ್‌ಎಫ್‌ಸಿಟಿಎಲ್‌ಎಎಆರ್‌ ಕಾಯ್ದೆಯನುಸಾರ ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ ರೇವಣ್ಣ ಲಿಖಿತವಾಗಿ ಉತ್ತರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಪಟ್ಟಾ ನೀಡಲು ಒತ್ತಾಯ : ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಸಮುದ್ರ ತೀರದಲ್ಲಿ ಅನಾದಿಕಾಲದಿಂದ ಬಂದರು ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿ ಆಶ್ರಿತರಾಗಿರುವ ನಾಗರಿಕರಿಗೆ ಭೂಮಿ ಹಕ್ಕನ್ನು ಮಾನ್ಯ ಮಾಡುವ ನಿಟ್ಟಿನಲ್ಲಿ ಪಟ್ಟಾ ಅಥವಾ ಹಕ್ಕುಪತ್ರ ವಿತರಿಸಬೇಕೆಂದು ವಿಧಾನಸಭೆಯಲ್ಲಿ ಸರಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಅಧಿವೇಶನದ 3ನೇ ದಿನದಂದು ಗಮನ ಸೆಳೆಯುವ ಪ್ರಶ್ನೆಯ ಮೂಲಕ ಪೌರಾಡಳಿತ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಕಳೆದ ನೂರಾರು ವರ್ಷದಿಂದ ಹೊನ್ನಾವರದ ಕಾಸರಕೋಡದಿಂದ ಭಟ್ಕಳದ ಗೊರಟೆ ತನಕ ಬಂದರು ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿ ಮನೆ, ವ್ಯವಹಾರ, ಕೃಷಿ, ತೋಟಗಾರಿಕೆ ಉದ್ದೇಶಕ್ಕಾಗಿ ಜಾಗವನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಂಡಿದ್ದಾರೆ. ಈ ಹಿಂದಿನ ಎಲ್ಲ ಸರಕಾರಕ್ಕೂ ಪ್ರತಿಭಟನೆ ಮನವಿಯ ಮೂಲಕ ಭೂಮಿಯ ಹಕ್ಕು ನೀಡುವಂತೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಮಾನವೀಯ ದೃಷ್ಟಿಯಿಂದ ಭವಿಷ್ಯದಲ್ಲಿ ಅತಂತ್ರರಾಗುವ ಪರಿಸ್ಥಿತಿಯಿಂದ ಪಾರು ಮಾಡಲು ಈ ಬಡ ಮೀನುಗಾರಿಕೆ ಮತ್ತು ಕೃಷಿ ಅವಲಂಬಿತ ಕುಟುಂಬಕ್ಕೆ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ