ಆ್ಯಪ್ನಗರ

ದಸರಾ ಕ್ರೀಡಾಕೂಟ ಆಯೋಜಿಸಿ ವಿಕ ಸುದ್ದಿಲೋಕ ಶಿರಸಿ: ರಾಜ್ಯದ ಪ್ರತಿಷ್ಠಿ

ಶಿರಸಿ : ರಾಜ್ಯದ ಪ್ರತಿಷ್ಠಿತ ದಸರಾ ಕ್ರೀಡಾಕೂಟದ ಸ್ಪರ್ಧೆ ಆಯೋಜನೆಯಲ್ಲಿಜಿಲ್ಲಾಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ಲಕ್ಷತ್ರ್ಯ ಭಾವನೆ ತೋರಬಾರದು. ಕ್ರೀಡಾಪಟುಗಳ ಮೌಲ್ಯ ಎತ್ತಿ ಹಿಡಿಯುವ ದಿಶೆಯಲ್ಲಿಪ್ರಸಕ್ತ ವರ್ಷದ ಕ್ರೀಡಾಕೂಟ ನಿಗದಿತ ವೇಳಾಪಟ್ಟಿ ಅನ್ವಯ ಸಂಘಟಿಸಬೇಕೆಂದು ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.

Vijaya Karnataka 5 Sep 2019, 5:00 am
ಶಿರಸಿ : ರಾಜ್ಯದ ಪ್ರತಿಷ್ಠಿತ ದಸರಾ ಕ್ರೀಡಾಕೂಟದ ಸ್ಪರ್ಧೆ ಆಯೋಜನೆಯಲ್ಲಿಜಿಲ್ಲಾಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಿರ್ಲಕ್ಷತ್ರ್ಯ ಭಾವನೆ ತೋರಬಾರದು. ಕ್ರೀಡಾಪಟುಗಳ ಮೌಲ್ಯ ಎತ್ತಿ ಹಿಡಿಯುವ ದಿಶೆಯಲ್ಲಿಪ್ರಸಕ್ತ ವರ್ಷದ ಕ್ರೀಡಾಕೂಟ ನಿಗದಿತ ವೇಳಾಪಟ್ಟಿ ಅನ್ವಯ ಸಂಘಟಿಸಬೇಕೆಂದು ಸ್ಪಂದನ ಸ್ಪೋರ್ಟ್ಸ್ ಅಕಾಡೆಮಿಯ ಅಧ್ಯಕ್ಷ ಎ.ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.
Vijaya Karnataka Web organize dasara games
ದಸರಾ ಕ್ರೀಡಾಕೂಟ ಆಯೋಜಿಸಿ ವಿಕ ಸುದ್ದಿಲೋಕ ಶಿರಸಿ: ರಾಜ್ಯದ ಪ್ರತಿಷ್ಠಿ


ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರು ಈಗಾಗಲೇ ವಿವಿಧ ಹಂತದ ಕ್ರೀಡಾಕೂಟಕ್ಕೆ ನಿಗದಿಗೊಳಿಸಿದಂತೆ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.10ರ ಒಳಗೆ, ಜಿಲ್ಲಾಮಟ್ಟದ ಕ್ರೀಡಾಕೂಟ ಸೆ.16, ವಿಭಾಗೀಯ ಮಟ್ಟದ ಕ್ರೀಡಾಕೂಟ ಸೆ.22ಕ್ಕೆ ನಡೆಯಬೇಕಾಗಿದೆ. ರಾಜ್ಯ ಮಟ್ಟದ ದಸರಾ ಕ್ರೀಡಾಕೂಟವು ಸೆ.29ರಿಂದ ಅಕ್ಟೋಬರ್‌ 6ರ ವರೆಗೆ ಮೈಸೂರಿನ ಚಾಮುಂಡಿ ವಿಹಾರದಲ್ಲಿಸಂಘಟಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಿದಾಗ್ಯೂ ಜಿಲ್ಲೆಯ ಕ್ರೀಡಾ ಇಲಾಖೆಯು ಇಲ್ಲಿಯವರೆಗೆ ತಾಲೂಕು ಮತ್ತು ಜಿಲ್ಲಾಮಟ್ಟದ ಕ್ರೀಡಾಕೂಟದ ದಿನಾಂಕವನ್ನು ಪ್ರಕಟಿಸದೇ ಇರುವುದು ವಿಷಾದಕರ ಎಂದು ಆಕ್ಷೇಪಿಸಿದ್ದಾರೆ.

ದಸರಾ ಕ್ರೀಡಾಕೂಟ ಸಂಘಟಿಸುವಲ್ಲಿಕ್ರೀಡಾ ಇಲಾಖೆಯು ಸಮರ್ಪಕವಾಗಿ ಯೋಗ್ಯ ಕ್ರೀಡಾಂಗಣದಲ್ಲಿಸಂಘಟಿಸಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ