ಆ್ಯಪ್ನಗರ

ಮೊಬೈಲ್‌ ವ್ಯಸನ ದೊಡ್ಡ ಪಿಡುಗು

ಯಲ್ಲಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌, ಸ್ವಾಮಿ ವಿವೇಕಾನಂದ ಬಳಗ ವಜೃಳ್ಳಿ, ಶಾರದಾಂಬಾ ಶಿಕ್ಷಣ ಸಂಸ್ಥೆ ನಾಯಕನಕೆರೆ ಇವರ ಸಂಯುಕ್ತ ಆಶ್ರಯದಲ್ಲಿಎರಡು ದಿನಗಳ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮಕ್ಕೆ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲೆಯ ಸಭಾಭವನದಲ್ಲಿಶನಿವಾರ ಚಾಲನೆ ನೀಡಲಾಯಿತು.

Vijaya Karnataka 13 Jan 2020, 5:00 am
ಯಲ್ಲಾಪುರ : ಅಖಿಲ ಭಾರತೀಯ ಸಾಹಿತ್ಯ ಪರಿಷತ್‌, ಸ್ವಾಮಿ ವಿವೇಕಾನಂದ ಬಳಗ ವಜೃಳ್ಳಿ, ಶಾರದಾಂಬಾ ಶಿಕ್ಷಣ ಸಂಸ್ಥೆ ನಾಯಕನಕೆರೆ ಇವರ ಸಂಯುಕ್ತ ಆಶ್ರಯದಲ್ಲಿಎರಡು ದಿನಗಳ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮಕ್ಕೆ ಪಟ್ಟಣದ ನಾಯಕನಕೆರೆ ಶಾರದಾಂಬಾ ಪಾಠಶಾಲೆಯ ಸಭಾಭವನದಲ್ಲಿಶನಿವಾರ ಚಾಲನೆ ನೀಡಲಾಯಿತು.
Vijaya Karnataka Web mobile phone addiction
ಮೊಬೈಲ್‌ ವ್ಯಸನ ದೊಡ್ಡ ಪಿಡುಗು


ಧಾರವಾಡದ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿಯವರು 'ಮೊಬೈಲ್‌ ವ್ಯಸನದಿಂದ ಮುಕ್ತಿ,ಪರಿಹಾರ ಹೇಗೆ?' ಕುರಿತು ವಿಶೇಷ ಉಪನ್ಯಾಸ ನೀಡಿ, ಮೊಬೈಲ್‌ ವ್ಯಸನ ಎಂಬುದು ಇಂದಿನ ಬಹುದೊಡ್ಡ ಪಿಡುಗಾಗಿ ಪರಿಣಮಿಸಿದೆ. ಮೊಬೈಲ್‌ ವ್ಯಸನದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದು ಎಂದರು.

ಮೊಬೈಲ್‌ನಿಂದ ವೃಥಾ ಸಮಯ ವ್ಯರ್ಥ ಹಾಗೂ ಹಣದ ವ್ಯಯವೂ ಉಂಟಾಗುತ್ತದೆ. ಮೊಬೈಲ್‌ ವ್ಯಸನ ನಾವೇ ತಂದುಕೊಂಡ ದುರಭ್ಯಾಸವಾಗಿದೆ. ಶಾಲಾ ಹಂತದಲ್ಲಿಮಕ್ಕಳು ಅತಿಯಾಗಿ ಮೊಬೈಲ್‌ ಬಳಸಿದರೆ ಮಕ್ಕಳಲ್ಲಿಮಾನಸಿಕ, ದೈಹಿಕ ತೊಂದರೆ ಕಾಣಿಸಿಕೊಳ್ಳಬಹುದು. ಅಭ್ಯಾಸದಲ್ಲಿಹಿನ್ನೆಡೆಯಾಗುವ ಜೊತೆಯಲ್ಲಿಬರವಣಿಗೆ ಹಾಗೂ ಓದುವ ಕೌಶಲ್ಯವೂ ನಾಶವಾಗುತ್ತದೆ. ಮೊಬೈಲ್‌ನಲ್ಲಿಟೈಪಿಸುವ ಶಾರ್ಟಕಟ್‌ ಭಾಷೆಯಿಂದ ಪರೀಕ್ಷೆಯಲ್ಲಿಉತ್ತರ ಬರೆಯಲೂ ತೊಂದರೆಯಾಗುತ್ತಿದೆ. ಮೊಬೈಲ್‌ ಬದಲು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಕುಟುಂಬದವರೊಂದಿಗೆ ಸಂತೋಷದಿಂದ ಕಾಲಕಳೆಯುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಮನೋದೈಹಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆಗಳು, ಸಂಗೀತ ಮುಂತಾದವುಗಳತ್ತ ಆಸಕ್ತಿ ವಹಿಸಬೇಕು ಎಂದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ