ಆ್ಯಪ್ನಗರ

ನಾಗೇಂದ್ರ ನಾಯ್ಕ, ತೃಪ್ತಿ ನಾಯ್ಕರಿಗೆ ಸನ್ಮಾನ

ಅಂಕೋಲಾ : 13 ವರ್ಷಗಳಿಂದ ತಾಲೂಕಿನ 9 ಗ್ರಾ.ಪಂ.ಗಳಲ್ಲಿಕ್ರೀಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಿದ ವಂದಿಗೆ ಗ್ರಾ.ಪಂ. ಕಾರ್ಯದರ್ಶಿ ನಾಗೇಂದ್ರ ನಾಯ್ಕ ಹಾಗೂ 5 ವರ್ಷಗಳಿಂದ ಹಟ್ಟಿಕೇರಿ ಗ್ರಾ.ಪಂ. ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ನಾಯ್ಕರ ಸೇವೆ ಅವಿಸ್ಮರಣೀಯ ಎಂದು ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.

Vijaya Karnataka 7 Nov 2019, 5:00 am
ಅಂಕೋಲಾ : 13 ವರ್ಷಗಳಿಂದ ತಾಲೂಕಿನ 9 ಗ್ರಾ.ಪಂ.ಗಳಲ್ಲಿಕ್ರೀಯಾಶೀಲತೆಯಿಂದ ಕರ್ತವ್ಯ ನಿರ್ವಹಿಸಿದ ವಂದಿಗೆ ಗ್ರಾ.ಪಂ. ಕಾರ್ಯದರ್ಶಿ ನಾಗೇಂದ್ರ ನಾಯ್ಕ ಹಾಗೂ 5 ವರ್ಷಗಳಿಂದ ಹಟ್ಟಿಕೇರಿ ಗ್ರಾ.ಪಂ. ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ನಾಯ್ಕರ ಸೇವೆ ಅವಿಸ್ಮರಣೀಯ ಎಂದು ತಾ.ಪಂ. ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
Vijaya Karnataka Web nagendra naik satyam naik pays tribute
ನಾಗೇಂದ್ರ ನಾಯ್ಕ, ತೃಪ್ತಿ ನಾಯ್ಕರಿಗೆ ಸನ್ಮಾನ


ಅವರು ತಾ.ಪಂ. ಸಭಾಭವನದಲ್ಲಿನಡೆದ ಸಾಮಾನ್ಯ ಸಭೆಯಲ್ಲಿನಾಗೇಂದ್ರ ನಾಯ್ಕ ಮತ್ತು ತಾ.ಪಂ. ವಿಷಯ ನಿರ್ವಾಹಕಿ ತೃಪ್ತಿ ನಾಯ್ಕ ಅವರನ್ನು ಗೌರವಿಸಿ ಮಾತನಾಡಿ ಕ್ರಿಯಾಶೀಲರಾಗಿದ್ದ ಇವರು ನಮ್ಮ ತಾಲೂಕಿನ ಸಮಸ್ಯೆಗೆ ಸದಾ ಸ್ಪಂದಿಸುವವರಾಗಿದ್ದರು ಎಂದರು.

ಪದೋನ್ನತಿ ಹೊಂದಿದ ನಾಗೇಂದ್ರ ನಾಯ್ಕ ಮಾತನಾಡಿ ಈ ತಾಲೂಕಿನಲ್ಲಿಉತ್ತಮವಾಗಿ ಸೇವೆ ನೀಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ ಎಂದರು.

ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ತಾ.ಪಂ. ಉಪಾಧ್ಯಕ್ಷೆ ತುಳಸಿ ಗೌಡ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಪಿ.ವೈ.ಸಾವಂತ, ವ್ಯವಸ್ಥಾಪಕ ನೀಲಕಂಠ ನಾಯಕ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ