ಯಲ್ಲಾಪುರ : ಬಿಜೆಪಿ ಶಾಸಕ ಹಾಸನದ ಪ್ರೀತಂ ಗೌಡ ಅವರ ಮನೆಯ ಮೇಲೆ ಜೆಡಿಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವುದು ಖಂಡನೀಯ ಎಂದು ರಾಜ್ಯ ಬಿಜೆಪಿ ವಕ್ತಾರ ಪ್ರಮೋದ ಹೆಗಡೆ ಹೇಳಿದರು.
ಯಲ್ಲಾಪುರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೆಡಿಎಸ್ನವರ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ. ಜೆಡಿಎಸ್ ಪ್ರಮುಖರ ಮಾರ್ಗದರ್ಶನದಂತೆ ನಡೆಯುತ್ತಿರುವ ಇಂತಹ ತಾಲೀಬಾನ್ ಸಂಸ್ಕೃತಿಯು ಖಂಡನೀಯವಾಗಿದೆ. ಇಂತಹ ಘಟನೆಗಳಿಗೆ ಹೆದರದೇ ಘಟನೆಯನ್ನು ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದರು. ಹಾಗೆ ನೋಡಿದರೆ ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಇಂತಹ ಘಟನೆಗಳು ನಡೆದಿವೆ. 1997-98ರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. 1994ರಲ್ಲಿ ರಾಮಕೃಷ್ಣ ಹೆಗಡೆಯವರ ಮೇಲೆ ಚಪ್ಪಲಿ ತೂರಾಟವೂ ನಡೆದಿತ್ತು. ನಂತರದ ದಿನಗಳಲ್ಲಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಅವರ ಮನೆಯ ಮೇಲೂ ದಾಳಿ ನಡೆದಿತ್ತು. ಹೀಗೆ ಅನೇಕ ಸಲ ಇಂತಹ ಘಟನೆಗಳು ನಡೆದಿವೆ. ಈಗ ಪುನಃ ಇಂತಹ ಘಟನೆ ಮರುಕಳಿಸಿದೆ. ಅಧಿಕಾರಕ್ಕೋಸ್ಕರ ಜೆಡಿಎಸ್ ಮುಖಂಡರ ಇಂತಹ ಹೇಯ ಕೃತ್ಯ ಖಂಡನೀಯ ಎಂದರು.
ಬ್ರಷ್ಟಾಚಾರದ ಕುರಿತು ಮಾತನಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನೈತಿಕ ಹಕ್ಕಿಲ್ಲ. ಅವರ ಕುಟುಂಬದವರೇ ಆದ ಪ್ರಜ್ವಲ್ ರೇವಣ್ಣ ಅವರು ಈ ಹಿಂದೆ ಸೂಟ್ ಕೇಸ್ ರಾಜಕಾರಣದ ಕುರಿತು ಮಾತನಾಡಿದ್ದರು ಎಂದು ಟೀಕಿಸಿದ ಪ್ರಮೋದ್ ಹೆಗಡೆ, ರೆಸಾರ್ಟ್ ರಾಜಕಾರಣದ ಬಗ್ಗೆಯೂ ಜೆಡಿಎಸ್ನವರಿಗೆ ಹೇಳುವ ಹಕ್ಕಿಲ್ಲ ಎಂದರು.
ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಐದು ವರ್ಷ ಸಮರ್ಥ ಆಡಳಿತ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ, ಪಾರದರ್ಶಕ, ಜನಪರ ಆಡಳಿತ ನೀಡಿದ್ದಾರೆ. ಮೋದಿಯವರೆ ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬ ಮುಲಾಯಂ ಸಿಂಗ್ ಯಾದವ್ ಅವರ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ ಎಂದರು.
ಯಲ್ಲಾಪುರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೆಡಿಎಸ್ನವರ ಗೂಂಡಾ ಸಂಸ್ಕೃತಿಯನ್ನು ತೋರಿಸುತ್ತದೆ. ಜೆಡಿಎಸ್ ಪ್ರಮುಖರ ಮಾರ್ಗದರ್ಶನದಂತೆ ನಡೆಯುತ್ತಿರುವ ಇಂತಹ ತಾಲೀಬಾನ್ ಸಂಸ್ಕೃತಿಯು ಖಂಡನೀಯವಾಗಿದೆ. ಇಂತಹ ಘಟನೆಗಳಿಗೆ ಹೆದರದೇ ಘಟನೆಯನ್ನು ಖಂಡಿಸಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದರು. ಹಾಗೆ ನೋಡಿದರೆ ಇಂತಹ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಜೆಡಿಎಸ್ ಮುಖಂಡರ ನೇತೃತ್ವದಲ್ಲಿ ಇಂತಹ ಘಟನೆಗಳು ನಡೆದಿವೆ. 1997-98ರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. 1994ರಲ್ಲಿ ರಾಮಕೃಷ್ಣ ಹೆಗಡೆಯವರ ಮೇಲೆ ಚಪ್ಪಲಿ ತೂರಾಟವೂ ನಡೆದಿತ್ತು. ನಂತರದ ದಿನಗಳಲ್ಲಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ ಅವರ ಮನೆಯ ಮೇಲೂ ದಾಳಿ ನಡೆದಿತ್ತು. ಹೀಗೆ ಅನೇಕ ಸಲ ಇಂತಹ ಘಟನೆಗಳು ನಡೆದಿವೆ. ಈಗ ಪುನಃ ಇಂತಹ ಘಟನೆ ಮರುಕಳಿಸಿದೆ. ಅಧಿಕಾರಕ್ಕೋಸ್ಕರ ಜೆಡಿಎಸ್ ಮುಖಂಡರ ಇಂತಹ ಹೇಯ ಕೃತ್ಯ ಖಂಡನೀಯ ಎಂದರು.
ಬ್ರಷ್ಟಾಚಾರದ ಕುರಿತು ಮಾತನಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನೈತಿಕ ಹಕ್ಕಿಲ್ಲ. ಅವರ ಕುಟುಂಬದವರೇ ಆದ ಪ್ರಜ್ವಲ್ ರೇವಣ್ಣ ಅವರು ಈ ಹಿಂದೆ ಸೂಟ್ ಕೇಸ್ ರಾಜಕಾರಣದ ಕುರಿತು ಮಾತನಾಡಿದ್ದರು ಎಂದು ಟೀಕಿಸಿದ ಪ್ರಮೋದ್ ಹೆಗಡೆ, ರೆಸಾರ್ಟ್ ರಾಜಕಾರಣದ ಬಗ್ಗೆಯೂ ಜೆಡಿಎಸ್ನವರಿಗೆ ಹೇಳುವ ಹಕ್ಕಿಲ್ಲ ಎಂದರು.
ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಐದು ವರ್ಷ ಸಮರ್ಥ ಆಡಳಿತ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛ, ಪಾರದರ್ಶಕ, ಜನಪರ ಆಡಳಿತ ನೀಡಿದ್ದಾರೆ. ಮೋದಿಯವರೆ ಮತ್ತೊಮ್ಮೆ ಪ್ರಧಾನಿ ಆಗಲಿ ಎಂಬ ಮುಲಾಯಂ ಸಿಂಗ್ ಯಾದವ್ ಅವರ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ ಎಂದರು.