ಆ್ಯಪ್ನಗರ

ನಾವ್‌ ಎಲ್ಲೀಗ್‌ ಹೋಗಬೇಕು...?

ಶಿರಸಿ (ಉತ್ತರ ಕನ್ನಡ) : ಅಜ್ಜ ಅಪ್ಪನ ಕಾಲದಲ್ಲಿ ಅಲ್ಪ ಸ್ವಲ್ಪ ಅರಣ್ಯ ಜಾಗ ಅತಿಕ್ರಮಣ ಮಾಡ್ಕೊಂಡ್‌ ಬಂದಿದೀವಿ.. ಹೊಟ್ಟೆ ಪಾಡಿಗೆ ಸಾಗುವಳಿ ಮಾಡ್ತಾ ಇದ್ದೇವಿ.. ಈಗ ಅದನ್ನು ಖುಲ್ಲಾ ಮಾಡಲಿಕ್ಕೆ ಬಂದ್ರೆ ನಾವು ಎಲ್ಲಿಗೆ ಹೋಗೋದು, ಏನು ಮಾಡೋದು...?

Vijaya Karnataka 24 Feb 2019, 5:00 am
ಶಿರಸಿ (ಉತ್ತರ ಕನ್ನಡ) : ಅಜ್ಜ ಅಪ್ಪನ ಕಾಲದಲ್ಲಿ ಅಲ್ಪ ಸ್ವಲ್ಪ ಅರಣ್ಯ ಜಾಗ ಅತಿಕ್ರಮಣ ಮಾಡ್ಕೊಂಡ್‌ ಬಂದಿದೀವಿ.. ಹೊಟ್ಟೆ ಪಾಡಿಗೆ ಸಾಗುವಳಿ ಮಾಡ್ತಾ ಇದ್ದೇವಿ.. ಈಗ ಅದನ್ನು ಖುಲ್ಲಾ ಮಾಡಲಿಕ್ಕೆ ಬಂದ್ರೆ ನಾವು ಎಲ್ಲಿಗೆ ಹೋಗೋದು, ಏನು ಮಾಡೋದು...?
Vijaya Karnataka Web now we want to go
ನಾವ್‌ ಎಲ್ಲೀಗ್‌ ಹೋಗಬೇಕು...?


ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವೆಡೆ ಈಗ ಇಂಥ ಪ್ರಶ್ನೆಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಒಂದೆಡೆ ಅರಣ್ಯ ಅತಿಕ್ರಮಣಕ್ಕೆ ಸಂಬಂಧಿಸಿದ ಅರ್ಜಿಗಳು ತಿರಸ್ಕೃತಗೊಂಡಿವೆ ಎನ್ನುವುದಾಗಿದೆ. ಇನ್ನೊಂದೆಡೆ, ಅರಣ್ಯ ಅತಿಕ್ರಮಣಗಳನ್ನು ಖುಲ್ಲಾ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ ಆದೇಶ ಮಾಡಿರುವುದು ಇಂಥ ಆತಂಕದ ಪ್ರಶ್ನೆಗಳನ್ನು ಹೆಚ್ಚಿಸಿದೆ.

ನಾವೇನು ಮರಗಳನ್ನು ಕಡಿದಿಲ್ಲ, ಪರಿಸರ ನಾಶ ಮಾಡಿಲ್ಲ. ಬಹುತೇಕ ಖಾಲಿ ಇರುವ ಅರಣ್ಯಭೂಮಿ ಜಾಗದಲ್ಲಿ ಎಷ್ಟೋ ವರ್ಷಗಳ ಹಿಂದಿನಿಂದ ಮನೆ ಕಟ್ಟಿ ವಾಸ ಮಾಡುತ್ತಿದ್ದೇವೆ, ಜೀವನೋಪಾಯಕ್ಕೆ ಬೆಳೆ ಬೆಳೆಯುತ್ತಿದ್ದೇವೆ, ಇಂಥ ಜಾಗ ಮಂಜೂರಿ ಕೊಡಿಸುವುದಕ್ಕೆ ಸರಕಾರಕ್ಕೆ ಬೇಡಿಕೊಳ್ಳುತ್ತ ಇದ್ದೇವೆ. ಆದರೆ ಅದಕ್ಕೆ ಮೀನಮೇಷ ಎಣಿಸುತ್ತ ಬಡಜನರ ಹೊಟ್ಟೆಮೇಲೆ ಹೊಡೆಯುವಂಥ ಕ್ರಮ ಯಾಕೆ ಎನ್ನುವುದು ಅತಿಕ್ರಮಣ ಹಕ್ಕು ಹೋರಾಟ ಸಮಿತಿಯ ಪದಾಧಿಕಾರಿಗಳ ಆಕ್ಷೇಪ.

ಸದಾ ಅಭದ್ರತೆ: ಉತ್ತರ ಕನ್ನಡ ಜಿಲ್ಲೆ ಶೇ.80ರಷ್ಟು ಅರಣ್ಯಭೂಮಿ ಹೊಂದಿದ್ದು, ಅನಿವಾರ್ಯವಾಗಿ ಅದರಲ್ಲಿ ನೆಲೆ ಕಂಡುಕೊಂಡ ಸಾವಿರಾರು ಕುಟುಂಬಗಳಿವೆ. ಹತ್ತಾರು ವರ್ಷಗಳಿಂದ ಈ ಜಾಗ ಮಂಜೂರಿಗೆ ಅರ್ಜಿ ಸಲ್ಲಿಸುತ್ತಿರುವ ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಸದಾ ಅಭದ್ರತೆ ಕಾಡುತ್ತಿದೆ. ಆದರೂ ಈಗ ಮಂಜೂರಾಗಬಹುದು, ಹಕ್ಕು ಪತ್ರ ಸಿಗಬಹುದು ಎಂದು ಕಾಯುತ್ತಿದ್ದಾರೆ.

ಇಂಥ ಅತಿಕ್ರಮಣದಾರರಲ್ಲಿ ಹಲವರಿಗೆ ಬೇರೆ ಸ್ವಂತದ ಮಾಲ್ಕಿ ಜಮೀನು ಎನ್ನುವುದಿಲ್ಲ. ಇದ್ದ ಜಾಗ, ಜಮೀನು ಎಲ್ಲವೂ ಅರಣ್ಯಭೂಮಿ ವ್ಯಾಪ್ತಿಯಲ್ಲಿದೆ. ಇಂಥವರು ಆ ಜಾಗ ತಮಗೆ ಮಂಜೂರಾಗದೇ ಇದ್ದರೆ ತಮ್ಮ ಗತಿಯೇನು ಎಂದು ಅಲವತ್ತುಕೊಳ್ಳುತ್ತಾರೆ.

ವಾಸಿಸುತ್ತಿರುವ ಮನೆ ಬಿಟ್ಟರೆ ಬೇರೆ ಸೂರು ಇಲ್ಲ, ಸಾಗುವಳಿ ಜಮೀನನ್ನು ಇಲಾಖೆ ವಶಪಡಿಸಿಕೊಂಡರೆ ಆಹಾರದ ಮೂಲವೇ ಇಲ್ಲದಂತಾಗುತ್ತದೆ ಎನ್ನುವ ಆತಂಕವನ್ನೂ ವ್ಯಕ್ತಪಡಿಸುತ್ತಾರೆ.

ದಿಕ್ಕು ತೋಚದ ಸ್ಥಿತಿ: ಇನ್ನೂ ಕೆಲವರು ಅಲ್ಪಸ್ವಲ್ಪ ಸ್ವಂತ ಜಾಗ ಜಮೀನು ಹೊಂದಿದ್ದಾರೆ. ಕುಟುಂಬ ನಿರ್ವಹಣೆಗೆಂದು ಅದರೊಂದಿಗೆ ಅಷ್ಟಿಷ್ಟು ಗುಂಟೆಗಳಷ್ಟು ಅರಣ್ಯ ಜಾಗ ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡಿಕೊಂಡಿದ್ದಾರೆ. ಜೀವನೋಪಾಯಕ್ಕಾಗಿ ಅರಣ್ಯ ಅತಿಕ್ರಮಣ ಜಾಗ ಮಂಜೂರಿಗೆ ಕಾಯುತ್ತಿದ್ದಾರೆ. ಆದರೆ, ಮಂಜೂರಿಗೆ ಸಲ್ಲಿಕೆಯಾದ 87 ಸಾವಿರದಷ್ಟು ಅರ್ಜಿಗಳ ಪೈಕಿ ಬಹುಪಾಲು ತಿರಸ್ಕೃತವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ