ಆ್ಯಪ್ನಗರ

ಮೋದಿ ಟೀಕೆ: ಟಿ.ಬಿ.ಜಯಚಂದ್ರ ಹೇಳಿಕೆ ಖಂಡನಾರ್ಹ

ಯಲ್ಲಾಪುರ : ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಆಕ್ಷೇಪಾರ್ಹ ಮಾತನ್ನಾಡಿದ ಕಾಂಗ್ರೆಸ್‌ ಮುಖಂಡ ಜಯಚಂದ್ರ ಅವರ ಮಾತು ಖಂಡನೀಯ ಎಂದು ಜಿಲ್ಲಾ ಬಿಜೆಪಿ ವಕ್ತಾರ ಪ್ರಮೋದ ಹೆಗಡೆ ಹೇಳಿದರು.

Vijaya Karnataka 11 Nov 2018, 5:00 am
ಯಲ್ಲಾಪುರ : ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಆಕ್ಷೇಪಾರ್ಹ ಮಾತನ್ನಾಡಿದ ಕಾಂಗ್ರೆಸ್‌ ಮುಖಂಡ ಜಯಚಂದ್ರ ಅವರ ಮಾತು ಖಂಡನೀಯ ಎಂದು ಜಿಲ್ಲಾ ಬಿಜೆಪಿ ವಕ್ತಾರ ಪ್ರಮೋದ ಹೆಗಡೆ ಹೇಳಿದರು.
Vijaya Karnataka Web modi criticism tb jayachandras statement is condemnable
ಮೋದಿ ಟೀಕೆ: ಟಿ.ಬಿ.ಜಯಚಂದ್ರ ಹೇಳಿಕೆ ಖಂಡನಾರ್ಹ


ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೋಟು ಅಮಾನ್ಯೀಕರಣದ ಹಿನ್ನೆಲೆಯಲ್ಲಿ ಮಾತನಾಡುವಾಗ ಕಾಂಗ್ರೆಸ್‌ ಮುಖಂಡ ಜಯಚಂದ್ರ ಅವರು ಮೋದಿಯವರ ಕುರಿತು ಆಡಿದ ನಿಕೃಷ್ಟವಾದ ಮಾತು ಖಂಡನೀಯವಾಗಿದೆ. ದೇಶದಲ್ಲಿ ಕಾಂಗೆÜ್ರಸ್‌ ತನಗೆ ತಾನೇ ಸುಟ್ಟುಹೋಗುವ ಕಾಲ ಬಂದಿದೆ. ನೋಟು ಅಮಾನ್ಯೀಕರಣ,ಜಿಎಸ್‌ಟಿ ಜಾರಿ ಮುಂತಾದ ಕ್ರಾಂತಿ ಕಾರಿ ಕೆಲಸಗಳು ಕೇಂದ್ರದಿಂದ ನಡೆದಿರುವದನ್ನು ದೇಶವೇ ಕೊಂಡಾಡುತ್ತಿದೆ ಎಂದರು. ರಾಜ್ಯ ಸರ್ಕಾರವು ಮತಾಂಧ ಟಿಪ್ಪು ಜಯಂತಿಯನ್ನು ಆಚರಿಸಿ, ಅಲ್ಪ ಸಂಖ್ಯಾತರ ತುಷ್ಟೀಕರಣ ಮಾಡಲು ಹೊರಟಿದೆ. ಇದಕ್ಕೆ ನಮ್ಮ ವಿರೋಧವಿದೆ. ಅಷ್ಟಕ್ಕೂ ಜಯಂತಿಗಳ ಆಚರಣೆ ಮಾಡಬೇಕಿತ್ತು ಎಂದರೆ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ, ಸಂತ ಶಿಶುನಾಳ ಶರೀಪರ ಜಯಂತಿಗಳನ್ನು ಆಚರಿಸಬಹುದಿತ್ತು. ಟಿಪ್ಪು ಜಯಂತಿ ಆಚರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರದ ಪ್ರಮುಖರೇ ಈ ಆಚರಣೆಗೆ ಬರದೇ ಪಲಾಯನಮಾಡಿದ್ದಾರೆ ಎಂದು ಆರೋಪಿಸಿದರು.

ತಾಲೂಕಾ ಬಿಜೆಪಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ಅಲ್ಪ ಸಂಖ್ಯಾತ ಓಲೈಕೆಗಾಗಿ, ಮತ ಗಳಿಕೆಯ ಉದ್ದೇಶದಿಂದ ಆಚರಿಸಲಾಗುತ್ತಿರುವ ಟಿಪ್ಪು ಜಯಂತಿಯನ್ನು ವಿರೋಧಿಸುತ್ತೇವೆ ಎಂದರು. ಬಿಜೆಪಿ ಪ್ರಮುಖರಾದ ಗಣಪತಿ ಮುದ್ದೇಪಾಲ್‌,ಶ್ಯಾಮಿಲಿ ಪಾಠಣಕರ್‌, ಆದಿತ್ಯ ಗುಡಿಗಾರ್‌, ಶ್ರೀಪಾದ ಭಟ್ಟ,ಬಾಬು ಬಾಂದೇಕರ್‌,ಪ್ರಸಾದ ಹೆಗಡೆ ಮುಂತಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ