ಆ್ಯಪ್ನಗರ

ವರದೆಗೆ ಮತ್ತೆ ನೆರೆ: ರೈತರು ಕಂಗಾಲು

ಶಿರಸಿ : ಸಾಗರ ಮತ್ತು ಸೊರಬ ಭಾಗದಲ್ಲಿಹೆಚ್ಚಿನ ಪ್ರಮಾಣದಲ್ಲಿಮಳೆಯಾಗುತ್ತಿರುವುದರಿಂದ ತಾಲೂಕಿನ ಬನವಾಸಿಯ ವರದಾ ನದಿಗೆ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.

Vijaya Karnataka 8 Sep 2019, 5:00 am
ಶಿರಸಿ : ಸಾಗರ ಮತ್ತು ಸೊರಬ ಭಾಗದಲ್ಲಿಹೆಚ್ಚಿನ ಪ್ರಮಾಣದಲ್ಲಿಮಳೆಯಾಗುತ್ತಿರುವುದರಿಂದ ತಾಲೂಕಿನ ಬನವಾಸಿಯ ವರದಾ ನದಿಗೆ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ.
Vijaya Karnataka Web neighbors back to varade farmers are the windfall
ವರದೆಗೆ ಮತ್ತೆ ನೆರೆ: ರೈತರು ಕಂಗಾಲು


ಎರಡು ದಿನಗಳಿಂದ ನೀರಿನ ಮಟ್ಟ ಹೆಚ್ಚಳವಾಗುತ್ತಿದ್ದು, ಅಜ್ಜರಣಿ ರಸ್ತೆ ಮಾರ್ಗದಲ್ಲಿನೀರು ಆವರಿಸತೊಡಗಿದೆ. ಇನ್ನು ಭಾಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊಗಳ್ಳಿ ಗ್ರಾಮದ ನದಿಗುಂಟದ ಕೃಷಿ ಜಮೀನು ಜಲಾವೃತವಾಗತೊಡಗಿದೆ. ಕಳೆದ ಆಗಸ್ಟ್‌ ತಿಂಗಳ ಮೊದಲ ವಾರದಲ್ಲಿಸುರಿದ ಭಾರಿ ಮಳೆಯಿಂದ ಈ ಭಾಗದ ಕೃಷಿ ಜಮೀನು ಜಲಾವೃತವಾಗಿತ್ತು. ಕೆಲ ದಿನಗಳ ನಂತರ ನೀರು ಇಳಿದಿತ್ತು. ಆದರೆ ನಾಟಿ, ಬಿತ್ತನೆ ಮಾಡಿದ ಭತ್ತದ ಗದ್ದೆಗಳು ಕೊಳೆತು ಹಾನಿಯಾಗಿತ್ತು. ತದನಂತರ ಕೆಲವು ರೈತರು ಮತ್ತೆ ಸಸಿ ಮಡಿ ತಂದು ನಾಟಿ ಕಾರ್ಯ ಮಾಡಿದ್ದರು. ಆದರೆ ಈಗ ಮತ್ತೆ ನೆರೆ ಬರುತ್ತಿರುವುದು ರೈತರನ್ನು ಕಂಗೆಡಿಸಿದೆ.

ಈ ಮಧ್ಯೆ ತಾಲೂಕಿನಲ್ಲಿಶನಿವಾರ ಇಡೀ ದಿನ ಧಾರಾಕಾರ ಮಳೆಯಾಗಿದೆ. ಶುಕ್ರವಾರ ರಾತ್ರಿಯಿಂದಲೂ ಎಡೆಬಿಡದೇ ಬೀಳುತ್ತಿದ್ದ ಮಳೆ ಶನಿವಾರವೂ ಮುಂದುವರೆದಿತ್ತು. ಇದರಿಂದ ಹಳ್ಳಕೊಳ್ಳಗಳು ತುಂಬಿ ಹರಿಯುವಂತಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ