ಆ್ಯಪ್ನಗರ

ಹೊನ್ನಾವರದಲ್ಲಿ ಸಾವಯವ ಕೃಷಿ ಮೇಳ

ಹೊನ್ನಾವರ : ಇಲ್ಲಿಯ ರೋಟರಿ ಕ್ಲಬ್‌ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿ ಆಶ್ರಯದಲ್ಲಿ 2 ದಿನಗಳ ಸಾವಯವ ಕೃಷಿಮೇಳಕ್ಕೆ ಪಟ್ಟಣದ ಸೇಂಟ್‌ ಅಂಥೋನಿ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.

Vijaya Karnataka 3 Feb 2019, 5:00 am
ಹೊನ್ನಾವರ : ಇಲ್ಲಿಯ ರೋಟರಿ ಕ್ಲಬ್‌ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿ ಆಶ್ರಯದಲ್ಲಿ 2 ದಿನಗಳ ಸಾವಯವ ಕೃಷಿಮೇಳಕ್ಕೆ ಪಟ್ಟಣದ ಸೇಂಟ್‌ ಅಂಥೋನಿ ಮೈದಾನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
Vijaya Karnataka Web organic farm fair in honnavar
ಹೊನ್ನಾವರದಲ್ಲಿ ಸಾವಯವ ಕೃಷಿ ಮೇಳ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಎಲ್‌.ಎಚ್‌.ಮಂಜುನಾಥ ಚಾಲನೆ ನೀಡಿ ಮಾತನಾಡಿ, ಭಾರತ ಕೃಷಿ ಪ್ರಧಾನ ದೇಶವಾದರೂ ಇದರಿಂದ ಬರುವ ಆದಾಯ ಶೇ.5 ಮಾತ್ರ ಆಗಿದೆ. ಹಸಿರು ಕ್ರಾಂತಿ ಬಳಸಿ ಕೃಷಿ ಉತ್ಪಾದನೆಯ ಪ್ರಮಾಣ ಹೆಚ್ಚಿಸಿದೆವು. ಸಾವಯವ ಬಳಕೆ ಕಡಿಮೆ ಆಗುತ್ತಿದೆ. ರಾಸಾಯನಿಕವೇ ಹೆಚ್ಚು ಬಳಕೆ ಆಗುತ್ತಿದೆ ಎಂದರು.

ಸಾವಯವದ ಜೊತೆ ಸಮಯೋಚಿತ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡಬೇಕಿದೆ ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿವೇಕ ಜಾಲಿಸತ್ಗಿ ಮಾತನಾಡಿ, ಸಾಲಮನ್ನಾ ವಿಷಯದಲ್ಲಿ ರೈತರು ಅಲ್ಪತೃಪ್ತಿಗಳಾಗಿದ್ದೇವೆ. ರೈತರ ಸಾಲಮನ್ನಾ ನಮಗೆ ಬೇಕಿಲ್ಲ. ಬದಲಿಗೆ ರೈತರ ಬೇಡಿಕೆಯಾದ ಬೆಳೆಗೆ ಯೋಗ್ಯ ಬೆಲೆಗೆ ಸಿಗಬೇಕು ಎಂದರು.

ಕ್ರೀಡಾಕೂಟಗಳಿಗೆ ನೀಡುವ ಮೊತ್ತ ಕೃಷಿ ಪ್ರದರ್ಶನದ ವಿಜೇತರಿಗೆ ಸಿಗುತ್ತಿಲ್ಲ. ಇದು ನಮ್ಮ ದುಸ್ಥಿತಿ ಇಂತಹ ಸನ್ನಿವೇಶ ಬದಲಾಗಬೇಕಿದೆ ಎಂದರು.

ಪರಿಸರ ತಜ್ಞ ಶಿವಾನಂದ ಹೆಗಡೆ ಕಳವೆ ಮಾತನಾಡಿ, ಸಾವಯವದ ಕುರಿತು ಮಾಹಿತಿ ಪಡೆದು ಅದರಲ್ಲಿ ಒಲವು ಮೂಡಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಆಯೋಜಿಸುವ ಮೂಲಕ ಸಾವಯವದ ಜಾಗೃತಿ ಮೂಡಲು ಸಹಕಾರಿಯಾಗುತ್ತದೆ ಎಂದರು.

ಅಧ್ಯಕ್ಷ ತೆ ವಹಿಸಿದ್ದ ರೋಟರಿ ಕ್ಲಬ್‌ ಅಧ್ಯಕ್ಷ ಡಾ.ರಂಗನಾಥ ಪೂಜಾರಿ ಮಾತನಾಡಿ, ನಿರ್ದಿಷ್ಟ ಪ್ರಮಾಣದಲ್ಲಿ ರಾಸಾಯನಿಕ ಪದಾರ್ಥವನ್ನು ಬಳಸದೆ ಅತಿಯಾಗಿ ಬಳಸಿದಾಗ ಭೂಮಿಯ ಸತ್ವ ಸಂಪೂರ್ಣ ನಾಶವಾಗುತ್ತದೆ. ಸತ್ವವನ್ನು ಕಳೆದುಕೊಂಡ ಭೂಮಿ ಇಡೀ ಮಾನವ ಕುಲದ ರೋಗಕ್ಕೆ ಕಾರಣವಾಗುತ್ತಿದೆ ಎಂದರು.

ವೇದಿಕೆಯಲ್ಲಿ ಪ್ರಗತಿಪರ ರೈತರಾದ ಸುಬ್ರಾಯ ಹೆಗಡೆ, ಮಾದರಿ ಹೈನುಗಾರಿಕೆಯ ಮಹಿಳೆ ಸರಸ್ವತಿ ಗಂಗೊಳ್ಳಿ, ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ