ಕಾರವಾರ : ಬರೋಬ್ಬರಿ ಒಂದು ದಶಕದ ಬಳಿಕ ಕಾರವಾರ ವಾಣಿಜ್ಯ ಬಂದರು ಅದಿರು ಸಾಗಟಕ್ಕೆ ತೆರೆದುಕೊಂಡಿದೆ. ಬಂದರಿನಿಂದ ಬಾಕ್ಸೈಟ್ ಅದಿರು ಸಾಗಣೆ ಆರಂಭವಾಗಿದ್ದು ಇದರಿಂದ ಆದಾಯ ಹೆಚ್ಚಳವಾಗುವ ವಿಶ್ವಾಸವನ್ನು ಬಂದರು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೊದಲು ಸಾವಿರಾರು ಟನ್ ಕಬ್ಬಿಣದ ಅದಿರು ಕಾರವಾರ ಬಂದರಿನಿಂದ ವಿದೇಶಕ್ಕೆ ರಫ್ತಾಗುತ್ತಿತ್ತು. ದಶಕದ ಹಿಂದೆ ಅದಿರಿನ ಅಕ್ರಮ ಸಾಗಾಟ ಪ್ರಕರಣ ನಡೆದ ಬಳಿಕ ಯಾವುದೇ ರೀತಿಯ ಖನಿಜ ಪದಾರ್ಥ ಇಲ್ಲಿಂದ ಸಾಗಾಟವಾಗುವುದು ಸಂಪೂರ್ಣ ನಿಂತು ಹೋಗಿತ್ತು. ಆದರೆ ಆ ಪ್ರಕರಣದ ಬಳಿಕ ಇದೇ ಮೊದಲ ಬಾರಿಗೆ ಸುಮಾರು 47 ಸಾವಿರ ಮೆಟ್ರಿಕ್ ಟನ್ ಬಾಕ್ಸೈಟ್ ಅದಿರು ಕಾರವಾರ ಬಂದರಿಗೆ ಬಂದಿದೆ. ವಿಶಾಖಪಟ್ಟಣ ಸಮೀಪದ ಗಂಗಾವರಮ್ ಬಂದರಿನಿಂದ ಈ ಅದಿರು ಕಾರವಾರ ಬಂದರಿಗೆ ಬಂದಿದೆ. ಡೆಲ್ಟಾ ವರ್ಡ್ವೈಡ್ ಇನಪ್ರಾಸ್ಟ್ರಕ್ಚರ್ ಲಿ. ಸಂಸ್ಥೆಯ ಹಡಗು ಅದಿರನ್ನು ಹೊತ್ತು ತಂದಿದೆ. ಈ ಅದಿರು ಬೆಳಗಾವಿಯ ಹಿಂಡಾಲ್ಕೋ ಕಂಪನಿಗೆ ಟ್ರಕ್ಗಳ ಮೂಲಕ ಸಾಗಿಸಲಾಗುತ್ತದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ಜ್ ಮೂಲಕ ತರಲಾಯಿತು. : ಕಾರವಾರ ಬಂದರಿನಲ್ಲಿ ಹಡಿನ ಡ್ರಾಫ್ಟ್ ಮಟ್ಟ ( ಲಂಗರು ಹಾಕುವ ಜಾಗದಲ್ಲಿ ಹಡಗಿನ ತಳ ಮುಳುಗುವ ಪ್ರಮಾಣ ) 7.5 ಮೀ. ಮಾತ್ರ ಇದೆ. ಆದರೆ ಅದಿರು ಹೊತ್ತು ಬಂದಿದ್ದ ಹಡಗು 11.5 ಮೀ. ಡ್ರಾಫ್ಟ್ ಹೊಂದಿದೆ. ಈ ಹಿನ್ನೆಲೆಯಲ್ಲಿ ಹಡಗನ್ನು ಸಮುದ್ರದಲ್ಲೇ ನಿಲುಗಡೆ ಮಾಡಿ ಬಳಿಕ ಬಾರ್ಜ್ ಮೂಲಕ ಅದರಿನ್ನು ಬಂದರಿಗೆ ತರಲಾಯಿತು ಎಂದು ಕಾರವಾರ ವಾಣಿಜ್ಯ ಬಂದರಿನ ಅಧಿಕಾರಿ ಮಾಹಿತಿ ನೀಡಿದರು.
ಗೋವಾಕ್ಕೆ ಹೋಗುತ್ತಿತ್ತು : ಬಾಕ್ಸೈಟ್ ಅದಿರು ಗೋವಾದ ಮವæೂ್ಗೕವಾ ಬಂದರಿಗೆ ಗಂಗಾವರ್ನಿಂದ ಬರುತ್ತಿತ್ತು. ಬಳಿಕ ಗೋವಾ ಬಂದರಿನಿಂದ ಅನಮೋಡ್ ಹೆದ್ದಾರಿಯ ಮೂಲಕ ಬೆಳಗಾವಿಗೆ ಟ್ರಕ್ಗಳಲ್ಲಿ ಸಾಗಾಟವಾಗುತ್ತಿತ್ತು. ಆದರೆ ಅನಮೋಡ ರಸ್ತೆ ಸಂಪೂರ್ಣ ಹಾಳಾಗಿರುವ ಕಾರಣ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಬಳಿಕ ಸಧ್ಯ ಈ ರಸ್ತೆಯ ಅಗಲೀಕರಣ ಕಾರ್ಯವೂ ನಡೆದಿದೆ. ಈ ಹಿನ್ನೆಲೆಯಲ್ಲಿ ಅದಿರನ್ನು ಕಾರವಾರ ಬಂದರಿನ ಮೂಲಕ ಬೆಳಗಾವಿಗೆ ಸಾಗಿಸಲಾಗುತ್ತಿದೆ.
ಟ್ರಕ್ಗಳಲ್ಲಿ ಅದಿರು ತುಂಬಿ ಜೋಯಿಡಾ ರಾಮನಗರ ರಸ್ತೆ ಮಾರ್ಗದ ಮೂಲಕ ಬೆಳಗಾವಿಗೆ ಸಾಗಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಉದ್ಯೋಗಾವಕಾಶ ಚಿಗುರುವ ವಿಶ್ವಾಸ : ದಶಕದ ಹಿಂದೆ ಕಾರವಾರ ವಾಣಿಜ್ಯ ಬಂದರು ವಹಿವಾಟಿನಲ್ಲಿ ಉತ್ತುಂಗಕ್ಕೇರಿತ್ತು. ಸಾವಿರಾರು ಟನ್ ಕಬ್ಬಿಣದ ಅದಿರು ಮತ್ತು ಗ್ರಾನೈಟ್ ಈ ಬಂದರಿನಿಂದ ರಫ್ತಾಗುತ್ತಿತ್ತು.
ಇದರಿಂದ ಕಾರ್ಮಿಕರು, ಸರಕು ಸಾಗಣೆ ವಾಹನಗಳ ಮಾಲೀಕರು, ವಾಹನಗಳ ಕಾರ್ಮಿಕರು, ಕಾರ್ಮಿಕರ ಗುತ್ತಿಗೆದಾರರು, ಜೆಸಿಬಿ ಮತ್ತಿತರ ಯಂತ್ರೋಪಕಣಗಳ ಪೂರೈಕೆದಾರರು ಸೇರಿದಂತೆ ಸಾವಿರಾರು ಮಂದಿಯ ಜೀವನೋಪಾಯಕ್ಕೆ ದಾರಿಯಾಗಿತ್ತು. ಆದರೆ ಅಕ್ರಮ ಅದಿರು ಸಾಗಣೆ ಪ್ರಕರಣದ ಕಾರಣದಿಂದ ಈ ಬಂದರಿನಲ್ಲಿ ಅದಿರು ಸಾಗಣೆ ನಿಂತುಹೋಗಿತ್ತು. ಇನ್ನು ಬಂದರಿನಿಂದ ಗ್ರಾನೈಟ್ ಸಾಗಿಸುವ ಲಾರಿಗಳು ಓವರ್ ಲೋಡ್ ಕೊಂಡೊಯ್ಯುತ್ತಿವೆ. ಇದರಿಂದ ರಸ್ತೆ ಹಾಳಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾನೈಟ್ ಸಾಗಾಟ ಕೂಡ ಬಂದ್ ಆಯಿತು.
ಇದರಿಂದ ಬಹುತೇಕ ಸರಕು ಸಾಗಣೆ ವಾಹನಗಳ ಮಾಲೀಕರು, ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಬದಲಿ ಉದ್ಯೋಗ ಅವಲಂಭಿಸುವಂತಾಯಿತು. ಈಗ ಮತ್ತೆ ಬಂದರಿನಲ್ಲಿ ಅದಿರು ಸಾಗಾಟ ಸಣ್ಣ ಪ್ರಮಾಣದಲ್ಲಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡವರಿಗೆ ಮತ್ತೆ ಉದ್ಯೋಗ ದೊರೆಯುವ ಭರವಸೆ ಮೂಡಿದೆ.
ನಿರಂತರ ಸಾಗಾಟ ಸಾಧ್ಯತೆ : ಪ್ರತಿ ವರ್ಷ ಗಂಗಾವರಮ್ನಿಂದ ಬೆಳಗಾವಿಗೆ ಸುಮಾರು 5 ಲಕ್ಷ ಟನ್ ಬಾಕ್ಸೈಟ್ ಅದಿರು ಸಾಗಾಟವಾಗುತ್ತದೆ. ಅದಿರು ಸಾಗಾಟ ಸಧ್ಯ ಮೇ ವರೆಗೆ ಕಾರವಾರ ಬಂದರಿನ ಮೂಲಕ ನಡೆಯಲಿದೆ. ಆ ಬಳಿಕ ಅನಮೋಡ ರಸ್ತೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಅಲ್ಲಿನ ರಸ್ತೆ ಸರಿ ಆದರೆ ಮೊದಲಿನಂತೆ ಗೋವಾ ಬಂದರಿನ ಮೂಲಕ ಅದಿರು ಸಾಗಾಟ ನಡೆಯಲಿದೆ. ಆದರೆ ಕಾರವಾರ ಬಂದರಿನ ಕೆಲ ಅನುಕೂಲತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿಂದಲೂ ಕೆಲ ಭಾಗ ಅದಿರನ್ನು ನಿರಂತರವಾಗಿ ಸಾಗಾಟ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಏನೇ ಆದರೂ ಅದಿರು ಸಾಗಾಟದಿಂದ ಬಂದರಿಗೆ ಸಾಕಷ್ಟು ಆರ್ಥಿಕ ಲಾಭವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲು ಸಾವಿರಾರು ಟನ್ ಕಬ್ಬಿಣದ ಅದಿರು ಕಾರವಾರ ಬಂದರಿನಿಂದ ವಿದೇಶಕ್ಕೆ ರಫ್ತಾಗುತ್ತಿತ್ತು. ದಶಕದ ಹಿಂದೆ ಅದಿರಿನ ಅಕ್ರಮ ಸಾಗಾಟ ಪ್ರಕರಣ ನಡೆದ ಬಳಿಕ ಯಾವುದೇ ರೀತಿಯ ಖನಿಜ ಪದಾರ್ಥ ಇಲ್ಲಿಂದ ಸಾಗಾಟವಾಗುವುದು ಸಂಪೂರ್ಣ ನಿಂತು ಹೋಗಿತ್ತು. ಆದರೆ ಆ ಪ್ರಕರಣದ ಬಳಿಕ ಇದೇ ಮೊದಲ ಬಾರಿಗೆ ಸುಮಾರು 47 ಸಾವಿರ ಮೆಟ್ರಿಕ್ ಟನ್ ಬಾಕ್ಸೈಟ್ ಅದಿರು ಕಾರವಾರ ಬಂದರಿಗೆ ಬಂದಿದೆ. ವಿಶಾಖಪಟ್ಟಣ ಸಮೀಪದ ಗಂಗಾವರಮ್ ಬಂದರಿನಿಂದ ಈ ಅದಿರು ಕಾರವಾರ ಬಂದರಿಗೆ ಬಂದಿದೆ. ಡೆಲ್ಟಾ ವರ್ಡ್ವೈಡ್ ಇನಪ್ರಾಸ್ಟ್ರಕ್ಚರ್ ಲಿ. ಸಂಸ್ಥೆಯ ಹಡಗು ಅದಿರನ್ನು ಹೊತ್ತು ತಂದಿದೆ. ಈ ಅದಿರು ಬೆಳಗಾವಿಯ ಹಿಂಡಾಲ್ಕೋ ಕಂಪನಿಗೆ ಟ್ರಕ್ಗಳ ಮೂಲಕ ಸಾಗಿಸಲಾಗುತ್ತದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.
ಬಾರ್ಜ್ ಮೂಲಕ ತರಲಾಯಿತು. : ಕಾರವಾರ ಬಂದರಿನಲ್ಲಿ ಹಡಿನ ಡ್ರಾಫ್ಟ್ ಮಟ್ಟ ( ಲಂಗರು ಹಾಕುವ ಜಾಗದಲ್ಲಿ ಹಡಗಿನ ತಳ ಮುಳುಗುವ ಪ್ರಮಾಣ ) 7.5 ಮೀ. ಮಾತ್ರ ಇದೆ. ಆದರೆ ಅದಿರು ಹೊತ್ತು ಬಂದಿದ್ದ ಹಡಗು 11.5 ಮೀ. ಡ್ರಾಫ್ಟ್ ಹೊಂದಿದೆ. ಈ ಹಿನ್ನೆಲೆಯಲ್ಲಿ ಹಡಗನ್ನು ಸಮುದ್ರದಲ್ಲೇ ನಿಲುಗಡೆ ಮಾಡಿ ಬಳಿಕ ಬಾರ್ಜ್ ಮೂಲಕ ಅದರಿನ್ನು ಬಂದರಿಗೆ ತರಲಾಯಿತು ಎಂದು ಕಾರವಾರ ವಾಣಿಜ್ಯ ಬಂದರಿನ ಅಧಿಕಾರಿ ಮಾಹಿತಿ ನೀಡಿದರು.
ಗೋವಾಕ್ಕೆ ಹೋಗುತ್ತಿತ್ತು : ಬಾಕ್ಸೈಟ್ ಅದಿರು ಗೋವಾದ ಮವæೂ್ಗೕವಾ ಬಂದರಿಗೆ ಗಂಗಾವರ್ನಿಂದ ಬರುತ್ತಿತ್ತು. ಬಳಿಕ ಗೋವಾ ಬಂದರಿನಿಂದ ಅನಮೋಡ್ ಹೆದ್ದಾರಿಯ ಮೂಲಕ ಬೆಳಗಾವಿಗೆ ಟ್ರಕ್ಗಳಲ್ಲಿ ಸಾಗಾಟವಾಗುತ್ತಿತ್ತು. ಆದರೆ ಅನಮೋಡ ರಸ್ತೆ ಸಂಪೂರ್ಣ ಹಾಳಾಗಿರುವ ಕಾರಣ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಬಳಿಕ ಸಧ್ಯ ಈ ರಸ್ತೆಯ ಅಗಲೀಕರಣ ಕಾರ್ಯವೂ ನಡೆದಿದೆ. ಈ ಹಿನ್ನೆಲೆಯಲ್ಲಿ ಅದಿರನ್ನು ಕಾರವಾರ ಬಂದರಿನ ಮೂಲಕ ಬೆಳಗಾವಿಗೆ ಸಾಗಿಸಲಾಗುತ್ತಿದೆ.
ಟ್ರಕ್ಗಳಲ್ಲಿ ಅದಿರು ತುಂಬಿ ಜೋಯಿಡಾ ರಾಮನಗರ ರಸ್ತೆ ಮಾರ್ಗದ ಮೂಲಕ ಬೆಳಗಾವಿಗೆ ಸಾಗಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಉದ್ಯೋಗಾವಕಾಶ ಚಿಗುರುವ ವಿಶ್ವಾಸ : ದಶಕದ ಹಿಂದೆ ಕಾರವಾರ ವಾಣಿಜ್ಯ ಬಂದರು ವಹಿವಾಟಿನಲ್ಲಿ ಉತ್ತುಂಗಕ್ಕೇರಿತ್ತು. ಸಾವಿರಾರು ಟನ್ ಕಬ್ಬಿಣದ ಅದಿರು ಮತ್ತು ಗ್ರಾನೈಟ್ ಈ ಬಂದರಿನಿಂದ ರಫ್ತಾಗುತ್ತಿತ್ತು.
ಇದರಿಂದ ಕಾರ್ಮಿಕರು, ಸರಕು ಸಾಗಣೆ ವಾಹನಗಳ ಮಾಲೀಕರು, ವಾಹನಗಳ ಕಾರ್ಮಿಕರು, ಕಾರ್ಮಿಕರ ಗುತ್ತಿಗೆದಾರರು, ಜೆಸಿಬಿ ಮತ್ತಿತರ ಯಂತ್ರೋಪಕಣಗಳ ಪೂರೈಕೆದಾರರು ಸೇರಿದಂತೆ ಸಾವಿರಾರು ಮಂದಿಯ ಜೀವನೋಪಾಯಕ್ಕೆ ದಾರಿಯಾಗಿತ್ತು. ಆದರೆ ಅಕ್ರಮ ಅದಿರು ಸಾಗಣೆ ಪ್ರಕರಣದ ಕಾರಣದಿಂದ ಈ ಬಂದರಿನಲ್ಲಿ ಅದಿರು ಸಾಗಣೆ ನಿಂತುಹೋಗಿತ್ತು. ಇನ್ನು ಬಂದರಿನಿಂದ ಗ್ರಾನೈಟ್ ಸಾಗಿಸುವ ಲಾರಿಗಳು ಓವರ್ ಲೋಡ್ ಕೊಂಡೊಯ್ಯುತ್ತಿವೆ. ಇದರಿಂದ ರಸ್ತೆ ಹಾಳಾಗುತ್ತಿದೆ ಎಂಬ ಬಲವಾದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗ್ರಾನೈಟ್ ಸಾಗಾಟ ಕೂಡ ಬಂದ್ ಆಯಿತು.
ಇದರಿಂದ ಬಹುತೇಕ ಸರಕು ಸಾಗಣೆ ವಾಹನಗಳ ಮಾಲೀಕರು, ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಬದಲಿ ಉದ್ಯೋಗ ಅವಲಂಭಿಸುವಂತಾಯಿತು. ಈಗ ಮತ್ತೆ ಬಂದರಿನಲ್ಲಿ ಅದಿರು ಸಾಗಾಟ ಸಣ್ಣ ಪ್ರಮಾಣದಲ್ಲಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡವರಿಗೆ ಮತ್ತೆ ಉದ್ಯೋಗ ದೊರೆಯುವ ಭರವಸೆ ಮೂಡಿದೆ.
ನಿರಂತರ ಸಾಗಾಟ ಸಾಧ್ಯತೆ : ಪ್ರತಿ ವರ್ಷ ಗಂಗಾವರಮ್ನಿಂದ ಬೆಳಗಾವಿಗೆ ಸುಮಾರು 5 ಲಕ್ಷ ಟನ್ ಬಾಕ್ಸೈಟ್ ಅದಿರು ಸಾಗಾಟವಾಗುತ್ತದೆ. ಅದಿರು ಸಾಗಾಟ ಸಧ್ಯ ಮೇ ವರೆಗೆ ಕಾರವಾರ ಬಂದರಿನ ಮೂಲಕ ನಡೆಯಲಿದೆ. ಆ ಬಳಿಕ ಅನಮೋಡ ರಸ್ತೆ ಪುನರಾರಂಭಗೊಳ್ಳುವ ಸಾಧ್ಯತೆ ಇದೆ. ಅಲ್ಲಿನ ರಸ್ತೆ ಸರಿ ಆದರೆ ಮೊದಲಿನಂತೆ ಗೋವಾ ಬಂದರಿನ ಮೂಲಕ ಅದಿರು ಸಾಗಾಟ ನಡೆಯಲಿದೆ. ಆದರೆ ಕಾರವಾರ ಬಂದರಿನ ಕೆಲ ಅನುಕೂಲತೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿಂದಲೂ ಕೆಲ ಭಾಗ ಅದಿರನ್ನು ನಿರಂತರವಾಗಿ ಸಾಗಾಟ ಮಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಏನೇ ಆದರೂ ಅದಿರು ಸಾಗಾಟದಿಂದ ಬಂದರಿಗೆ ಸಾಕಷ್ಟು ಆರ್ಥಿಕ ಲಾಭವಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.