ಆ್ಯಪ್ನಗರ

ತರಕಾರಿ ಸಂತೆಯಲ್ಲಿ ಒಣಮೀನು ಮಾರಾಟ ಬೇಡ

ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ತರಕಾರಿ ಸಂತೆಯ ಸಂದರ್ಭದಲ್ಲಿ ತರಕಾರಿ ಮಾರಾಟ ಮಾಡುವ ಪ್ರದೇಶದಲ್ಲಿ ಇತ್ತೀಚೆಗೆ ಕೆಲವರು ಒಣ ಮೀನನ್ನು ಮಾರಾಟ ಮಾಡುತ್ತಿದ್ದಾರೆ. ಹೀಗೆ ತರಕಾರಿ ಮಾರುಕಟ್ಟೆಯಲ್ಲಿ ಒಣ ಮೀನು ಮಾರುತ್ತಿರುವುದು ಸಂತೆಗೆ ತರಕಾರಿಕೊಳ್ಳಲೆಂದು ಬಂದ ಗ್ರಾಹಕರಿಗೆ

Vijaya Karnataka 30 Jul 2019, 5:00 am
ಯಲ್ಲಾಪುರ : ಪಟ್ಟಣದಲ್ಲಿ ಪ್ರತಿ ಭಾನುವಾರ ನಡೆಯುವ ತರಕಾರಿ ಸಂತೆಯ ಸಂದರ್ಭದಲ್ಲಿ ತರಕಾರಿ ಮಾರಾಟ ಮಾಡುವ ಪ್ರದೇಶದಲ್ಲಿ ಇತ್ತೀಚೆಗೆ ಕೆಲವರು ಒಣ ಮೀನನ್ನು ಮಾರಾಟ ಮಾಡುತ್ತಿದ್ದಾರೆ. ಹೀಗೆ ತರಕಾರಿ ಮಾರುಕಟ್ಟೆಯಲ್ಲಿ ಒಣ ಮೀನು ಮಾರುತ್ತಿರುವುದು ಸಂತೆಗೆ ತರಕಾರಿಕೊಳ್ಳಲೆಂದು ಬಂದ ಗ್ರಾಹಕರಿಗೆ ಕಿರಿಕಿರಿಯಾಗುತ್ತಿದೆ. ಒಣಮೀನಿನ ಸಹಿಸಲಸಾಧ್ಯವಾದ ದುರ್ವಾಸನೆಯಿಂದ ಜನರಿಗೆ ತೊಂದರೆಯಾಗುತ್ತಿದೆ. ಹೀಗೆ ಅನಧಿಕ್ರತವಾಗಿ ತರಕಾರಿಸಂತೆಯಲ್ಲಿ ಒಣ ಮೀನು ಮಾರಾಟಮಾಡುತ್ತಿರುವುದನ್ನು ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಒಣ ಹಾಗೂ ಹಸಿ ಮೀನು ಮಾರಾಟಕ್ಕೆಂದೇ ಪಟ್ಟಣದ ಬಸ್‌ ನಿಲ್ಧಾಣ ಸಮೀಪದಲ್ಲಿ ಪ್ರತ್ಯೇಕವಾದ ಮಾರುಕಟ್ಟೆ ನಿರ್ಮಿಸಲಾಗಿದೆ. ಬಹುತೇಕ ವ್ಯಾಪಾರಿಗಳು ಈ ಮಾರುಕಟ್ಟೆಯಲ್ಲಿಯೇ ಮೀನುಮಾರಾಟ ಮಾಡುತ್ತಾರೆ. ಆದರೆ ಇತ್ತೀಚೆಗೆ ಕೆಲವರು ತರಕಾರಿ ಮಾರಾಟ ಮಾಡುವ ಬೆಲ್‌ ರಸ್ತೆಯ ಇಕ್ಕೆಲಗಳಲ್ಲಿ ಒಣ ಮೀನು ಮಾರಾಟ ಪ್ರಾರಂಭಮಾಡಿರುವುದು ಸರಿಯಲ್ಲ. ಈ ಕುರಿತು ಸ್ಥಳೀಯ ಪಟ್ಟಣ ಪಂಚಾಯತಿ ಆಡಳಿತ ಲಕ್ಷ ್ಯವಹಿಸಬೇಕು. ಹೀಗೆ ತರಕಾರಿಗಳ ಮಧ್ಯೆ ಒಣ ಮೀನುಗಳನ್ನು ರಾಶಿಹಾಕಿ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Vijaya Karnataka Web KWR-28 YLP 3
ಯಲ್ಲಾಪುರ ಪಟ್ಟಣದ ಬೆಲ್‌ ರಸ್ತೆಯಲ್ಲಿ ಭಾನುವಾರದ ತರಕಾರಿ ಸಂತೆಯ ಸಂದರ್ಭದಲ್ಲಿ ಒಣಮೀನು ಮಾರಾಟ ಮಾಡುತ್ತಿರುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ