ಆ್ಯಪ್ನಗರ

ಇಂದಿನಿಂದ ಗೋವಾದೊಳಗೆ ಮುಕ್ತ ಪ್ರವೇಶ

ಕಾರವಾರ: ಗೋವಾ ಗಡಿಯೊಳಗೆ ಕರ್ನಾಟಕದ ಜನರಿಗೆ ಸೆ. 1ರಿಂದ ಮುಕ್ತ ಪ್ರವೇಶ ಕಲ್ಪಿಸಲು ಅಲ್ಲಿನ ಮುಖ್ಯಂತ್ರಿ ಪ್ರಮೋದ ಸಾವಂತ ಅ ಒಪ್ಪಿಗೆ ನೀಡಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿತಿಳಿಸಿದ್ದಾರೆ.

Vijaya Karnataka 1 Sep 2020, 5:00 am
ಕಾರವಾರ: ಗೋವಾ ಗಡಿಯೊಳಗೆ ಕರ್ನಾಟಕದ ಜನರಿಗೆ ಸೆ. 1ರಿಂದ ಮುಕ್ತ ಪ್ರವೇಶ ಕಲ್ಪಿಸಲು ಅಲ್ಲಿನ ಮುಖ್ಯಂತ್ರಿ ಪ್ರಮೋದ ಸಾವಂತ ಅ ಒಪ್ಪಿಗೆ ನೀಡಿದ್ದಾರೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web rupali naik


ಅನ್‌ಲಾಕ್‌ 3 ಪ್ರಕಾರ ಕೇಂದ್ರ ಗೃಹ ಸಚಿವಾಲಯ ಅಂತಾರಾಜ್ಯ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದ್ದರಿಂದ ಬಹುತೇಕ ರಾಜ್ಯಗಳ ಗಡಿ ಮುಕ್ತವಾಗಿದ್ದರೂ ಗೋವಾ ಸರಕಾರ ಹೊರ ರಾಜ್ಯದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಗೋವಾ ಪ್ರವೇಶಿಸುವವರು ಕೋವಿಡ್‌ ಪರೀಕ್ಷಾ ಶುಲ್ಕ ಎಂದು 2 ಸಾವಿರ ರೂ. ತೆರಬೇಕಿತ್ತು. ಪ್ರತಿ ನಿತ್ಯ ಗೋವಾಕ್ಕೆ ಉದ್ಯೋಗಕ್ಕಾಗಿ ಹೋಗಿ ಬರುವ ಕಾರವಾರದ ಯುವಕ, ಯುವತಿಯರಿಗೆ ಇದು ಹೊರೆಯಾಗುತ್ತಿತ್ತು. ಗೋವಾಕ್ಕೆ ತೆರಳುವ ಕಾರವಾರ ಹಾಗೂ ಜಿಲ್ಲೆಯ ಜನತೆಗೆ ಇದು ಭಾರಿ ತೊಂದರೆ ಉಂಟುಮಾಡಿತ್ತು.

ಗೋವಾ ಸರಕಾರದ ನಿರ್ಧಾರದಿಂದ ಗೋವಾಕ್ಕೆ ತೆರಳುವ ಸ್ಥಳೀಯರು ತೊಂದರೆಗೊಳಗಾಗುತ್ತಿರುವುದು ತಿಳಿದುಬರುತ್ತಿದ್ದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರೊಂದಿಗೆ ದೂರವಾಣಿಯಲ್ಲಿಮಾತನಾಡಿ, ಗೋವಾ ಸರ್ಕಾರದ ನಿರ್ಧಾರದಿಂದ ಕಾರವಾರ ಹಾಗೂ ಜಿಲ್ಲೆಯ ಜನತೆಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು, ಈ ನಿರ್ಬಂಧವನ್ನು ಸಡಿಲಿಸುವಂತೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಪ್ರಮೋದ ಸಾವಂತ, ಸೆಪ್ಟೆಂಬರ್‌1ರಿಂದ ಗೋವಾ ಗಡಿಯನ್ನು ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ಆ ಭರವಸೆಯಂತೆ ಗೋವಾ ಮುಖ್ಯಮಂತ್ರಿ ಇಂದಿನಿಂದ ಗೋವಾ ಗಡಿಯನ್ನು ಮುಕ್ತಗೊಳಿಸುವುದಾಗಿ ಪ್ರಕಟಿಸಿದ್ದಾರೆ. ಮುಂದೆಯೂ ಜಿಲ್ಲೆಯ ಜನತೆಗೆ ಗೋವಾ ಗಡಿಯಲ್ಲಿಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರೂಪಾಲಿ ನಾಯ್ಕ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ