ಕಾರವಾರ : ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕದ್ರಾ ಜಲಾಶಯದ ನೀರಿನ ಮಟ್ಟದಲ್ಲಿಏರಿಕೆಯಾಗಿ ಮಂಗಳವಾರ ರಾತ್ರಿಯಿಂದ 2 ಗೇಟ್ಗಳ ಮೂಲಕ 14,000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಕಾಳಿ ತೀರದ ಜನರಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚಿಸಲಾಗಿದೆ.
ಒಂದು ವಾರದಿಂದ ಭಾರಿ ಪ್ರಮಾಣದಲ್ಲಿಮಳೆ ಸುರಿಯುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗಿದ್ದು, ಪ್ರತಿಯೊಂದು ಜಲಾಶಯದಿಂದಲೂ ನೀರನ್ನು ಹೊರ ಹಾಕಲಾಗುತ್ತಿದೆ. ಜೊಯಿಡಾ ತಾಲೂಕಿನ ಸೂಪಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಬೊಮ್ನಳ್ಳಿ ಜಲಾಶಯದ 3 ಗೇಟ್ಗಳಿಂದ 14,700 ಕ್ಯೂಸೆಕ್ ನೀರು, ಕೊಡಸಳ್ಳಿ ಜಲಾಶಯದಿಂದ 3 ಗೇಟ್ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಕಾಳಿ ತೀರದ ಪ್ರದೇಶಗಳಲ್ಲಿಪ್ರವಾಹ ತಂದೊಡ್ಡಿದ ಕದ್ರಾ ಜಲಾಶಯದಿಂದ ಮತ್ತೆ ನೀರು ಬಿಡುವ ಸುದ್ದಿ ಜನರಲ್ಲಿಭಯ ಹುಟ್ಟಿಸಿದೆ. ಈಗಾಗಲೇ ಪ್ರವಾಹದಿಂದ ತತ್ತರಿಸಿ, ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. ಮತ್ತೆ ಈಗ ಜಲಾಶಯದಿಂದ ಬಿಡುವ ನೀರು ಎಲ್ಲಿಇನ್ನೊಮ್ಮೆ ಸಂತ್ರಸ್ತರನ್ನಾಗಿಸುತ್ತದೋ ಎಂಬ ಭೀತಿ ಅವರಲ್ಲಿಹುಟ್ಟಿದೆ.
ಕದ್ರಾ ಜಲಾಶಯದಿಂದ ನೀರು ಹೊರ ಬಿಡುವುದನ್ನು ಸಹಜವಾಗಿ ಪರಿಗಣಿಸುತ್ತಿದ್ದ ಕಾಳಿ ತೀರದ ಜನರು ಪ್ರಸ್ತುತ ಮಳೆಗಾಲದಲ್ಲಿಆತಂಕದಿಂದ ನೋಡುವಂತಾಗಿದೆ. ಕದ್ರಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ ಎಂಬ ಮಾಹಿತಿಯಿಂದಲೇ ಕಾಳಿ ತೀರದ ಜನರು ಮನೆ ಬಿಟ್ಟು ನದಿ ತೀರದಿಂದ ದೂರ ಪ್ರದೇಶದಲ್ಲಿಸಾಗುವಂತೆ ಮಾಡಿದೆ.
ಮಳೆ ಮುಂದುವರೆದರೆ ಜಲಾಶಯಗಳಲ್ಲಿಒಳ ಹರಿವು ಅಧಿಕವಾಗಿ ಇನ್ನೂ ಹೆಚ್ಚು ಗೇಟ್ಗಳನ್ನು ತೆರೆದು ನೀರು ಹೊರ ಬಿಡುವ ಸಾಧ್ಯತೆ ಅಧಿಕವಾಗಿದೆ. ಕದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟ 34.50 ಮೀ. ಆಗಿದ್ದು, ಮಳೆಯಿಂದಾಗಿ ನೀರಿನ ಒಳ ಹರಿವು ಹೆಚ್ಚಾಗಿ ಈಗಾಗಲೇ ಕದ್ರಾ ಜಲಾಶಯದ ನೀರಿನ ಮಟ್ಟ 32.20 ಮೀ. ಆಗಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟ 564.00 ಮೀ. ಇದ್ದು ಸತತ ಮಳೆಯಿಂದಾಗಿ 563.33 ಮೀ.ನಷ್ಟು ಭರ್ತಿಯಾಗಿದೆ. ಸೂಪಾ ಜಲಾಶಯದಿಂದ ಗಣನೀಯವಾಗಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ಸೂಪಾ ಜಲಾಶಯದ ಕೆಳಗಿನ ಜಲಾಶಯಗಳಾದ ಬೊಮ್ನಳ್ಳಿ, ಕೊಡಸಳ್ಳಿ, ಕದ್ರಾ ಜಲಾಶಯಗಳಲ್ಲಿನೀರಿನ ಒಳ ಹರಿವು ಹೆಚ್ಚಾಗುತ್ತಿದೆ.
ಕದ್ರಾ ಜಲಾಶಯದಿಂದ ಈಗಾಗಲೇ 2 ಗೇಟ್ಗಳಿಂದ ನೀರು ಹೊರ ಬಿಡಲಾಗುತ್ತಿದೆ. ಮಳೆ ಮುಂದುವರೆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿನೀರನ್ನು ಹೊರ ಬಿಡುವ ಸಾಧ್ಯತೆ ಇದ್ದು, ಕಾಳಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಸೂಚಿಸಲಾಗಿದೆ.
ಒಂದು ವಾರದಿಂದ ಭಾರಿ ಪ್ರಮಾಣದಲ್ಲಿಮಳೆ ಸುರಿಯುತ್ತಿರುವುದರಿಂದ ಜಲಾಶಯಗಳು ಭರ್ತಿಯಾಗಿದ್ದು, ಪ್ರತಿಯೊಂದು ಜಲಾಶಯದಿಂದಲೂ ನೀರನ್ನು ಹೊರ ಹಾಕಲಾಗುತ್ತಿದೆ. ಜೊಯಿಡಾ ತಾಲೂಕಿನ ಸೂಪಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಬೊಮ್ನಳ್ಳಿ ಜಲಾಶಯದ 3 ಗೇಟ್ಗಳಿಂದ 14,700 ಕ್ಯೂಸೆಕ್ ನೀರು, ಕೊಡಸಳ್ಳಿ ಜಲಾಶಯದಿಂದ 3 ಗೇಟ್ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಆಗಸ್ಟ್ ತಿಂಗಳ ಮೊದಲ ವಾರದಲ್ಲಿಯೇ ಕಾಳಿ ತೀರದ ಪ್ರದೇಶಗಳಲ್ಲಿಪ್ರವಾಹ ತಂದೊಡ್ಡಿದ ಕದ್ರಾ ಜಲಾಶಯದಿಂದ ಮತ್ತೆ ನೀರು ಬಿಡುವ ಸುದ್ದಿ ಜನರಲ್ಲಿಭಯ ಹುಟ್ಟಿಸಿದೆ. ಈಗಾಗಲೇ ಪ್ರವಾಹದಿಂದ ತತ್ತರಿಸಿ, ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ. ಮತ್ತೆ ಈಗ ಜಲಾಶಯದಿಂದ ಬಿಡುವ ನೀರು ಎಲ್ಲಿಇನ್ನೊಮ್ಮೆ ಸಂತ್ರಸ್ತರನ್ನಾಗಿಸುತ್ತದೋ ಎಂಬ ಭೀತಿ ಅವರಲ್ಲಿಹುಟ್ಟಿದೆ.
ಕದ್ರಾ ಜಲಾಶಯದಿಂದ ನೀರು ಹೊರ ಬಿಡುವುದನ್ನು ಸಹಜವಾಗಿ ಪರಿಗಣಿಸುತ್ತಿದ್ದ ಕಾಳಿ ತೀರದ ಜನರು ಪ್ರಸ್ತುತ ಮಳೆಗಾಲದಲ್ಲಿಆತಂಕದಿಂದ ನೋಡುವಂತಾಗಿದೆ. ಕದ್ರಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ ಎಂಬ ಮಾಹಿತಿಯಿಂದಲೇ ಕಾಳಿ ತೀರದ ಜನರು ಮನೆ ಬಿಟ್ಟು ನದಿ ತೀರದಿಂದ ದೂರ ಪ್ರದೇಶದಲ್ಲಿಸಾಗುವಂತೆ ಮಾಡಿದೆ.
ಮಳೆ ಮುಂದುವರೆದರೆ ಜಲಾಶಯಗಳಲ್ಲಿಒಳ ಹರಿವು ಅಧಿಕವಾಗಿ ಇನ್ನೂ ಹೆಚ್ಚು ಗೇಟ್ಗಳನ್ನು ತೆರೆದು ನೀರು ಹೊರ ಬಿಡುವ ಸಾಧ್ಯತೆ ಅಧಿಕವಾಗಿದೆ. ಕದ್ರಾ ಜಲಾಶಯದ ನೀರಿನ ಗರಿಷ್ಠ ಮಟ್ಟ 34.50 ಮೀ. ಆಗಿದ್ದು, ಮಳೆಯಿಂದಾಗಿ ನೀರಿನ ಒಳ ಹರಿವು ಹೆಚ್ಚಾಗಿ ಈಗಾಗಲೇ ಕದ್ರಾ ಜಲಾಶಯದ ನೀರಿನ ಮಟ್ಟ 32.20 ಮೀ. ಆಗಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟ 564.00 ಮೀ. ಇದ್ದು ಸತತ ಮಳೆಯಿಂದಾಗಿ 563.33 ಮೀ.ನಷ್ಟು ಭರ್ತಿಯಾಗಿದೆ. ಸೂಪಾ ಜಲಾಶಯದಿಂದ ಗಣನೀಯವಾಗಿ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ಸೂಪಾ ಜಲಾಶಯದ ಕೆಳಗಿನ ಜಲಾಶಯಗಳಾದ ಬೊಮ್ನಳ್ಳಿ, ಕೊಡಸಳ್ಳಿ, ಕದ್ರಾ ಜಲಾಶಯಗಳಲ್ಲಿನೀರಿನ ಒಳ ಹರಿವು ಹೆಚ್ಚಾಗುತ್ತಿದೆ.
ಕದ್ರಾ ಜಲಾಶಯದಿಂದ ಈಗಾಗಲೇ 2 ಗೇಟ್ಗಳಿಂದ ನೀರು ಹೊರ ಬಿಡಲಾಗುತ್ತಿದೆ. ಮಳೆ ಮುಂದುವರೆದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿನೀರನ್ನು ಹೊರ ಬಿಡುವ ಸಾಧ್ಯತೆ ಇದ್ದು, ಕಾಳಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಸೂಚಿಸಲಾಗಿದೆ.