ಆ್ಯಪ್ನಗರ

ವಿಧಾನ ಪರಿಷತ್ ಚುನಾವಣೆ ಟಿಕೆಟ್ ಹಂಚಿಕೆ ಗೊಂದಲದ ನಡುವೆ ವಿದೇಶದಲ್ಲಿ ಕುಳಿತ ದೇಶಪಾಂಡೆ!

ಒಂದೊಮ್ಮೆ ದೇಶಪಾಂಡೆಯವರನ್ನು ಬಿಟ್ಟು ಟಿಕೆಟ್ ಘೋಷಣೆ ಮಾಡಿದರೆ ಜಿಲ್ಲೆಯಲ್ಲಿ ಅಭ್ಯರ್ಥಿ ಸ್ಪರ್ಧೆ ಮಾಡುವುದು ಕಷ್ಟ ಎನ್ನುವುದು ನಾಯಕರ ಚಿಂತನೆ. ಅದಕ್ಕಾಗಿಯೇ ದೇಶಪಾಂಡೆ ಬರಲಿ ಎಂದು ಟಿಕೆಟ್ ಘೋಷಣೆ ಮಾಡದೇ ಮುಂದೂಡಲಾಗುತ್ತಿದ್ದು, ಇದು ಕೆಲ ಜಿಲ್ಲೆಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ದೇಶಪಾಂಡೆ ಬರುವವರೆಗೂ ಟಿಕೆಟ್ ಯಾರಿಗೆ ಕೊಡಬೇಕು ಎಂದು ನಿರ್ಣಯಿಸಲು ರಾಜ್ಯ ನಾಯಕರು ಕೂಡ ಹಿಂದೇಟು ಹಾಕಿದ್ದು, ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು ದೇಶಪಾಂಡೆ ಬರುವಿಕೆಗಾಗಿ ಕಾದು ಕಾದು ಹೈರಾಣಾಗಿದ್ದಾರೆ.

Lipi 17 Nov 2021, 11:39 am
ಕಾರವಾರ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಕೂಡ ಪ್ರಾರಂಭವಾಗಿದೆ. ಈ ನಡುವೆ ಕಾಂಗ್ರೆಸ್ ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ಪ್ರಾರಂಭವಾಗಿದ್ದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ನಿರ್ಧಾರ ಕೈಗೊಳ್ಳಬೇಕಿದ್ದ ಕಾಂಗ್ರೆಸ್ ಧುರೀಣ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಮಾತ್ರ ವಿದೇಶ ಪ್ರವಾಸದಲ್ಲಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಗೊಂದಲಕ್ಕೆ ಕಾರಣವಾಗಿದೆ.
Vijaya Karnataka Web R V Deshpande


ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ನಲ್ಲಿ ಈಗಾಗಲೇ ಆರು ನಾಯಕರುಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ದಿನೇ ದಿನೇ ಈ ಆಕಾಂಕ್ಷಿಗಳ ಸಂಖ್ಯೆ ಸಹ ಏರುತ್ತಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆಯ ದಿನ ಆಗಿರುವುದರಿಂದ ಇನ್ನು ಒಂದೆರಡು ದಿನದಲ್ಲಿ ಟಿಕೆಟ್ ಯಾರಿಗೆಂದು ಘೋಷಣೆ ಮಾಡಲೇ ಬೇಕಿದೆ. ಈ ನಡುವೆ ಮಾಜಿ ಸಚಿವ ದೇಶಪಾಂಡೆ ವಿದೇಶಕ್ಕೆ ತೆರಳಿರುವುದು ಪಕ್ಷದ ನಾಯಕರ ತಲೆನೋವಿಗೆ ಕಾರಣವಾಗಿದೆ. ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದರೆ ದೇಶಪಾಂಡೆ ಗಮನಕ್ಕೆ ತಂದೇ ತೆಗೆದುಕೊಳ್ಳಲಾಗುತ್ತದೆ. ಕೆಪಿಸಿಸಿಯಿಂದ ಹಿಡಿದು ಎಐಸಿಸಿಯವರೆಗಿನ ನಾಯಕರು ದೇಶಪಾಂಡೆ ನಿರ್ಣಯಕ್ಕೆ ಬದ್ಧರಾಗಿರುತ್ತಾರೆ.
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಾಗಿ ಹುಡುಕಾಟ,‌ ಉಲ್ಟಾ ಹೊಡೆದ ಎಸ್.ಎಲ್.ಘೋಟ್ನೇಕರ್!
ಸದ್ಯ ಟಿಕೆಟ್ ನೀಡುವ ವಿಚಾರದಲ್ಲೂ ಆರ್‌.ವಿ ದೇಶಪಾಂಡೆ ನಿರ್ಣಯಕ್ಕಾಗಿ ಕೆಪಿಸಿಸಿಯ ನಾಯಕರುಗಳು ಕಾಯುತ್ತಿದ್ದಾರೆ. ಆದರೆ ಕಳೆದ ಒಂದು ವಾರದಿಂದ ದೇಶಪಾಂಡೆ ವಿದೇಶ ಪ್ರವಾಸದಲ್ಲಿದ್ದು, ನವೆಂಬರ್ 18 ಅಥವಾ 19ಕ್ಕೆ ವಾಪಾಸ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೇಶಪಾಂಡೆ ಬರುವವರೆಗೂ ಟಿಕೆಟ್ ಯಾರಿಗೆ ಕೊಡಬೇಕು ಎಂದು ನಿರ್ಣಯಿಸಲು ರಾಜ್ಯ ನಾಯಕರು ಕೂಡ ಹಿಂದೇಟು ಹಾಕಿದ್ದು, ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು ದೇಶಪಾಂಡೆ ಬರುವಿಕೆಗಾಗಿ ಕಾದು ಕಾದು ಹೈರಾಣಾಗಿದ್ದಾರೆ.

ಒಂದೊಮ್ಮೆ ದೇಶಪಾಂಡೆಯವರನ್ನು ಬಿಟ್ಟು ಟಿಕೆಟ್ ಘೋಷಣೆ ಮಾಡಿದರೆ ಜಿಲ್ಲೆಯಲ್ಲಿ ಅಭ್ಯರ್ಥಿ ಸ್ಪರ್ಧೆ ಮಾಡುವುದು ಕಷ್ಟ ಎನ್ನುವುದು ನಾಯಕರ ಚಿಂತನೆ. ಅದಕ್ಕಾಗಿಯೇ ದೇಶಪಾಂಡೆ ಬರಲಿ ಎಂದು ಟಿಕೆಟ್ ಘೋಷಣೆ ಮಾಡದೇ ಮುಂದೂಡಲಾಗುತ್ತಿದ್ದು, ಇದು ಕೆಲ ಜಿಲ್ಲೆಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೂ ಕಾರಣವಾಗಿದೆ ಎನ್ನಲಾಗಿದೆ. ಚುನಾವಣೆ ದಿನಾಂಕ ಘೋಷಣೆಯಾಗಿರುವ ಇಂತಹ ಸಂದರ್ಭದಲ್ಲಿ ವಿದೇಶ ಪ್ರವಾಸದ ಅಗತ್ಯತೆಯಾದರೂ ಏನಿತ್ತು? ಒಂದೊಮ್ಮೆ ಹೋದರೂ ಚುನಾವಣೆಗಾಗಿ ಶೀಘ್ರವೇ ವಾಪಸ್ಸಾಗಬೇಕಿತ್ತು ಎನ್ನುವುದು ಕೆಪಿಸಿಸಿ ಮಟ್ಟದ ಕೆಲ ನಾಯಕರ ಹಾಗೂ ಜಿಲ್ಲೆಯ ಮುಖಂಡರ ಅಭಿಪ್ರಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ