ಆ್ಯಪ್ನಗರ

ಎಲ್‌ಐಸಿಯಲ್ಲಿತೊಡಗಿಸಿದ ಹಣ ದೇಶದ ಅಭಿವೃದ್ಧಿಗೆ

ಯಲ್ಲಾಪುರ : ದೇಶದ ಪ್ರಜೆಗಳು ಭಾರತೀಯ ಜೀವ ವಿಮಾ ನಿಗಮದಲ್ಲಿತೊಡಗಿಸಿದ ಹಣ ದೇಶದ ಅಭಿವೃದ್ಧಿಗಾಗಿಯೇ ವಿನಿಯೋಗಿಸಲಾಗುತ್ತದೆ ಎಂದು ಯಲ್ಲಾಪುರ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕ ವಿ.ಜಿ.ಹೆಗಡೆ ಹೇಳಿದರು.

Vijaya Karnataka 11 Sep 2019, 5:00 am
ಯಲ್ಲಾಪುರ : ದೇಶದ ಪ್ರಜೆಗಳು ಭಾರತೀಯ ಜೀವ ವಿಮಾ ನಿಗಮದಲ್ಲಿತೊಡಗಿಸಿದ ಹಣ ದೇಶದ ಅಭಿವೃದ್ಧಿಗಾಗಿಯೇ ವಿನಿಯೋಗಿಸಲಾಗುತ್ತದೆ ಎಂದು ಯಲ್ಲಾಪುರ ಜೀವ ವಿಮಾ ನಿಗಮದ ಶಾಖಾ ವ್ಯವಸ್ಥಾಪಕ ವಿ.ಜಿ.ಹೆಗಡೆ ಹೇಳಿದರು.
Vijaya Karnataka Web 10 YLP 3_24


ಅವರು ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖಾ ಕಾರ್ಯಾಲಯದಲ್ಲಿವಿಮಾ ಸಪ್ತಾಹದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗ್ರಾಹಕರಿಟ್ಟ ಹಣ ನೇರವಾಗಿ ದೇಶದ ಅಭಿವೃದ್ಧಿಗೆ ಪೂರಕವಾದ ನೀರಾವರಿ, ವಿದ್ಯುತ್‌, ರಸ್ತೆ, ವಸತಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೀಡುತ್ತದೆ. ಇದರಿಂದ ದೇಶದ ಪ್ರಜೆಗಳು ಎಲ್‌.ಐ.ಸಿ.ಯಲ್ಲಿಇಟ್ಟ ಹಣ ತಮ್ಮ ಊರಿನ ಅಭಿವೃದ್ಧಿಗೆ ಬಳಸಿಕೊಂಡಂತಾಗುತ್ತದೆ ಎಂದರು. ನಿಗಮ ಇಷ್ಟು ದೊಡ್ಡ ಪ್ರಮಾಣದಲ್ಲಿಬೆಳೆಯಲು ಪ್ರತನಿಧಿಗಳು ಕಾರಣ. ಎಲ್‌ಐಸಿಯ ಪ್ರತಿ ಗ್ರಾಹಕರೂ ವಿಶ್ವಾಸದಿಂದ ಇಟ್ಟ ಹಣಕ್ಕೆ ಅವರ ಬೇಡಿಕೆಯಂತೆ ಮರಳಿ ಹಣ ನೀಡುವ ಪ್ರಾಮಾಣಿಕತನವನ್ನು ಈವರೆಗೂ ಕಪ್ಪು ಚುಕ್ಕೆಯಿಲ್ಲದೇ, ಭ್ರಷ್ಟಾಚಾರ ರಹಿತ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ಈ ಸಪ್ತಾಹದ ಸಂದರ್ಭದಲ್ಲಿಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿಗಮದ ಕುರಿತು ಹಲವು ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ನಿಗಮದ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಅಭಿವೃದ್ಧಿ ಅಧಿಕಾರಿ ರವೀಂದ್ರ ಪ್ರಭು ಮಾತನಾಡಿ, ನಮ್ಮ ದುಡಿಮೆಗೆ ತಕ್ಕುದಾದ ವಿಮಾ ಭದ್ರತೆ ಅಗತ್ಯವಾಗಿದೆ. ವೃದ್ಧಾಪ್ಯದಲ್ಲಿನಮ್ಮ ಆದಾಯಗಳು ಕಡಿಮೆಯಾಗುತ್ತವೆ. ಆ ದೃಷ್ಟಿಯಿಂದ ಸಣ್ಣ ವಯಸ್ಸಿನಲ್ಲಿವಿಮೆಯಲ್ಲಿಹಣ ತೊಡಗಿಸುವ ಮೂಲಕ ಭವಿಷ್ಯತ್ತಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಕಣಗಿಲ್‌ ಮಾತನಾಡಿ, ನಿಗಮ ಈ ವರ್ಷ 7 ದಿನಗಳ ಕಾಲ ಹಮ್ಮಿಕೊಂಡ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸಿದ 'ಭಾರತದ ಅಭಿವೃದ್ಧಿಯಲ್ಲಿಭಾರತೀಯ ಜೀವ ವಿಮಾ ನಿಗಮದ ಕೊಡುಗೆ' ಕುರಿತ ಪ್ರಬಂಧ ಸ್ಪರ್ಧೆಯಲ್ಲಿವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರೀತಿಕಾ ಭಟ್ಟ ಪ್ರಥಮ; ವಿಶ್ವದರ್ಶನ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹೃತೀತ ಪಂಡಿತ್‌ ದ್ವಿತೀಯ; ವೈ.ಟಿ.ಎಸ್‌.ಎಸ್‌.ನ ಶ್ರೀಧರ ಭಟ್ಟ ತೃತೀಯ ಸ್ಥಾನ ಪಡೆದರು.

ಹಲವು ಸ್ಪರ್ಧೆಗಳಲ್ಲಿವಿಜೇತರಾದ ಪ್ರತಿನಿಧಿಗಳಿಗೆ ಬಹುಮಾನ ವಿತರಿಸಲಾಯಿತು. ಉಪ ಆಡಳಿತಾಧಿಕಾರಿ ಪ್ರವೀಣ ಎಂ. ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು. ಅಭಿವೃದ್ಧಿ ಅಧಿಕಾರಿ ಮಧುಕೇಶ್ವರ ಹೆಗಡೆ ವಂದಿಸಿದರು. ಸಹಾಯಕ ಸಿಬ್ಬಂದಿ ಸುಧೀಂದ್ರ ಪೈ ಸಹಕರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ