ಆ್ಯಪ್ನಗರ

ನಾಟ್ಯ ಕಲಾಪ್ರತಿಭೆ ಸೌಭಾಗ್ಯ ರಂಗಪ್ರವೇಶ ಸಂಭ್ರವ

ಶಿರಸಿ :9ನೇ ವರ್ಷದ ಬಾಲ್ಯದಲ್ಲೇ ಭರತನಾಟ್ಯದ ಗೆಜ್ಜೆಕಟ್ಟಿ ತಾಳಕ್ಕೆ ತಕ್ಕ ಹೆಜ್ಜೆಗಳನ್ನಿಡುತ್ತ ಹಾವಭಾವ ನೃತ್ಯಾಭಿನಯದ ಅಭ್ಯಾಸಗೈಯುತ್ತ ದಶಕದ ಅವಧಿಯಲ್ಲಿ ನಾಟ್ಯ ಕಲಾವಿದೆಯಾಗಿ ಬೆಳೆಯುತ್ತಿರುವ ಶಿರಸಿಯ ಸೌಭಾಗ್ಯ ಹಂದ್ರಾಳಗೆ ಈಗ ರಂಗಪ್ರವೇಶದ ಅಮೂಲ್ಯ ಕ್ಷ ಣ.

Vijaya Karnataka 8 Dec 2018, 5:00 am
ಶಿರಸಿ :9ನೇ ವರ್ಷದ ಬಾಲ್ಯದಲ್ಲೇ ಭರತನಾಟ್ಯದ ಗೆಜ್ಜೆಕಟ್ಟಿ ತಾಳಕ್ಕೆ ತಕ್ಕ ಹೆಜ್ಜೆಗಳನ್ನಿಡುತ್ತ ಹಾವಭಾವ ನೃತ್ಯಾಭಿನಯದ ಅಭ್ಯಾಸಗೈಯುತ್ತ ದಶಕದ ಅವಧಿಯಲ್ಲಿ ನಾಟ್ಯ ಕಲಾವಿದೆಯಾಗಿ ಬೆಳೆಯುತ್ತಿರುವ ಶಿರಸಿಯ ಸೌಭಾಗ್ಯ ಹಂದ್ರಾಳಗೆ ಈಗ ರಂಗಪ್ರವೇಶದ ಅಮೂಲ್ಯ ಕ್ಷ ಣ.
Vijaya Karnataka Web natya art gallery is a sunglasses debut
ನಾಟ್ಯ ಕಲಾಪ್ರತಿಭೆ ಸೌಭಾಗ್ಯ ರಂಗಪ್ರವೇಶ ಸಂಭ್ರವ


ಡಿ.8ರ ಸಂಜೆ 5.30 ಕ್ಕೆ ನಗರದ ವಿದ್ಯಾಧಿರಾಜ ಕಲಾ ಕ್ಷೇತ್ರದಲ್ಲಿ ನಟರಾಜ ನೃತ್ಯ ಶಾಲೆಯ ಗುರು ಸೀಮಾ ಭಾಗ್ವತ ಮತ್ತು ವಿದುಷಿ ದೀಪಾ ಭಾಗ್ವತ ಶಿಷ್ಯೆಯಾದ ಸೌಭಾಗ್ಯ ಹಂದ್ರಾಳ ಭರತನಾಟ್ಯ ರಂಗಪ್ರವೇಶ ಗೈಯಲಿದ್ದಾಳೆ.

ಅತಿಥಿಗಳಾಗಿ ಬೆಂಗಳೂರಿನ ಸಾಯಿ ಆರ್ಟ್ಸ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯ ನಿರ್ದೇಶಕ ಸಾಯಿ ವೆಂಕಟೇಶ ಮತ್ತು ಬೆಂಗಳೂರಿನ ಶಾಂತಲಾ ಆರ್ಟ್ಸ ಅಕಾಡೆಮಿ ನಿರ್ದೇಶಕ ಕಲಾಯೋಗಿ ಆಚಾರ್ಯ ಪುಲಿಕೇಶಿ ಕಸ್ತೂರಿ ಆಗಮಿಸುವರು. ಸ್ಥಳೀಯ ಬಣ್ಣದಮಠದ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಕಾರ್ಯಕ್ರಮದಲ್ಲಿ ಸೌಭಾಗ್ಯಹಂದ್ರಾಳ ಭರತನಾಟ್ಯ ನೃತ್ಯ ಬಂಧಗಳಾದ ಪುಷ್ಪಾಂಜಲಿ, ಗಣೇಶ ಸ್ತುತಿ, ಅಲಾರಿಪು, ಶಿವಸ್ತುತಿ, ವರ್ಣಂ, ದೇವರನಾಮ, ಜಾವಳಿ, ಬಸವೇಶ್ವರ ವಚನ ಸಾಹಿತ್ಯ, ಮತ್ತು ತಿಲ್ಲಾನವನ್ನು ಪ್ರದರ್ಶಿಸಲಿದ್ದಾಳೆ.

ಹಿಮ್ಮೇಳದ ವಿವರ ಇಂತಿದೆ. ನಟುವಾಂಗ: ಗುರು ಸೀಮಾ ಭಾಗ್ವತ ಮತ್ತು ದೀಪಾ ಭಾಗ್ವತ, ಶಿರಸಿ ಹಾಡುಗಾರಿಕೆ: ಡಾ.ಡಿ.ಎಸ್‌. ಶ್ರೀವತ್ಸ ಬೆಂಗಳೂರು. ಮೃದಂಗ: ವಿ. ಶ್ರೀಹರಿ ರಂಗಸ್ವಾಮಿ ಬೆಂಗಳೂರು. ಕೊಳಲು: ವಿ. ದೀಪಕ್‌ ಹೆಬ್ಬಾರ ಬೆಂಗಳೂರು. ವೈಲಿನ್‌: ವಿ. ಮಧುಸೂದನ್‌ ಬೆಂಗಳೂರು. ರಿದಂ ಪೆಡ್‌: ವಿ.ಕಾರ್ತಿಕ್‌ ದಾತಾರ ಬೆಂಗಳೂರು. ನಿರೂಪಣೆ: ವಿದುಷಿ ರೂಪಶ್ರೀ ಮಧುಸೂದನ್‌ ಬೆಂಗಳೂರು.

ದಶಕದ ಕಲಿಕೆ : ದಶಕಕ್ಕೂ ಹೆಚ್ಚು ಅವಧಿಯಿಂದ ನಾಟ್ಯ ಕಲಿಕೆಯಲ್ಲಿ ನಿರತ ಸೌಭಾಗ್ಯ, ಶಿರಸಿಯ ಪ್ರಸಿದ್ಧ ಸಗಟು ವರ್ತಕ ಕುಮಾರ ಹಂದ್ರಾಳ ಮತ್ತು ಶ್ರೀದೇವಿ ಹಂದ್ರಾಳ ದಂಪತಿ ಪುತ್ರಿ. 12 ವರ್ಷಗಳಿಂದ ಭರತನಾಟ್ಯ ಕಲೆಯನ್ನು ನೃತ್ಯ ಗುರು ಸೀಮಾ ಭಾಗ್ವತ ಮತ್ತು ದೀಪಾ ಭಾಗ್ವತ ಇವರಲ್ಲಿ ಅಭ್ಯಸಿಸುತ್ತಿದ್ದಾಳೆ. ಗುರು ಅನಸೂಯಾ ಜಗದೀಶ ಅವರಲ್ಲಿ ಕರ್ನಾಟಕ ಸಂಗೀತವನ್ನೂ ಅಭ್ಯಾಸ ಮಾಡುತ್ತಿದ್ದಾಳೆ. ಜೂನಿಯರ್‌ ಮತ್ತು ಸೀನಿಯರ್‌ ಹಂತದ ಪರೀಕ್ಷೆ ಮುಗಿಸಿ ಈಗ ವಿದ್ವತ್‌ ತಯಾರಿ ನಡೆಸಿದ್ದಾಳೆ.

ತುಮಕೂರಿನ ಕಲೋತ್ಸವ, ತಿರುಪತಿಯಲ್ಲಿ ದಕ್ಷಿಣಭಾರತ ಮಟ್ಟದ ಯುವಜನೋತ್ಸವ, ಧಾರವಾಡದ ವಸಂತೋತ್ಸವ, ಕರಾವಳಿ ಉತ್ಸವ, ಗಡಿನಾಡು ಉತ್ಸವ, ನಾವಿಕೋತ್ಸವ, ಪುಲಿಗೆರೆ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾಳೆ. ಈಗ ಈಕೆ ನಗರದ ಎಂಇಎಸ್‌ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕಥಕ್‌ ಮತ್ತು ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ