ಆ್ಯಪ್ನಗರ

ಸರಣಿ ತಾಳಮದ್ದಲೆ ಕೂಟಗಳ ಪ್ರಾರಂಭೋತ್ಸವ

ಹೊನ್ನಾವರ : ತಾಲೂಕಿನ ಹೊಸಾಕುಳಿಯ ಶ್ರೀ ಉಮಾ ಮಹೇಶ್ವರ ಯಕ್ಷ ಗಾನ ಕಲಾವರ್ಧಕ ಸಂಘದ ನಲವತ್ತನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣಿ ತಾಳಮದ್ದಲೆ ಕೂಟಗಳ ಪ್ರಾರಂಭೋತ್ಸವ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ನಡೆಯಿತು.

Vijaya Karnataka 17 Jul 2019, 5:00 am
ಹೊನ್ನಾವರ : ತಾಲೂಕಿನ ಹೊಸಾಕುಳಿಯ ಶ್ರೀ ಉಮಾ ಮಹೇಶ್ವರ ಯಕ್ಷ ಗಾನ ಕಲಾವರ್ಧಕ ಸಂಘದ ನಲವತ್ತನೇ ವರ್ಷದ ಚಾತುರ್ಮಾಸ್ಯ ಏಕಾದಶಿ ಸರಣಿ ತಾಳಮದ್ದಲೆ ಕೂಟಗಳ ಪ್ರಾರಂಭೋತ್ಸವ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ನಡೆಯಿತು.
Vijaya Karnataka Web opening ceremony of series
ಸರಣಿ ತಾಳಮದ್ದಲೆ ಕೂಟಗಳ ಪ್ರಾರಂಭೋತ್ಸವ


ನೀಲಕೋಡ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವಿದ್ವಾಂಸ ಸುಬ್ರಹ್ಮಣ್ಯ ಭಟ್ಟ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ನವಿಲಗೋಣದ ವೈದ್ಯ ಡಾ.ವಿ.ವಿ.ಭಟ್ಟ, ಮುಡಾರೆ ಪ್ರಕಾಶ ಹೆಗಡೆ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ಡಾ.ಜಿ.ಕೆ.ಹೆಗಡೆ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ ಜಿ.ಎಂ.ಹೆಗಡೆ ಶಿವಪ್ಪನ್‌ ವಂದಿಸಿದರು. ಸಂಘದ ಕಾರ್ಯದರ್ಶಿ ಮುಡಾರೆ ಎಸ್‌.ಎಂ.ಹೆಗಡೆ, ಸಂಘ ನಡೆದು ಬಂದ ದಾರಿಯ ಕುರಿತು ಮಾತನಾಡಿದರು. ನ್ಯಾಯವಾದಿ ಗೋವಿಂದ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಜಯ ರಾಯಬಾರ ತಾಳಮದ್ದಲೆ ನಡೆಯಿತು. ಭಾಗವತರಾಗಿ ಕಪ್ಪೇಕೇರಿ ಸುಬ್ರಾಯ ಭಾಗವತ, ಇಡಗುಂಜಿ ಗಣೇಶ ಯಾಜಿ, ಮದ್ದಲೆ ವಾದಕರಾಗಿ ಇಡಗುಂಜಿ ಕೃಷ್ಣಯಾಜಿ, ಹರಿಕೇರಿಯ ಪಿ.ಕೆ.ಹೆಗಡೆ, ಅರ್ಥಧಾರಿಗಳಾಗಿ ನೀಲಕೋಡ ವಿಷ್ಣು ಭಟ್ಟ, ಹರಿಕೇರಿ ಡಾ. ಜಿ.ಕೆ.ಹೆಗಡೆ, ಮುಡಾರೆ ಎಸ್‌.ಎಂ.ಹೆಗಡೆ, ಚಿಟ್ಟಾಣಿ ಪ್ರಭಾಕರ ಹೆಗಡೆ, ಅಂಸಳ್ಳಿ ಈಶ್ವರ ಭಟ್ಟ, ಕೊಂಡದಕುಳಿ ಲಕ್ಷ್ಮಿಕಾಂತ ಹೆಗಡೆ, ಬೇರೊಳ್ಳಿ ವಿನಯ ಭಟ್ಟ, ಶೀಗಡಿ ಗಣೇಶ ಹೇಗಡೆ, ಹಡಿನಬಾಳ ಕೇಶವ ಗೌಡ, ಕವಲಕ್ಕಿಯ ಜನಾರ್ಧನ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ಆರಂಭದಲ್ಲಿ ದಿವಂಗತ ವೆಂಭ ವಂದೂರು ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

28ಕ್ಕೆ ತಾಳಮದ್ದಲೆ : ಸರಣಿ ತಾಳ ಮದ್ದಲೆ ಕೂಟಗಳ ಮುಂದಿನ ತಾಳಮದ್ದಲೆ ಕಾರ್ಯಕ್ರಮ ಜುಲೈ 28ರಂದು ಸಂಜೆ 4ಕ್ಕೆ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ