ಆ್ಯಪ್ನಗರ

ಮೆರವಣಿಗೆ ವೇಳೆ ಪಟಾಕಿ ಬೇಡ

ಅಂಕೋಲಾ: ಗೌರಿ ಗಣೇಶ ಮತ್ತು ಮೊಹರಂ ಹಬ್ಬಗಳಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬಗಳನ್ನು ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಸಹಕಾರ ನೀಡುವುದರ ಜತೆಗೆ ಮೆರವಣಿಗೆಯಲ್ಲಿ ಪಟಾಕಿ, ರಾಸಾಯನಿಕ ಬಣ್ಣ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಬಿ.ಪ್ರಮೋದ ಕುಮಾರ ಹೇಳಿದರು.

Vijaya Karnataka 29 Aug 2019, 5:00 am
ಅಂಕೋಲಾ: ಗೌರಿ ಗಣೇಶ ಮತ್ತು ಮೊಹರಂ ಹಬ್ಬಗಳಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಹಬ್ಬಗಳನ್ನು ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಸಹಕಾರ ನೀಡುವುದರ ಜತೆಗೆ ಮೆರವಣಿಗೆಯಲ್ಲಿ ಪಟಾಕಿ, ರಾಸಾಯನಿಕ ಬಣ್ಣ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಬಿ.ಪ್ರಮೋದ ಕುಮಾರ ಹೇಳಿದರು.
Vijaya Karnataka Web KWR-28ANK1


ತಾ.ಪಂ. ಸಭಾಭವನದಲ್ಲಿ ಗಣೇಶ ಚತುರ್ಥಿ, ಮೊಹರಂ ಹಬ್ಬದ ಅಂಗವಾಗಿ ನಡೆದ ಸಾರ್ವಜನಿಕರ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ 67 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಮತ್ತು ವಿವಿಧ ಇಲಾಖೆಗಳ ಜತೆಗೆ ಸಮಿತಿಯ ಪ್ರತಿಯೊಬ್ಬರ ಪಾತ್ರವೂ ಮುಖ್ಯವಾಗಿದೆ. ಸಮಿತಿಯ ಸದಸ್ಯರು ಮೂರ್ತಿ ವಿಸರ್ಜನೆಯ ವರೆಗೂ ಕಡ್ಡಾಯವಾಗಿ ದಿನದ 24 ತಾಸು ಇರಲೇಬೇಕು. ಎಲ್ಲ ಸಮಿತಿಗಳು ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಪರಿಸರ ಸ್ನೇಹಿ ಗಣಪತಿ ಉತ್ಸವವನ್ನು ಆಚರಿಸಿ. ಕಳೆದ ವರ್ಷ ಕೆಲವರಿಂದ ತಪ್ಪುಗಳು ನಡೆದಿವೆ. ತಪ್ಪುಗಳ ಪುನರಾವರ್ತನೆಯಾದರೆ, ಕಾನೂನು ಉಲ್ಲಂಘನೆಯಾದರೆ ಕ್ರಮ ಜರುಗಿಸಲಾಗುವುದು ಎಂದರು.

ಅಧ್ಯಕ್ಷ ತೆ ವಹಿಸಿ ಮಾತನಾಡಿದ ತಹಸೀಲ್ದಾರ ಅಶೋಕ ಗುರಾಣಿ, ಗಣೇಶ ಉತ್ಸವದ ಹೆಸರಲ್ಲಿ ಸಾಮಾಜಿಕ ಕಳಕಳಿ ಮೆರೆಯಬೇಕೆಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ತಾ.ಪಂ. ಇಒ ಕರೀಂ ಅಸದಿ, ಅಗ್ನಿಶಾಮಕದಳದ ಅಧಿಕಾರಿ ಜಯಾನಂದ ಪಟಗಾರ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ನಾಯ್ಕ ಮಾತನಾಡಿದರು. ಕರಾವಳಿ ಕಾವಲು ಪಡೆಯ ಪಿಎಸ್‌ಐ ವೀಣಾ ಹೊನ್ನಿ ವೇದಿಕೆಯಲ್ಲಿದ್ದರು.

ಹವಾಲ್ದಾರ್‌ ಮೋಹನದಾಸ ಶೇಣ್ವಿ ಸ್ವಾಗತಿಸಿದರು. ಪಿಎಸ್‌ಐ ಶ್ರೀಧರ ಪ್ರಾಸ್ತಾವಿಕ ಮಾತನಾಡಿದರು. ಪಿಎಸ್‌ಐ ಕಾಂಬಳೆ ವಂದಿಸಿದರು. ವಸಂತ್‌ ಮಹಾಲೆ ವಿಷ್ಣು ನಾಯ್ಕ, ಭಾಸ್ಕರ ನಾರ್ವೇಕರ, ನಾಗೇಂದ್ರ ನಾಯ್ಕ, ನಾಗೇಶ ನಾಯ್ಕ, ಎ.ಎಚ್‌.ದೊಡ್ಮನಿ, ಮಂಜರ ಸೈಯ್ಯದ, ನವಾಜ ಶೇಖ್‌ ಅನಿಸಿಕೆ ವ್ಯಕ್ತಪಡಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ