ಆ್ಯಪ್ನಗರ

ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೂ ಮಹತ್ವ

ಶಿರಸಿ : ಮಕ್ಕಳ ಬೆಳವಣಿಗೆಯಲ್ಲಿಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯೂ ಮಹತ್ವದ್ದಾಗಿದೆ. ಪಠ್ಯೇತರ ವಿಷಯಗಳಿಂದ ಮಕ್ಕಳಲ್ಲಿಸಂಸ್ಕಾರ ಮತ್ತು ಸಮಸ್ಯೆ ಎದುರಿಸುವ ಶಕ್ತಿ ಬೆಳೆಯುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ವಿ.ಹೆಗಡೆ ಓಣಿಕೇರಿ ಹೇಳಿದರು.

Vijaya Karnataka 17 Jan 2020, 5:00 am
ಶಿರಸಿ : ಮಕ್ಕಳ ಬೆಳವಣಿಗೆಯಲ್ಲಿಪಠ್ಯದಷ್ಟೇ ಪಠ್ಯೇತರ ಚಟುವಟಿಕೆಯೂ ಮಹತ್ವದ್ದಾಗಿದೆ. ಪಠ್ಯೇತರ ವಿಷಯಗಳಿಂದ ಮಕ್ಕಳಲ್ಲಿಸಂಸ್ಕಾರ ಮತ್ತು ಸಮಸ್ಯೆ ಎದುರಿಸುವ ಶಕ್ತಿ ಬೆಳೆಯುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ವಿ.ಹೆಗಡೆ ಓಣಿಕೇರಿ ಹೇಳಿದರು.
Vijaya Karnataka Web more important than extracurricular activities
ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗೂ ಮಹತ್ವ


ಸದ್ಭಾವನಾ ಸೇವಾ ಸಂಸ್ಥೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲಿನಓಣಿಕೇರಿ ಸಹಯೋಗದಲ್ಲಿಏರ್ಪಡಿಸಿದ್ದ ಶಾಲಾ ಮಕ್ಕಳ ಮನರಂಜನೆ, ಪ್ರಶಸ್ತಿ ಪತ್ರ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ಸಿಗುವ ಅವಕಾಶ ಸರಿಯಾಗಿ ಬಳಸಿಕೊಂಡು ಬೆಳೆಯಬೇಕು ಎಂದರು.

ಇದೇ ಸಂದರ್ಭದಲ್ಲಿ2019-20ನೇ ಸಾಲಿನಲ್ಲಿಶಾಲಾ ಸ್ಪರ್ಧೆಗಳಲ್ಲಿಭಾಗವಹಿಸಿದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಿಸಲಾಯಿತು. ಕಳೆದ ಸಾಲಿನಲ್ಲಿಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿಅತೀ ಹೆಚ್ಚು ಅಂಕ ಗಳಿಸಿದ ಚೈತ್ರಾ ಹೆಗಡೆ ಓಣಿಕೇರಿ ಹಾಗೂ ಪೂಜಾ ಹೆಗಡೆ ಜಾಡಿಮನೆ ಅವರನ್ನು ಪುರಸ್ಕರಿಸಲಾಯಿತು. ವರ್ಗಾವಣೆಯಾದ ಶಿಕ್ಷಕಿ ಶಶಿಕಲಾ ಹೆಗಡೆ ಮುಂಡಗೇಸರ ಅವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.

ಗ್ರಾಪಂ ಸದಸ್ಯರಾದ ಜಿ.ವಿ.ಹೆಗಡೆ ಮುಂಡಗೇರಿ, ಎಸ್‌ಡಿಎಂಸಿ ಅಧ್ಯಕ್ಷ ನಾಗಪತಿ ಹೆಗಡೆ ಮಣ್ಣೀಮನೆ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಅಂಜನಾ ಹೆಗಡೆ, ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ವತ್ಸಲಾ ಹೆಗಡೆ, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಸುಬ್ರಾಯ ಹೆಗಡೆ ಉಪಸ್ಥಿತರಿದ್ದರು. ಸುವರ್ಣಾ ಹೆಗಡೆ ಪಾರ್ಥಿಸಿದರು. ನಂತರ ಶಾಲಾ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ, ಎಂ.ವಿ.ಶ್ರೇಯಾ ಅವರಿಂದ ಏಕಪಾತ್ರಾಭಿನಯ ಕಾರ್ಯಕ್ರಮ ನಡೆಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ