ಆ್ಯಪ್ನಗರ

ಮೋದಿಗೆ ಇ-ಪೋಸ್ಟ್‌ ಶುಭಾಶಯ..!

ಶಿರಸಿ : ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಚಂಡ ಬಹುಮತ ಪಡೆದ ನರೇಂದ್ರ ಮೋದಿ ಅವರಿಗೆ ಶುಭಾಶಯ ಹೇಳುವ ಆಸಕ್ತಿಯಿದೆಯೇ ? ಅಂತಹ ಆಸಕ್ತ ಜನಸಾಮಾನ್ಯರು ಇ-ಪೋಸ್ಟ್‌ ಮೂಲಕ ಶುಭಾಶಯ ಕೋರಲು ಅಂಚೆ ಇಲಾಖೆ ವಿನೂತನ ಅವಕಾಶ ಕಲ್ಪಿಸಿದೆ.

Vijaya Karnataka 28 May 2019, 5:00 am
ಶಿರಸಿ : ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಚಂಡ ಬಹುಮತ ಪಡೆದ ನರೇಂದ್ರ ಮೋದಿ ಅವರಿಗೆ ಶುಭಾಶಯ ಹೇಳುವ ಆಸಕ್ತಿಯಿದೆಯೇ ? ಅಂತಹ ಆಸಕ್ತ ಜನಸಾಮಾನ್ಯರು ಇ-ಪೋಸ್ಟ್‌ ಮೂಲಕ ಶುಭಾಶಯ ಕೋರಲು ಅಂಚೆ ಇಲಾಖೆ ವಿನೂತನ ಅವಕಾಶ ಕಲ್ಪಿಸಿದೆ.
Vijaya Karnataka Web SRS-27SRS6
ಶಿರಸಿಇ ಅಂಚೆ ಕಚೇರಿಯಲ್ಲಿ ಮೋದಿಗೆ ಶುಭಾಶಯ ಪತ್ರ ರವಾನಿಸುತ್ತಿರುವ ಅಭಿಮಾನಿ.


ಈಗಷ್ಟೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಮತ್ತೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಮೋದಿ ದಾಪುಗಾಲು ಇಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಹಬ್ಬ ಮತ್ತಿತರ ಸಂದರ್ಭದಲ್ಲಿ ಶುಭಾಷಯ ಹೇಳುವ ಯೋಜನೆಯನ್ನು ಅಂಚೆ ಇನ್ನಷ್ಟು ಪ್ರಚುರಗೊಳಿಸಿದೆ. ಮೋದಿಗೂ ಟೆಲಿಗ್ರಾಮ ಮಾದರಿಯಲ್ಲಿ ರೆಡಿಮೆಡ್‌ ಮೆಸೇಜ್‌ನ್ನು ಇ-ಪೋಸ್ಟ್‌ ಮಾಡಬಹುದಾಗಿದೆ. ಅದಕ್ಕಾಗಿ 10ರೂ.ಶುಲ್ಕ ನಿಗದಿಪಡಿಸಿದ್ದು ಈ ಮೂಲಕ ಇಲಾಖೆಯ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೊನ್ಮುಖವಾಗಿದೆ.

ಮೋದಿ ಪರ ಬೆಂಬಲಿಗರು ಸಾಕಷ್ಟು ಮಂದಿ ಇದ್ದು ಅವರೆಲ್ಲ ಈ ಚುನಾವಣೆಯಲ್ಲಿ ಮೋದಿ ಸಾಧನೆಗೆ ಹರ್ಷ ವ್ಯಕ್ತಪಡಿಸುತ್ತಿರುವುದು ಸಹಜ. ಈ ಸಂತಸದ ಕ್ಷ ಣದಲ್ಲಿ ನೇರವಾಗಿ ಮೋದಿ ಅವರಿಗೆ ಜನಸಾಮಾನ್ಯರಾಗಿ ಶುಭಾಶಯ ಕೋರಲು ಅಂಚೆ ಇಲಾಖೆ ಮೂಲಕ ಮಾರ್ಗ ದೊರೆತಿದೆ. ಇದನ್ನು ತಿಳಿದ ಶಿರಸಿ ಅಂಚೆ ಇಲಾಖೆ ವಿಭಾಗೀಯ ಕಚೇರಿ ವ್ಯಾಪ್ತಿಯ ತಾಲೂಕುಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 2000ಮಂದಿ ಇ-ಪೋಸ್ಟ್‌ ಮೆಸೇಜ್‌ ಕಳುಹಿಸಿದ್ದಾರೆ.

ರಾಜ್ಯದಲ್ಲೇ ಮಾದರಿಯಾಗಿ

ಶಿರಸಿ ಅಂಚೆ ವಿಭಾಗ ಶಿರಸಿ, ಸಿದ್ದಾಪುರ, ಹಳಿಯಾಳ, ದಾಂಡೇಲಿ, ಯಲ್ಲಾಪುರ ಮುಂತಾದ ತಾಲೂಕುಗಳ ವ್ಯಾಪ್ತಿ ಹೊಂದಿದೆ. ಈಗಾಗಲೇ ಅಂಚೆ ಇಲಾಖೆಯಲ್ಲಿ ಹಬ್ಬಗಳ ಸಂದರ್ಭದಲ್ಲಿ, ನಿವೃತ್ತರಿಗೆ ಸುಭಾಷಯ ಕೋರುವ ಇ-ಪೋಸ್ಟ್‌ ವ್ಯವಸ್ಥೆಯಿತ್ತು. ಇದೇ ಮಾದರಿ ವ್ಯವಸ್ಥೆಯನ್ನು ಮೋದಿಗೆ ಸುಭಾಶಯ ಕೋರುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಮಾಹಿತಿಯನ್ನು ಪೋಸ್ಟ್‌ಮನ್‌ಗಳ ಮೂಲಕ ನಗರ ಹಾಗೂ ಗ್ರಾಮೀಣ ಭಾಗದ ಆಸಕ್ತ ಜನಸಾಮಾನ್ಯರಿಗೆ ನೀಡಲಾಗಿದ್ದು ಸಹಸ್ರಾರು ಸಂಖ್ಯೆಯಲ್ಲಿ ಇ-ಪೋಸ್ಟ್‌ಗಳನ್ನು ಕಳಿಸಲಾಗಿದೆ. ಇನ್ನೊಂದು ವಾರ ಕಾಲ ವ್ಯವಸ್ಥೆ ಇರಬಹುದು ಎನ್ನುತ್ತವೆ ಅಂಚೆ ಮೂಲಗಳು. ಇಲ್ಲಿಯ ಅಂಚೆ ವಿಭಾಗೀಯ ಕಚೇರಿ ರಾಜ್ಯದಲ್ಲೇ ಮಾದರಿ ರೀತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸುತ್ತಿರುವುದು ವಿಶೇಷ.

ಏನಿದು ಇ-ಪೋಸ್ಟ್‌..?

ಶುಭಾಶಯ ಕೋರಲು ರೆಡಿಮೇಡ್‌ ಮೇಸೆಜ್‌ ಹೊಂದಿದ ಪತ್ರವನ್ನು ಅಂಚೆ ಇಲಾಖೆಯಿಂದ ಸಿದ್ಧಪಡಿಸಲಾಗಿದೆ. ಅದನ್ನು 10ರೂ.ಶುಲ್ಕದಲ್ಲಿ ಆಸಕ್ತ ಜನಸಾಮಾನ್ಯರಿಗೆ ನೀಡಿ ಅದರಲ್ಲಿ ಅವರ ಹೆಸರು, ವಿಳಾಸ ಪಡೆಯಲಾಗುತ್ತದೆ. ಅಂಚೆಯಣ್ಣನ ಪತ್ರದಲ್ಲಿನ ರೆಡಿಮೇಡ್‌ ಮೆಸೆಜ್‌ ಹೊರತಾಗಿ ಅದರಲ್ಲಿಯೇ ಜನಸಾಮಾನ್ಯರು ತಮ್ಮದೇ ಆದ ರೀತಿಯಲ್ಲಿ ಶುಭಾಶಯ ಬರೆದುಕೊಡಬಹುದು. ಆ ಪತ್ರವನ್ನು ದಾಖಲೆಯಾಗಿಟ್ಟುಕೊಂಡು ಇ-ಪೋಸ್ಟ್‌ ಮೂಲಕ ಈ ಮೆಸೆಜ್‌ನ್ನು ಮೋದಿ ಕಚೇರಿ ವ್ಯಾಪ್ತಿಯ ಅಂಚೆ ಕಚೇರಿಗೆ ರವಾನಿಸಲಾಗುತ್ತದೆ.ಅಲ್ಲಿ ಅದರ ಪ್ರಿಂಟ್‌ ತೆಗೆದು ಪ್ರದಾನಿ ಕಚೇರಿಗೆ ಕಳುಹಿಸಲಾಗುತ್ತದೆ ಎಂಬ ಮಾಹಿತಿ ಅಂಚೆ ಮೂಲಗಳಿಂದ ದೊರೆತಿದೆ.

ಮೇಸೆಜ್‌ನಲ್ಲಿ ಏನಿದೆ
ಆತ್ಮೀಯ ಶುಭಾಶಯಗಳು...ನಿಮ್ಮ ದೊಡ್ಡ ಮಟ್ಟದ ಗೆಲುವಿನ ಕೀರ್ತಿ ನಮಗೂ ಸಹ ಇದೆ. ಈ ದೇಶ ಬಲಿಷ್ಠ ಹಾಗೂ ದೇಶಭಕ್ತಿಯ ನರೇಂದ್ರ ಮೋದಿ ಎಂಬ ಪ್ರಧಾನಿಯನ್ನು ಕೊಟ್ಟಿದೆ ಎಂಬ ಅಂಶವನ್ನು ಅಂಚೆಯಣ್ಣನ ಶುಭಾಶಯ ಪತ್ರ ಒಳಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ