ಆ್ಯಪ್ನಗರ

ನಿಲೇಕಣಿ ರಥೋತ್ಸವ ಸಂಭ್ರಮ

ಶಿರಸಿ: ಇತಿಹಾಸ ಪ್ರಸಿದ್ಧ ಇಲ್ಲಿಯ ನಿಲೇಕಣಿಯ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ ಚಂಪಾಷಷ್ಠಿ ಯ ದಿನವಾದ ಸೋಮವಾರ ಭಕ್ತಿಸಡಗರದಿಂದ ನಡೆಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿಪಾಲ್ಗೊಂಡು ದೇವರ ದರ್ಶನ ಪಡೆದರು.

Vijaya Karnataka 3 Dec 2019, 5:00 am
ಶಿರಸಿ: ಇತಿಹಾಸ ಪ್ರಸಿದ್ಧ ಇಲ್ಲಿಯ ನಿಲೇಕಣಿಯ ಶ್ರೀ ಸುಬ್ರಹ್ಮಣ್ಯ ದೇವರ ರಥೋತ್ಸವ ಚಂಪಾಷಷ್ಠಿ ಯ ದಿನವಾದ ಸೋಮವಾರ ಭಕ್ತಿಸಡಗರದಿಂದ ನಡೆಯಿತು. ಸಾವಿರಾರು ಭಕ್ತರು ರಥೋತ್ಸವದಲ್ಲಿಪಾಲ್ಗೊಂಡು ದೇವರ ದರ್ಶನ ಪಡೆದರು.
Vijaya Karnataka Web nilekani chariot festival
ನಿಲೇಕಣಿ ರಥೋತ್ಸವ ಸಂಭ್ರಮ


ಬೆಳಗ್ಗೆ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯೊಂದಿಗೆ ತಂದು ರಥದಲ್ಲಿಪ್ರತಿಷ್ಠಾಪಿಸಲಾಯಿತು. ಜಿಲ್ಲೆಮಾತ್ರವಲ್ಲದೇ ದಕ್ಷಿಣ ಕನ್ನಡ, ಶಿವಮೊಗ್ಗ, ಸೊರಬ ಭಾಗಗಳಿಂದಲೂ ಭಕ್ತರು ಆಗಮಿಸಿ ರಥಾರೂಢ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಪುನೀತರಾದರು.

ಈ ದೇವಾಲಯ ಸುಮಾರು ಮೂನ್ನೂರು ವರ್ಷಗಳ ಇತಿಹಾಸ ಹೊಂದಿದ್ದು ನಾಗದೋಷ ಪರಿಹಾರ, ಮಕ್ಕಳಾಗದವರಿಗೆ, ಚರ್ಮರೋಗದಿಂದ ಬಳಲುವವರ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಸ್ಥಳವೆಂಬ ಪ್ರತೀತಿಯಿದೆ. ಆ ಹಿನ್ನಲೆಯಲ್ಲಿಎಲ್ಲವರ್ಗದ ಜನ ದೇವಸ್ಥಾನಕ್ಕೆ ಆಗಮಿಸಿ ಹರಕೆ ಸೇವೆ ಸಮರ್ಪಿಸಿದರು. ಜಾತಿ ಮತದ ಮಿತಿಯನ್ನು ಮೀರುವಲ್ಲಿಐತಿಹಾಸಿಕ ಮಹತ್ವ ಹೊಂದಿರುವ ಈ ದೇವಾಲಯಕ್ಕೆ ಗಾಂಧೀಜಿ, ಲಾಲಬಹದ್ದೂರ್‌ ಶಾಸ್ತಿ್ರ ಭೇಟಿ ನೀಡಿದ್ದ ದಾಖಲೆಗಳಿರುವುದು ಉಲ್ಲೇಖನೀಯ.

ಇಂದಿನ ಕಾರ್ಯಕ್ರಮ: ರಥೋತ್ಸವದ ಮರುದಿನ ಡಿ.3ರಂದು ಶ್ರೀ ದೇವರಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯಲಿವೆ. ದೇವರ ಉತ್ಸವ ಮೂರ್ತಿಯನ್ನು ದೇಗುಲದ ಮುಂಭಾಗದ ಕೆರೆ ಸುತ್ತಲೂ ಏಳು ಪ್ರದಕ್ಷಿಣೆ ಹಾಕಿ ನಂತರದಲ್ಲಿತೆಪ್ಪೋತ್ಸವ ಮಾದರಿಯಲ್ಲಿದೇವರಿಗೆ ಕೆರೆಯಲ್ಲಿಸ್ನಾನ ಮಾಡಿಸಲಾಗುತ್ತದೆ. ನಂತರ ಅಷ್ಟಾವಧಾನ ಸೇವೆ ನಡೆಯಲಿದೆ. ಪೂಜಾ ಕೈಂಕರ್ಯದ ನಂತರದಲ್ಲಿದೇಗುಲದ ಮುಂಭಾಗದ ಕೆರೆಯಲ್ಲಿವಿಶೇಷ ಸಾಹಸ ಕಾರ್ಯಕ್ರಮವೂ ಕೂಡ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ