ಆ್ಯಪ್ನಗರ

ಸ್ವ ಉದ್ಯೋಗ ಕೈಗೊಳ್ಳಲು ಹೇರಳ ಅವಕಾಶ

ಜೊಯಿಡಾ : ವಿ.ಆರ್‌.ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ಉದ್ದೇಶವೇ ಕೌಶಲ್ಯಾಭಿವೃದ್ಧಿಯದ್ದಾಗಿದೆ. 15 ವರ್ಷಗಳಲ್ಲಿನಮ್ಮ ಸಂಸ್ಥೆ ವಿವಿಧ ಸಂಘಗಳ ಜನರಿಗೆ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸುವ ತರಬೇತಿ ನೀಡಿದೆ ಎಂದು ಪ್ರಸಾದ ದೇಶಪಾಂಡೆ ಹೇಳಿದರು.

Vijaya Karnataka 21 Dec 2019, 5:00 am
ಜೊಯಿಡಾ : ವಿ.ಆರ್‌.ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ಉದ್ದೇಶವೇ ಕೌಶಲ್ಯಾಭಿವೃದ್ಧಿಯದ್ದಾಗಿದೆ. 15 ವರ್ಷಗಳಲ್ಲಿನಮ್ಮ ಸಂಸ್ಥೆ ವಿವಿಧ ಸಂಘಗಳ ಜನರಿಗೆ ಸ್ವಯಂ ಉದ್ಯೋಗ ಅವಕಾಶ ಕಲ್ಪಿಸುವ ತರಬೇತಿ ನೀಡಿದೆ ಎಂದು ಪ್ರಸಾದ ದೇಶಪಾಂಡೆ ಹೇಳಿದರು.
Vijaya Karnataka Web opportunity for self employment
ಸ್ವ ಉದ್ಯೋಗ ಕೈಗೊಳ್ಳಲು ಹೇರಳ ಅವಕಾಶ


ಜೊಯಿಡಾದ ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿ.ಆರ್‌.ದೇಶಪಾಂಡೆ ಮೆಮೋರಿಯಲ್‌ ಟ್ರಸ್ಟ್‌ ಸಹಕಾರದೊಂದಿಗೆ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ, ಮಂಗಳೂರಿನ ಕೊಂಕಣಿ ಕೇಂದ್ರ ಆಶ್ರಯದಲ್ಲಿನಡೆದ ಕೊಂಕಣಿ ಮಾತೃಭಾಷೆಯನ್ನಾಡುವ ಜೊಯಿಡಾ ತಾಲೂಕಿನ ಕುಣಬಿ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಭಾರತದಲ್ಲಿಶೇ.5ರಷ್ಟು ಯುವಜನತೆ ಇದ್ದಾರೆ. ಇಂದು ಓದಿ ಪದವಿ ಪಡೆದರೂ ಉದ್ಯೋಗ ದೊರೆಯುವುದು ಕಷ್ಟವಾಗಿದೆ. ಆಧುನಿಕ ಕೃಷಿ ಮಾಡುವುದರೊಂದಿಗೆ ಕೃಷಿ ಕ್ಷೇತ್ರದಲ್ಲಿಯೂ ಹಲವಾರು ಅವಕಾಶಗಳಿವೆ. ಉದ್ಯೋಗ ವಂಚಿತ ಯುವಕರಿಗೆ ಹಲವಾರು ಸ್ವಯಂ ಉದ್ಯೋಗದ ಅವಕಾಶಗಳಿದ್ದು, ನಮ್ಮ ಸಂಸ್ಥೆ ಎಲ್ಲರೀತಿಯ ತರಬೇತಿ, ಸಹಕಾರ ನೀಡಲಿದ್ದು, ಇದರಲ್ಲಿಯುವಕರು ತೊಡಗಿಕೊಳ್ಳಬೇಕು ಎಂದರು.

ಕಾರವಾರ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದ ಕುಣಬಿ ಸಮುದಾಯದ ಸುನೀತಾ ದತ್ತಾತ್ರೇಯ ಕುಣಬಿ ಇವರನ್ನು ಸನ್ಮಾನಿಸಲಾಯಿತು. ಡಿಪ್ಲೋಮಾ, ಪಿಯುಸಿ, ಡಿಗ್ರಿ ಕಾಲೇಜಿನ 181 ಕುಣಬಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಜಿ.ಪಂ. ಸದಸ್ಯ ರಮೇಶ ನಾಯ್ಕ, ತಾಪಂ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಜೊಯಿಡಾ ಗ್ರಾಪಂ ಅಧ್ಯಕ್ಷೆ ಶೈಲಾ ನಾಯ್ಕ, ಪ್ರಾಂಶುಪಾಲ ಡಾ.ಎಸ್‌.ಎಸ್‌.ಅಂಗಡಿ, ಡಾ.ಜಯಾನಂದ ಡೇರೆಕರ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸದಾನಂದ ದಬಗಾರ, ಅಶೋಕ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ