ಆ್ಯಪ್ನಗರ

ನಂದಾದೀಪ ಬಿಡುಗಡೆ, ಬೀಳ್ಕೊಡುಗೆ

ಶಿರಸಿ : ತಾಲೂಕಿನ ತೆರಕನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ವರ್ಗದವರ ಬೀಳ್ಕೊಡುಗೆ ಹಾಗೂ ನಂದಾದೀಪ ಕೈಬರಹ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.

Vijaya Karnataka 22 Feb 2019, 5:00 am
ಶಿರಸಿ : ತಾಲೂಕಿನ ತೆರಕನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ವರ್ಗದವರ ಬೀಳ್ಕೊಡುಗೆ ಹಾಗೂ ನಂದಾದೀಪ ಕೈಬರಹ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು.
Vijaya Karnataka Web nandadipa release farewell
ನಂದಾದೀಪ ಬಿಡುಗಡೆ, ಬೀಳ್ಕೊಡುಗೆ


ಅಧ್ಯಕ್ಷ ತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.

ಎಸ್‌ಡಿಎಂಸಿ ಸದಸ್ಯೆ ಕಮಲಾ ಮರಾಠಿ ಉಪಸ್ಥಿತರಿದ್ದರು. ತಾಲೂಕು ಶಿಕ್ಷ ಕ ಸಂಘದ ಕಾರ್ಯದರ್ಶಿ ಸುರೇಶ ಪಟಗಾರ ಅತಿಥಿಗಳಾಗಿದ್ದರು. ಏಳನೇ ವರ್ಗದ ವಿದ್ಯಾರ್ಥಿಗಳು ಶಾಲೆಗೆ 2,200 ರೂ. ಮೌಲ್ಯದ ಎಂಟು ಫೋಟೋಗಳನ್ನು ನೀಡಿದರು. ವಿದ್ಯಾರ್ಥಿಗಳ ಹಸ್ತಪತ್ರಿಕೆ ನಂದಾದೀಪ ಪ್ರತಿಗಳನ್ನು ಬಿಡುಗಡೆ ಮಾಡಲಾಯಿತು.

ಸುರೇಶ ಪಟಗಾರ ಮಾತನಾಡಿದರು. ರಾಜಶ್ರೀ ಗೌಡ, ರಮೇಶ ಹೆಗಡೆ ಮಾತನಾಡಿದರು. ರಮಾ ಭಟ್ಟ ನಿರೂಪಿಸಿದರು.

ವಿದ್ಯಾರ್ಥಿಗಳ ಪಾಲಕರು, ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಮೇಶ ಹೆಗಡೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ