ಸೇವೆ ಮೂಲಕ ಅನ್ಯರನ್ನು ಪ್ರೇರೇಪಿಸಿ
ಶಿರಸಿ : ಮೊದಲಿಗೆ ಸೇವೆ ನೀಡಿ ಮಾದರಿಯಾಗಿ ಆ ಮೂಲಕ ಅನ್ಯರನ್ನು ಪ್ರೇರೇಪಿಸುವುದು ನಿಜವಾದ ಲಯನಿಸಂ ಎಂದು ಲಯನ್ಸ್ ಪ್ರಾಂತಪಾಲ ನರೇಂದ್ರನ್ ನಾಯರ್ ಮಡಗಾಂವ್ ಅಭಿಪ್ರಾಯಪಟ್ಟರು.
Vijaya Karnataka 24 Aug 2019, 5:00 am
ಶಿರಸಿ : ಮೊದಲಿಗೆ ಸೇವೆ ನೀಡಿ ಮಾದರಿಯಾಗಿ ಆ ಮೂಲಕ ಅನ್ಯರನ್ನು ಪ್ರೇರೇಪಿಸುವುದು ನಿಜವಾದ ಲಯನಿಸಂ ಎಂದು ಲಯನ್ಸ್ ಪ್ರಾಂತಪಾಲ ನರೇಂದ್ರನ್ ನಾಯರ್ ಮಡಗಾಂವ್ ಅಭಿಪ್ರಾಯಪಟ್ಟರು.
ಲಯನ್ಸ್ ಸದಸ್ಯರಿಗೆ ಏರ್ಪಡಿಸಿದ್ದ ಲಯನಿಸಂ ತರಬೇತಿಯಲ್ಲಿ ಅವರು ಮಾತನಾಡಿದರು.
ಲಯನ್ಸ್ ಇಂಟರನ್ಯಾಶನಲ್ ಜಾಗತಿಕ ಸೇವಾ ಸಂಸ್ಥೆಯಾಗಿ ಕ್ಲಬ್ ಸದಸ್ಯರು ಸಾಮಾಜಿಕವಾಗಿ ನಿಸ್ಪೃಹ ಭಾವದಿಂದ ನೀಡುವ ಕೊಡುಗೆಗಳಿಂದ ಹಲವು ಸೇವಾ ಪ್ರಕಲ್ಪಗಳಿಗೆ ನೆರವು ನೀಡುತ್ತಾ ಬಂದಿದೆ ಎಂದರು.
ಉಪಪ್ರಾಂತಪಾಲ ಲ.ಗಿರೀಶ ಕುಚಿನಾಡ್ ಮಾತನಾಡಿ, ಎಲ್ಲೆಡೆ ಸಮಸ್ಯೆಗಳು ಹಾಸು ಹೊಕ್ಕಾಗಿವೆ. ಅದನ್ನು ಅರ್ಥ ಮಾಡಿಕೊಂಡು ಸಾಧ್ಯವಾದಷ್ಟು ಜನರಿಗೆ ಉತ್ತಮ ನೆರವು ನೀಡಿ ಸಾತ್ವಿಕ ಪ್ರಜ್ಞೆ, ಸಜ್ಜನ ಪ್ರಜ್ಞೆ ಮೆರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಜ್ಯೋತಿ ಭಟ್ ವಿಶೇಷ ಮಕ್ಕಳ ಕುರಿತಾಗಿ ಲಯನ್ಸ್ ಕ್ಲಬ್ಗಳು ಕೈಗೊಳ್ಳಬೇಕಾದ ಪ್ರಕಲ್ಪಗಳ ಕಾರ್ಯಸೂಚಿಯುಳ್ಳ ಸುತ್ತೋಲೆಯನ್ನು ಗವರ್ನರ್ ನರೇಂದ್ರನ್ ನಾಯರ್ ಬಿಡುಗಡೆ ಮಾಡಿದರು.
ನೇತ್ರತಜ್ಞ ಡಾ.ಅಂಕದ್ ಐ ಬ್ಯಾಂಕ್ನ ಕುರಿತು ಸಮಗ್ರ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗುರುರಾಜ ಹೊನ್ನಾವರ, ಖಜಾಂಚಿ ಬಾಬುಲಾಲ್ ಚೌಧರಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಜಿ.ಎ. ಹೆಗಡೆ ಸೋಂದಾ ಸ್ವಾಗತಿಸಿದರು. ಉದಯ ಸ್ವಾದಿ ವಂದಿಸಿದರು.
ಲಯನ್ಸ್ ಸದಸ್ಯರಿಗೆ ಏರ್ಪಡಿಸಿದ್ದ ಲಯನಿಸಂ ತರಬೇತಿಯಲ್ಲಿ ಅವರು ಮಾತನಾಡಿದರು.
ಲಯನ್ಸ್ ಇಂಟರನ್ಯಾಶನಲ್ ಜಾಗತಿಕ ಸೇವಾ ಸಂಸ್ಥೆಯಾಗಿ ಕ್ಲಬ್ ಸದಸ್ಯರು ಸಾಮಾಜಿಕವಾಗಿ ನಿಸ್ಪೃಹ ಭಾವದಿಂದ ನೀಡುವ ಕೊಡುಗೆಗಳಿಂದ ಹಲವು ಸೇವಾ ಪ್ರಕಲ್ಪಗಳಿಗೆ ನೆರವು ನೀಡುತ್ತಾ ಬಂದಿದೆ ಎಂದರು.
ಉಪಪ್ರಾಂತಪಾಲ ಲ.ಗಿರೀಶ ಕುಚಿನಾಡ್ ಮಾತನಾಡಿ, ಎಲ್ಲೆಡೆ ಸಮಸ್ಯೆಗಳು ಹಾಸು ಹೊಕ್ಕಾಗಿವೆ. ಅದನ್ನು ಅರ್ಥ ಮಾಡಿಕೊಂಡು ಸಾಧ್ಯವಾದಷ್ಟು ಜನರಿಗೆ ಉತ್ತಮ ನೆರವು ನೀಡಿ ಸಾತ್ವಿಕ ಪ್ರಜ್ಞೆ, ಸಜ್ಜನ ಪ್ರಜ್ಞೆ ಮೆರೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ಜ್ಯೋತಿ ಭಟ್ ವಿಶೇಷ ಮಕ್ಕಳ ಕುರಿತಾಗಿ ಲಯನ್ಸ್ ಕ್ಲಬ್ಗಳು ಕೈಗೊಳ್ಳಬೇಕಾದ ಪ್ರಕಲ್ಪಗಳ ಕಾರ್ಯಸೂಚಿಯುಳ್ಳ ಸುತ್ತೋಲೆಯನ್ನು ಗವರ್ನರ್ ನರೇಂದ್ರನ್ ನಾಯರ್ ಬಿಡುಗಡೆ ಮಾಡಿದರು.
ನೇತ್ರತಜ್ಞ ಡಾ.ಅಂಕದ್ ಐ ಬ್ಯಾಂಕ್ನ ಕುರಿತು ಸಮಗ್ರ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಗುರುರಾಜ ಹೊನ್ನಾವರ, ಖಜಾಂಚಿ ಬಾಬುಲಾಲ್ ಚೌಧರಿ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ಜಿ.ಎ. ಹೆಗಡೆ ಸೋಂದಾ ಸ್ವಾಗತಿಸಿದರು. ಉದಯ ಸ್ವಾದಿ ವಂದಿಸಿದರು.