ಆ್ಯಪ್ನಗರ

ಫ್ಲೈವೀಲ್‌ ಬಡಿದು ನೌಕಾಸೇನೆ ಅಧಿಕಾರಿ ಸಾವು

ಕಾರವಾರ : ಅರಬ್ಬೀ ಸಮುದ್ರದಲ್ಲಿಗಸ್ತು ತಿರುಗುತ್ತಿದ್ದ ಭಾರತೀಯ ನೌಕಾಸೇನೆಯ ಕಾವಲು ಹಡಗು ಐಎನ್‌ಎಸ್‌ ಸುಮೇಧಾದಲ್ಲಿನೌಕಾಸೇನೆಯ ಅಧಿಕಾರಿಯೊಬ್ಬರು ಫ್ಲೈವೀಲ್‌ ಬಡಿದು ಮೃತಪಟ್ಟ ಘಟನೆ ನಡೆದಿದೆ. ಹಡಗು ಕಾರವಾರದ ಕದಂಬ ನೌಕಾನೆಲೆಗೆ ಭಾನುವಾರ ಆಗಮಿಸಿದ್ದು, ಮೃತದೇಹವನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆ ನಡೆಸಲಾಯಿತು.

Vijaya Karnataka 25 May 2020, 4:58 pm
ಕಾರವಾರ : ಅರಬ್ಬೀ ಸಮುದ್ರದಲ್ಲಿಗಸ್ತು ತಿರುಗುತ್ತಿದ್ದ ಭಾರತೀಯ ನೌಕಾಸೇನೆಯ ಕಾವಲು ಹಡಗು ಐಎನ್‌ಎಸ್‌ ಸುಮೇಧಾದಲ್ಲಿನೌಕಾಸೇನೆಯ ಅಧಿಕಾರಿಯೊಬ್ಬರು ಫ್ಲೈವೀಲ್‌ ಬಡಿದು ಮೃತಪಟ್ಟ ಘಟನೆ ನಡೆದಿದೆ. ಹಡಗು ಕಾರವಾರದ ಕದಂಬ ನೌಕಾನೆಲೆಗೆ ಭಾನುವಾರ ಆಗಮಿಸಿದ್ದು, ಮೃತದೇಹವನ್ನು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿಮರಣೋತ್ತರ ಪರೀಕ್ಷೆ ನಡೆಸಲಾಯಿತು.
Vijaya Karnataka Web navy officer killed in flywheel
ಫ್ಲೈವೀಲ್‌ ಬಡಿದು ನೌಕಾಸೇನೆ ಅಧಿಕಾರಿ ಸಾವು


ಗೌರವ್‌ ದತ್‌ ಎಂಬುವರೇ ಮೃತಪಟ್ಟ ಅಧಿಕಾರಿ. ಈ ಹಡಗು ಯೆಮನ್‌ ಬಳಿಯ ಗಲ್‌್ಫ ಆಪ್‌ ಏಡನ್‌ನಲ್ಲಿಗಸ್ತು ತಿರುಗುತ್ತಿದ್ದ ವೇಳೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ರಿಪೇರಿ ನಡೆಸುತ್ತಿದ್ದ ವೇಳೆ ಫ್ಲೈವೀಲ್‌ ಜೋರಾಗಿ ತಿರುಗಿದ ಪರಿಣಾಮ ಅದರ ಭಾಗಗಳು ಗೌರವ್‌ ಅವರ ದೇಹಕ್ಕೆ ನಾಟಿ ಮೃತಪಟ್ಟಿದ್ದಾರೆ.

ಹಡಗನ್ನು ಯೆಮನ್‌ನಿಂದ ಒಂದೂವರೆ ಸಾವಿರ ನಾಟಿಕಲ್‌ ಮೈಲು ದೂರದ ಕಾರವಾರದ ಕದಂಬ ನೌಕಾನೆಲೆಗೆ ತರಲಾಯಿತು. ಗೌರವ್‌ ಪಾರ್ಥಿವ ಶರೀರವನ್ನು ಹರಿಯಾಣಕ್ಕೆ ಕಳುಹಿಸಿಕೊಡಲಾಗುವುದು, ಅಲ್ಲದೇ ಅಪಘಾತದ ಕುರಿತು ನೌಕಾಸೇನೆ ತನಿಖೆ ನಡೆಸಲಿದೆ ಎಂದು ಕದಂಬ ನೌಕಾನೆಲೆಯ ಪಿಆರ್‌ಒ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಗಲ್‌್ಫ ಆಫ್‌ ಏಡನ್‌ನಲ್ಲಿಗಸ್ತು
ಐಎನ್‌ಎಸ್‌ ಸುಮೇಧಾ ಕಳೆದ ಜನವರಿಯಲ್ಲಿಸೋಮಾಲಿಯಾದಲ್ಲಿಕಡಲ್ಗಳ್ಳರ ವಿರುದ್ಧ ಹೋರಾಡಿ ಅಲ್‌ ಹಮೀದ್‌ ಎಂಬ ವ್ಯಾಪಾರಿ ಹಡಗನ್ನು ರಕ್ಷಿಸುವಲ್ಲಿಪ್ರಮುಖ ಪಾತ್ರ ವಹಿಸಿದ್ದನ್ನು ಸ್ಮರಿಸಬಹುದಾಗಿದೆ. ಸದ್ಯ ಐಎನ್‌ಎಸ್‌ ಸುಮೇಧಾ ಗಲ್‌್ಫ ಆಫ್‌ ಏಡನ್‌ನಲ್ಲಿಗಸ್ತಿಗೆ ನಿಯೋಜನೆಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ