ಶಿರಸಿ : ರಾಯರಪೇಟೆಯ ಶ್ರೀ ಸಾಯಿ ಸಂಗೀತ ವಿದ್ಯಾಲಯದ 37ನೇ ವಾರ್ಷಿಕ ಸಂಗೀತ ಸಮ್ಮೇಳನ, ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಗರದ ರಾಯರ ಪೇಟೆಯ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಫೆ.23 ಮತ್ತು 24ರಂದು ನಡೆಯಲಿದೆ.
ಫೆ.23ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ವಿಷ್ಣುದಾಸ ಕಾಸರಗೋಡ ಅಧ್ಯಕ್ಷ ತೆ ವಹಿಸುವರು.
ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಹಿರಿಯ ಅಧಿಕಾರಿ ಶಿವಾನಂದ ದೀಕ್ಷಿತ್ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ ಡಾ.ಶಶಾಂಕ ಮೊಖ್ತೆದಾರ್ರಿಗೆ ಪಂಡಿತ ರಂಗನಾಥ ಹೆಗಡೆ ಶೀಗೆಹಳ್ಳಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನಂತರ 7ರಿಂದ ಅತಿಥಿ ಕಲಾವಿದರಾದ ಪಂಡಿತ ಡಾ. ಶಶಾಂಕ ಮೊಖ್ತೆದಾರ್ ಅವರ ಗಾಯನ, ತಬಲಾ ಸಾಥಿಯಾಗಿ ಗುರುಮೂರ್ತಿ ವೈದ್ಯ, ಸಂವಾದಿನಿಯಲ್ಲಿ ವಿ.ಜಿ.ಹೆಚ್.ಗುರುಪ್ರಸಾದ್ ಸಹಕರಿಸುವರು.
ಫೆ.24ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಜಿಲ್ಲೆಯ ಸಂಗೀತ ಪ್ರತಿಭೆ ಪುರಸ್ಕಾರಕ್ಕೆ ಆಯ್ಕೆಯಾದ ಸುಮಾ ಸತ್ಯನಾರಾಯಣ ಭಟ್ (ಗಾಯನ), ಶರಧಿ ಹೆಗಡೆ (ಗಾಯನ), ಸಂಕೇತ ನಾಯಕ (ತಬಲಾ), ರಾಘವೇಂದ್ರ ರತ್ನಾಕರ ಭಂಡಾರಿ (ತಬಲಾ) ಹಾಗೂ ಅಮೋಘ ವೆಂಕಟ್ರಮಣ ಭಟ್ (ತಬಲಾ) ಅವರನ್ನು ಪುರಸ್ಕರಿಸಲಾಗುವುದು. ಸಂಜೆ 6ಕ್ಕೆ ಯುವಪ್ರತಿಭೆ ಭಾರ್ಗವ ಹೆಗಡೆ ಶೀಗೆಹಳ್ಳಿ ಅವರ ಸಿತಾರ್ ವಾದನ ನಡೆಯಲಿದೆ.
ಫೆ.23ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ವಿಷ್ಣುದಾಸ ಕಾಸರಗೋಡ ಅಧ್ಯಕ್ಷ ತೆ ವಹಿಸುವರು.
ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಹಿರಿಯ ಅಧಿಕಾರಿ ಶಿವಾನಂದ ದೀಕ್ಷಿತ್ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ ಡಾ.ಶಶಾಂಕ ಮೊಖ್ತೆದಾರ್ರಿಗೆ ಪಂಡಿತ ರಂಗನಾಥ ಹೆಗಡೆ ಶೀಗೆಹಳ್ಳಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ನಂತರ 7ರಿಂದ ಅತಿಥಿ ಕಲಾವಿದರಾದ ಪಂಡಿತ ಡಾ. ಶಶಾಂಕ ಮೊಖ್ತೆದಾರ್ ಅವರ ಗಾಯನ, ತಬಲಾ ಸಾಥಿಯಾಗಿ ಗುರುಮೂರ್ತಿ ವೈದ್ಯ, ಸಂವಾದಿನಿಯಲ್ಲಿ ವಿ.ಜಿ.ಹೆಚ್.ಗುರುಪ್ರಸಾದ್ ಸಹಕರಿಸುವರು.
ಫೆ.24ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಮಧ್ಯಾಹ್ನ 2ಕ್ಕೆ ಜಿಲ್ಲೆಯ ಸಂಗೀತ ಪ್ರತಿಭೆ ಪುರಸ್ಕಾರಕ್ಕೆ ಆಯ್ಕೆಯಾದ ಸುಮಾ ಸತ್ಯನಾರಾಯಣ ಭಟ್ (ಗಾಯನ), ಶರಧಿ ಹೆಗಡೆ (ಗಾಯನ), ಸಂಕೇತ ನಾಯಕ (ತಬಲಾ), ರಾಘವೇಂದ್ರ ರತ್ನಾಕರ ಭಂಡಾರಿ (ತಬಲಾ) ಹಾಗೂ ಅಮೋಘ ವೆಂಕಟ್ರಮಣ ಭಟ್ (ತಬಲಾ) ಅವರನ್ನು ಪುರಸ್ಕರಿಸಲಾಗುವುದು. ಸಂಜೆ 6ಕ್ಕೆ ಯುವಪ್ರತಿಭೆ ಭಾರ್ಗವ ಹೆಗಡೆ ಶೀಗೆಹಳ್ಳಿ ಅವರ ಸಿತಾರ್ ವಾದನ ನಡೆಯಲಿದೆ.