ಆ್ಯಪ್ನಗರ

ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ, ಇಷ್ಟು ದಿನ ಇದ್ದದ್ದೇ ಪುಣ್ಯ: ಸಂಸದ ಅನಂತಕುಮಾರ

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಜನರಿಗೆ ಅನಿವಾರ್ಯ ಇರುವ ಕಡೆ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಯಾವ ಪಾರ್ಟಿ ಎಂಎಲ್‌ಎ, ಎಂಪಿ ಇರ್ತಾರೋ ಅಲ್ಲಿ ಬೇಕಾದ ಕಡೆ ಕಾಮಗಾರಿ ಮಾಡಲಾಗುತ್ತದೆ.

Vijaya Karnataka Web 18 Jan 2022, 10:54 pm
ಕಾರವಾರ: ನಾನೇನು ರಾಜಕಾರಣದ ಬಗ್ಗೆ ಭಾರೀ ತಲೆ ಕೆಡಿಸಿಕೊಂಡಿಲ್ಲ. ಇಷ್ಟು ದಿನ ರಾಜಕೀಯವಾಗಿ ಇದ್ದದ್ದೇ ನನ್ನ ಪುಣ್ಯ. ಮುಂದಿನ ದಿನದ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ, ಇಷ್ಟು ದಿನ ಜಿಲ್ಲೆಯ ಜನರು ಪ್ರೀತಿ ತೋರಿಸಿದ್ದೇ ಸಂತೋಷ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
Vijaya Karnataka Web ಅನಂತ ಕುಮಾರ್‌ ಹೆಗಡೆ
ಅನಂತ ಕುಮಾರ್‌ ಹೆಗಡೆ


ತಾಲೂಕಿನ ಅಮದಳ್ಳಿ ಗ್ರಾಮದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ- 3ರ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಆರ್ಥಿಕ ವ್ಯವಹಾರಕ್ಕೆ ಉತ್ತೇಜನ ಕೊಡುವಂತಹ ಹೆದ್ದಾರಿ, ವಿಮಾನ ನಿಲ್ದಾಣ, ರೈಲ್ವೆ, ಬಂದರು, ಈ ಕೆಲಸ ಜಿಲ್ಲೆಯಲ್ಲಿ ಅನಿವಾರ್ಯವಾಗಿ ಆಗಬೇಕು. ಇದಕ್ಕೆ ವಿರೋಧ ಬಂದರು ಪರವಾಗಿಲ್ಲ ಎಂದರು.

ಉತ್ತರ ಕನ್ನಡದಲ್ಲಿ ಕೊರೊನಾದಿಂದ ಕಳೆಗುಂದಿದ ದ್ವೀಪ ಜಾತ್ರೆಯ ಸಂಭ್ರಮ! ಕೇವಲ 200 ಜನ ಭಾಗಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ. ಬಂದರು ಕಾಮಗಾರಿಗಳು ಪ್ರಾರಂಭವಾಗಿದ್ದು, ತದಡಿ, ಬೇಲೆಕೇರಿ, ಹೊನ್ನಾವರ, ಕಾರವಾರ ಬಂದರು ಅಭಿವೃದ್ದಿಗೆ ರೂಪು ರೇಷೆ ಸಿಕ್ಕಿದೆ. ಈಗಾಗಲೇ ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಿ ಕಾಮಗಾರಿ ಸಹ ಪ್ರಾರಂಭವಾಗಿದೆ. ಎಷ್ಟೇ ಸಣ್ಣಪುಟ್ಟ ಕಾಮಗಾರಿ ಹಳ್ಳಿಯಲ್ಲಿ ಮಾಡಿದರು ಜಿಲ್ಲೆಯ ಅಭಿವೃದ್ದಿ ಆಗುವುದಿಲ್ಲ. ಜಿಲ್ಲೆಯ ನಕ್ಷೆ ಬದಲಿಸುವ ದೊಡ್ಡ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗಬೇಕು ಎಂದರು.

ಜಿಲ್ಲೆಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಕೊಡುವ, ಆರ್ಥಿಕವಾಗಿ ಅಭಿವೃದ್ದಿ ಮಾಡುವ ಕೆಲಸ ಬಂದರು ಅಭಿವೃದ್ದಿಯಿಂದ ಆಗುತ್ತದೆ. ಜನ ನಿರೀಕ್ಷೆಗೂ ಮೀರಿ ಬಂದರು ಅಭಿವೃದ್ದಿಯಿಂದ ಮುಂದಿನ ದಿನದಲ್ಲಿ ಕೆಲಸ ಸೃಷ್ಟಿಯಾಗುತ್ತದೆ. ನಮ್ಮ ಜಿಲ್ಲೆಯವರನ್ನ ಹೊರತು ಪಡಿಸಿ ಬೇರೆ ಜಿಲ್ಲೆಯವರಿಗೂ ಕೆಲಸ ಕೊಡುವಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ಜಿಲ್ಲೆಯ ಅಭಿವರದ್ದಿ ಹೊಸ ಅಧ್ಯಾಯ ಬರೆಯಲು ಹೆಜ್ಜೆ ಇಟ್ಟಿದ್ದು ಜಿಲ್ಲೆ ನೂರು ವರ್ಷಕ್ಕೆ ಹಿಂದಕ್ಕೆ ತಿರುಗಿ ನೋಡಬಾರದಂತೆ ಅಭಿವೃದ್ದಿಯಾಗಲು ಜನರು ಸಹಕರಿಸಬೇಕು ಎಂದು ಹೇಳಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಜನರಿಗೆ ಅನಿವಾರ್ಯ ಇರುವ ಕಡೆ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಯಾವ ಪಾರ್ಟಿ ಎಂಎಲ್‌ಎ, ಎಂಪಿ ಇರ್ತಾರೋ ಅಲ್ಲಿ ಬೇಕಾದ ಕಡೆ ಕಾಮಗಾರಿ ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಜನರಿಗೆ ಸಮಸ್ಯೆ ಇರುವ ಕಡೆ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಹೇಳಿದರು.

ಉತ್ತರ ಕನ್ನಡದಲ್ಲಿ ನಾಯಿಗಳಿಗೆ ಪಾರ್ವೊ ವೈರಸ್ ಕಾಟ..! ರೋಗ ನಿಯಂತ್ರಣವೇ ಸವಾಲು..!

ರಸ್ತೆಗಳಿಗೆ ಸಂಸದರು ಅನುದಾನ ನೀಡಿದ್ದಾರೆ

ಕಾರ್ಯಕ್ರಮದಲ್ಲಿ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಎಲ್ಲೆಲ್ಲಿ ರಸ್ತೆಗಳ ಅವಶ್ಯಕತೆ ಇದೆಯೋ ಅಂತಹ ಊರುಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಸರ್ವೇ ಮಾಡಿಸುವ ಮೂಲಕ ರಸ್ತೆಗಳಿಗೆ ಅನುದಾನವನ್ನು ಸಂಸದರು ನೀಡಿದ್ದಾರೆ. ಅವರು ಸಂಸದರಾದಾಗಿನಿಂದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದಾರೆ. ಆದರೆ, ಅವರು ಯಾವುದೇ ರೀತಿಯ ಪ್ರಚಾರವನ್ನು ಪಡೆದಿಲ್ಲ. ಈ ಬಾರಿ ಸಂಸದರು ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಸುಮಾರು 60 ಕೋಟಿಯಷ್ಟು ಅನುದಾನವನ್ನು ನೀಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ