ಆ್ಯಪ್ನಗರ

ಇನ್ನಷ್ಟು ಭತ್ತದ ಗದ್ದೆಗಳು ಜಲಾವೃತ

ಶಿರಸಿ :ತಾಲೂಕಿನ ಪೂರ್ವಭಾಗದಲ್ಲಿಹಾದು ಹೋಗಿರುವ ವರದಾ ನದಿಗೆ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದ್ದು ಅಂಚಿನ ಮತ್ತಷ್ಟು ಕೃಷಿ ಭೂಮಿ ಜಲಾವೃತವಾಗಿದೆ.

Vijaya Karnataka 8 Aug 2020, 5:00 am
ಶಿರಸಿ :ತಾಲೂಕಿನ ಪೂರ್ವಭಾಗದಲ್ಲಿಹಾದು ಹೋಗಿರುವ ವರದಾ ನದಿಗೆ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದ್ದು ಅಂಚಿನ ಮತ್ತಷ್ಟು ಕೃಷಿ ಭೂಮಿ ಜಲಾವೃತವಾಗಿದೆ.
Vijaya Karnataka Web 7SRS10A_26
ಶಿರಸಿ ತಾಲೂಕಿನ ಮುಗವಳ್ಳಿಯಲ್ಲಿಭತ್ತದ ಗದ್ದೆ ಜಲಾವೃತವಾಗಿರುವುದು.


ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಷ್ಟೇ ಅಲ್ಲದೇ ಹೊರ ಜಿಲ್ಲೆಗಳಲ್ಲೂಮಳೆಯಾಗುತ್ತಿರುವುದರಿಂದ ವರದಾ ನದಿ ಉಕ್ಕೇರಿ ಹರಿಯುತ್ತಿದೆ. ಮುಗವಳ್ಳಿ ಭಾಗದಲ್ಲಿಗುರುವಾರ ನೂರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದ್ದು ಶುಕ್ರವಾರ ಇನ್ನು ನೂರು ಎಕರೆಗಿಂತ ಹೆಚ್ಚು ಪ್ರದೇಶವನ್ನು ಆವರಿಸಿದೆ. ಬಿತ್ತನೆ ಮಾಡಿದ ಭತ್ತದ ಗದ್ದೆಗಳು ನೀರಿನಲ್ಲಿಮುಳುಗಿ ನಿಂತಿವೆ. ಮಳೆ ಕಡಿಮೆಯಾಗಿದ್ದರೂ ನೀರು ಹೆಚ್ಚಳವಾಗುತ್ತಿದೆ. ಭತ್ತದ ಸಸಿಗಳು ನೀರಿನಲ್ಲಿಮುಳುಗಿದ್ದರೂ ಕೆಲ ದಿನ ಉಳಿಯುವಂತ ತಳಿಯನ್ನು ರೈತರು ಬಿತ್ತನೆ ಮಾಡಿದ್ದರೂ ಬಹಳ ದಿನ ಜಲಾವೃತವಾಗಿಯೇ ಇದ್ದರೆ ಎಂಬ ತಳಮಳ ರೈತರಲ್ಲಿಮೂಡಿದೆ.

ಕಳೆದ ವರ್ಷವೂ ಹೀಗೆ ಕೃಷಿ ಭೂಮಿ ಜಲಾವೃತವಾಗಿತ್ತು. ಸುಮಾರು ಹದಿನೈದು ದಿನ ಕಾಲ ನೀರು ಗದ್ದೆಗಳಲ್ಲಿಆವರಿಸಿದ್ದನ್ನು ಇಲ್ಲಿಉಲ್ಲೇಖಿಸಬಹುದು.

ಮಳೆ ಇಳಿಮುಖ : ಕಳೆದ ಎರಡ್ಮೂರು ದಿನಗಳಿಂದ ಹೆಚ್ಚಳವಾಗಿದ್ದ ಮಳೆ ತಾಲೂಕಿನಲ್ಲಿಶುಕ್ರವಾರ ಕಡಿಮೆಯಾಗಿತ್ತು. ಆದರೆ ಗುರುವಾರ ರಾತ್ರಿ ಮತ್ತೆ ಮಳೆ ಸುರಿಯಿತು. ಗಾಳಿ ರಭಸ ಕೊಂಚ ಮುಂದುವರಿದಿತ್ತು. ಗಾಳಿ ಮಳೆಯಿಂದ ಭೂಮಿಯಲ್ಲಿವರ್ತೆಯ ಏಳುವಂತಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ