ಆ್ಯಪ್ನಗರ

ಐದುನೂರಕ್ಕೂ ಹೆಚ್ಚು ಬಸ್‌ಗಳು ಬಸ್‌ ನಿರ್ವಹಣೆ ಸವಾಲು

ಶಿರಸಿ : ನಿತ್ಯ ನೂರಾರು ಕಿಮೀ ಓಡಾಡುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳು ಲಾಕ್‌ ಡೌನ್‌ ಪರಿಣಾಮ ಸಂಚಾರವಿಲ್ಲದೆ ಖಾಲಿ ನಿಂತಿವೆ.ಜಿಲ್ಲೆಯ ಡಿಪೊಗಳಲ್ಲಿನಿಂತಿರುವ 500ಕ್ಕೂ ಹೆಚ್ಚು ಬಸ್‌ ಗಳ ನಿರ್ವಹಣೆ ಸವಾಲಿನ ಕೆಲಸವಾಗಿದೆ.

Vijaya Karnataka 18 Apr 2020, 5:00 am
ಶಿರಸಿ : ನಿತ್ಯ ನೂರಾರು ಕಿಮೀ ಓಡಾಡುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ಗಳು ಲಾಕ್‌ ಡೌನ್‌ ಪರಿಣಾಮ ಸಂಚಾರವಿಲ್ಲದೆ ಖಾಲಿ ನಿಂತಿವೆ.ಜಿಲ್ಲೆಯ ಡಿಪೊಗಳಲ್ಲಿನಿಂತಿರುವ 500ಕ್ಕೂ ಹೆಚ್ಚು ಬಸ್‌ ಗಳ ನಿರ್ವಹಣೆ ಸವಾಲಿನ ಕೆಲಸವಾಗಿದೆ.
Vijaya Karnataka Web more than five hundred buses are a bus management challenge
ಐದುನೂರಕ್ಕೂ ಹೆಚ್ಚು ಬಸ್‌ಗಳು ಬಸ್‌ ನಿರ್ವಹಣೆ ಸವಾಲು


ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗದ ಶಿರಸಿ, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ, ಯಲ್ಲಾಪುರ ಸೇರಿದಂತೆ ಆರು ಡಿಪೊಗಳಲ್ಲಿಕಳೆದ 24 ದಿವಸಗಳಿಂದ ಸುಮಾರು 511ಕ್ಕೂ ಹೆಚ್ಚು ಬಸ್‌ಗಳು ಸಾಲು ಸಾಲಾಗಿ ನಿಂತಿವೆ.

ಖಾಲಿ ನಿಂತಿರುವ ಬಸ್‌ಗಳಲ್ಲಿಸುಮಾರು ಎರಡು ನೂರಕ್ಕೂ ಹೆಚ್ಚು ಬಸ್‌ಗಳು ಹಳೆಯ ದಿವೆ ಅವುಗಳನ್ನು ನಿತ್ಯ ಕನಿಷ್ಠ ನಿರ್ವಹಣೆ ಮಾಡಬೇಕಾಗಿದೆ.ಇದಕ್ಕಾಗಿ ಕೆಲವು ಸಿಬ್ಬಂದಿ ನಿತ್ಯ ನಿರ್ವಹಣೆಯಲ್ಲಿತೊಡಗಬೇಕಾದ ಅನಿವಾರ್ಯತೆಯಿದೆ.

ಕನಿಷ್ಠ ನಿರ್ವಹಣೆ... ರನ್ನಿಂಗ್‌ ಇಲ್ಲದೆ ಇರುವುದರಿಂದ ನಿಂತಿರುವ ಬಸ್‌ಗಳ ಬ್ಯಾಟರಿ ಸೇರಿದಂತೆ ಅವುಗಳನ್ನು ಸ್ಟಾರ್ಟ್‌ ಮಾಡಿ ಅವುಗಳ ನಿರ್ವಹಣೆಯನ್ನು ಕೆಲವು ಸಿಬ್ಬಂದಿ ನಿತ್ಯ ಮಾಡುತ್ತಿದ್ದಾರೆ. ತಲಾ ಇಬ್ಬರು ಮೆಕ್ಯಾನಿಕ್‌ ಹಾಗೂ ಡ್ರೈವರ್‌ಗಳು ಈ ಕಾರ್ಯದಲ್ಲಿತೊಡಗಿದ್ದಾರೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕ ಹೆಗಡೆ ಹೇಳುತ್ತಾರೆ.

11 ಕೋಟಿ ಆದಾಯ ನಷ್ಟ... ಕಳೆದ 23 ದಿವಸಗಳಿಂದ ಬಸ್‌ಗಳ ಸಂಚಾರ ಇಲ್ಲದೇ ಇರುವುದರಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗಕ್ಕೆ ನಿತ್ಯ 50ಲಕ್ಷ ರೂ ನಂತೆ ಈವರೆಗೆ ಸುಮಾರು ಹನ್ನೊಂದು ಕೋಟಿ ಆದಾಯ ನಷ್ಟವಾಗಿದೆ ಎಂದು ಸಾರಿಗೆ ಸಂಸ್ಥೆಯ ವಿಭಾಗಿಯ ನಿಯಂತ್ರಣಾಧಿಕಾರಿ ನೀಡುವ ಮಾಹಿತಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ