ಆ್ಯಪ್ನಗರ

ಪರೀಕ್ಷಾ ಕೇಂದ್ರ ತೆರೆಯಿರಿ

ಭಟ್ಕಳ: ಬೇರೆ ಜಿಲ್ಲೆ, ರಾಜ್ಯ, ದೇಶಗಳಿಂದ ನಿತ್ಯವೂ ನೂರಾರು ಜನರು ಭಟ್ಕಳಕ್ಕೆ ಆಗಮಿಸುತ್ತಿದ್ದು, ಕೊರೊನಾ ಪರೀಕ್ಷಾ ವರದಿ ವಿಳಂಬವಾಗುವುದರಿಂದ ಭಟ್ಕಳದ ಜನರಿಗೆ ಹೆಚ್ಚಿನ ಅಪಾಯ ಇದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಭಟ್ಕಳ ಅಥವಾ ಹೊನ್ನಾವರದಲ್ಲಿಕೊರೊನಾ ಪರೀಕ್ಷಾ ಕೇಂದ್ರವನ್ನು ತೆರೆಯಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ ಆಗ್ರಹಿಸಿದ್ದಾರೆ.

Vijaya Karnataka 11 Jul 2020, 5:00 am
ಭಟ್ಕಳ: ಬೇರೆ ಜಿಲ್ಲೆ, ರಾಜ್ಯ, ದೇಶಗಳಿಂದ ನಿತ್ಯವೂ ನೂರಾರು ಜನರು ಭಟ್ಕಳಕ್ಕೆ ಆಗಮಿಸುತ್ತಿದ್ದು, ಕೊರೊನಾ ಪರೀಕ್ಷಾ ವರದಿ ವಿಳಂಬವಾಗುವುದರಿಂದ ಭಟ್ಕಳದ ಜನರಿಗೆ ಹೆಚ್ಚಿನ ಅಪಾಯ ಇದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಭಟ್ಕಳ ಅಥವಾ ಹೊನ್ನಾವರದಲ್ಲಿಕೊರೊನಾ ಪರೀಕ್ಷಾ ಕೇಂದ್ರವನ್ನು ತೆರೆಯಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ ಆಗ್ರಹಿಸಿದ್ದಾರೆ.
Vijaya Karnataka Web open the test center
ಪರೀಕ್ಷಾ ಕೇಂದ್ರ ತೆರೆಯಿರಿ


ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಟ್ಕಳದಲ್ಲಿಕೊರೊನಾ ಪರೀಕ್ಷೆಗೆ ಒಳಪಟ್ಟವರ ವರದಿ 4-5 ದಿನಗಳ ನಂತರ ಕೈ ಸೇರುತ್ತಿದೆ. ಪರೀಕ್ಷೆಗೆ ಒಳಪಟ್ಟವರು ವರದಿ ಬರುವ ಮೊದಲೇ ಬೇಕಾಬಿಟ್ಟಿಯಾಗಿ ತಿರುಗಾಡಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಪರಿಣಾಮವಾಗಿ ಕೊರೊನಾ ಸಮುದಾಯಕ್ಕೆ ನುಸುಳುವ ಅಪಾಯ ಇದೆ. ಶಂಕಿತರನ್ನು ತ್ವರಿತಗತಿಯಲ್ಲಿಪರೀಕ್ಷೆಗೆ ಒಳಪಡಿಸಿ ವರದಿ ನೀಡುವುದು ಈಗಿನ ಅಗತ್ಯವಾಗಿದೆ. ಭಟ್ಕಳದ ಶಾಸಕರು ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕೊರೊನಾದಿಂದ ಹೆಚ್ಚಿನ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ