ಆ್ಯಪ್ನಗರ

ನವರಾತ್ರಿ, ಶಿರಸಿ ಮಾರಿಕಾಂಬಾ ದೇವಿಗೆ ವಿಶೇಷ ಅಲಂಕಾರ

ಆರಂಭದ ದಿನ ಪ್ರತಿವರ್ಷದಷ್ಟು ಭಕ್ತರ ಪ್ರಮಾಣ ಇರದೇ ಇದ್ದರೂ ತೀರಾ ಕಡಿಮೆಯೇನೂ ಇಲ್ಲ. ಭಟ್ಕಳ, ಕುಂದಾಪುರ, ಹುಬ್ಬಳ್ಳಿ ಭಾಗದಿಂದಲೂ ಭಕ್ತರು ಆಗಮಿಸಿದ್ದರು. ಮಾರಿಕಾಂಬಾ ಭಜನಾ ಮಂಡಳಿಯವರು ಮುಂಜಾನೆಯಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

Vijaya Karnataka Web 17 Oct 2020, 5:18 pm
ಶಿರಸಿ: ನಾಡಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಉತ್ಸವ ಶನಿವಾರ ಆರಂಭವಾಗಿದ್ದು, ಸಂಪ್ರದಾಯದಂತೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು.
Vijaya Karnataka Web ಮಾರಿಕಾಂಬಾ ದೇವಿಗೆ ವಿಶೇಷ ಅಲಂಕಾರ
ಮಾರಿಕಾಂಬಾ ದೇವಿಗೆ ವಿಶೇಷ ಅಲಂಕಾರ


ದೇವಿಯ ಆರಾಧನೆಯ ಸುಸಂದರ್ಭವಾದ ಶರನ್ನವರಾತ್ರಿಯ ಹಿನ್ನೆಲೆಯಲ್ಲಿ ದೇಗುಲ ದ್ವಾರ, ಸಭಾಮಂಟಪ ಆವಾರದ ದ್ವಾರ ಹಾಗೂ ಗರ್ಭಗುಡಿಯ ಅಲಂಕಾರ ಕಂಗೊಳಿಸುತ್ತಿದೆ.

ಮುಖ್ಯದ್ವಾರ ಹಾಗೂ ಗರ್ಭಗುಡಿಯ ದ್ವಾರದಲ್ಲಿ ವಿನಾಯಕ ಶೇಟ್‌ ಎಂಬುವವರು ಮಂಟಪ ನಿರ್ಮಿಸಿದ್ದಾರೆ. ಗರ್ಭಗುಡಿಯ ಲ್ಲಿಪ್ರತಿವರ್ಷದಂತೆ ಈ ಬಾರಿಯೂ ಹೂವಿನ ಅಲಂಕಾರ ಮಾಡಲಾಗಿದೆ. ದೇವಿಯು ವಿವಿಧ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದು, ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ಹಣ್ಣುಕಾಯಿ, ಉಡಿ ಸೇವೆ ಸಮರ್ಪಿಸಿ ಇಷ್ಟಾರ್ಥಕ್ಕೆ ಇಡುತ್ತಿದ್ದಾರೆ.

ಆರಂಭದ ದಿನ ಪ್ರತಿವರ್ಷದಷ್ಟು ಭಕ್ತರ ಪ್ರಮಾಣ ಇರದೇ ಇದ್ದರೂ ತೀರಾ ಕಡಿಮೆಯೇನೂ ಇಲ್ಲ. ಭಟ್ಕಳ, ಕುಂದಾಪುರ, ಹುಬ್ಬಳ್ಳಿ ಭಾಗದಿಂದಲೂ ಭಕ್ತರು ಆಗಮಿಸಿದ್ದರು. ಮಾರಿಕಾಂಬಾ ಭಜನಾ ಮಂಡಳಿಯವರು ಮುಂಜಾನೆಯಿಂದ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಪಾರಾಯಣ ಸಹ ನಡೆಯಲಿದ್ದು ಆದರೆ ಸಂಕಲ್ಪಕ್ಕೆ ಭಕ್ತರಿಗೆ ಅವಕಾಶ ಇರುವುದಿಲ್ಲ. ಪಾರಾಯಣಕ್ಕೆ ಪಾವತಿ ಮಾಡಿದ ಭಕ್ತರಿಗೆ ಪ್ರಸಾದ ನೀಡಲಾಗುತ್ತಿದೆ. ರಾತ್ರಿ ಮಹಾಮಂಗಳಾರತಿ ನಡೆಯಲಿದ್ದು ಅದಾದ ನಂತರ ಅವಲಕ್ಕಿ ಪ್ರಸಾದ ವಿತರಣೆ ನಡೆಯಲಿದೆ.

ಕೊರೊನಾ ಹಿನ್ನೆಲೆಯಲ್ಲಿಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕೆಸರು ಗದ್ದೆ ಓಟ, ನಾನಾ ಸ್ಪರ್ಧೆಗಳನ್ನು ಕೈಬಿಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ