ಆ್ಯಪ್ನಗರ

ಏನೂ ಮೂಲ ಸೌಕರ‍್ಯ ನೀಡಿಲ್ಲ

ಕಾರವಾರ: ಕಾಳಜಿ ಕೇಂದ್ರದಲ್ಲಿ ಸೌಕರ್ಯಗಳನ್ನು ನೀಡಿಲ್ಲ ಎಂದು ಆರೋಪಿಸಿ ತಾಲೂಕಿನ ಕಿನ್ನರದ ಸಂತ್ರಸ್ತರು ಶನಿವಾರ ಹಠಾತ್‌ ಪ್ರತಿಭಟನೆ ನಡೆಸಿದರು.

Vijaya Karnataka 11 Aug 2019, 5:00 am
ಕಾರವಾರ: ಕಾಳಜಿ ಕೇಂದ್ರದಲ್ಲಿ ಸೌಕರ್ಯಗಳನ್ನು ನೀಡಿಲ್ಲ ಎಂದು ಆರೋಪಿಸಿ ತಾಲೂಕಿನ ಕಿನ್ನರದ ಸಂತ್ರಸ್ತರು ಶನಿವಾರ ಹಠಾತ್‌ ಪ್ರತಿಭಟನೆ ನಡೆಸಿದರು.
Vijaya Karnataka Web nothing provides basic comfort
ಏನೂ ಮೂಲ ಸೌಕರ‍್ಯ ನೀಡಿಲ್ಲ


''ಕಿನ್ನರದಲ್ಲಿ ಪ್ರವಾಹದಿಂದಾಗಿ ಸುಮಾರು 500ಕ್ಕೂ ಅಧಿಕ ಜನರು ಸಂತ್ರಸ್ತರಾಗಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ. ಕಳೆದ ಐದು ದಿನಗಳಿಂದ ಕಾಳಜಿ ಕೇಂದ್ರದಲ್ಲಿ ಯಾವುದೇ ಸೌಕರ್ಯಗಳನ್ನು ನೀಡಿಲ್ಲ. 500 ಜನರಲ್ಲಿ ಕೇವಲ 5 ಜನರಿಗೆ ಹಾಸಿಗೆ - ಹೊದಿಕೆ ನೀಡಲಾಗಿದೆ. ನಿತ್ಯ ಔಷಧಿ ಸೇವಿಸುವ ವೃದ್ಧರಿಗೆ ನಾಲ್ಕು ದಿನಗಳಿಂದ ಮಾತ್ರೆಗಳಿಲ್ಲ. ಊಟ ಉಪಹಾರವನ್ನು ಸ್ಥಳೀಯರು, ದಾನಿಗಳು ನೀಡುತ್ತಿದ್ದಾರೆ. ಜಿಲ್ಲಾಡಳಿತದಿಂದ ಅಕ್ಕಿ ಮತ್ತು ಇನ್ನಿತರ ವಸ್ತುಗಳನ್ನು ತಂದಿಡಲಾಗಿದೆ. ಆ ವಸ್ತುಗಳನ್ನು ಬಳಕೆ ಮಾಡಿಲ್ಲ. ಈ ಬಗ್ಗೆ ವಿಚಾರಿಸಿದ್ದಲ್ಲಿ ಕಿನ್ನರ ಗ್ರಾಮದ ಸಂತ್ರಸ್ತರಿಗೆ 400ಕ್ಕೂ ಅಧಿಕ ಹಾಸಿಗೆ-ಹೊದಿಕೆ ನಿಡಲಾಗಿದೆ. ಹಾಗೂ ಎಲ್ಲ ರೀತಿಯ ಅನುಕೂಲ ಒದಗಿಸಲಾಗಿದೆ ಎಂದು ಅಧಿಕಾರಿಗಳು ಉತ್ತರಿಸುತ್ತಾರೆ'' ಎಂದು ಆರೋಪಿಸಿದ ಕಿನ್ನರ ಗ್ರಾಮಸ್ಥರು ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸುಮಾರು 400ಕ್ಕೂ ಅಧಿಕ ಜನರು ಕಿನ್ನರದ ಮುಖ್ಯರಸ್ತೆಯಲ್ಲಿ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಕಿನ್ನರದಲ್ಲಿನ ಕಾಳಜಿ ಕೇಂದ್ರಕ್ಕೆ ಸರಕಾರದಿಂದ ನೀಡಿರುವ ಅಗತ್ಯ ವಸ್ತುಗಳ ಲೆಕ್ಕಾಚಾರ ನೀಡುವಂತೆ ಆಗ್ರಹಿಸಿದರು.

ಕಾರವಾರ ತಹಶೀಲ್ದಾರ ಸ್ಥಳಕ್ಕೆ ಭæೕಟಿ ನೀಡಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಎಲ್ಲಿ ಲೋಪವಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು. ಅಲ್ಲದೇ ಸಂತ್ರಸ್ತರಿಗೆ ಎಲ್ಲರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ